ಗುರುವಿನೊಡನೆ ದೇವರಡಿಗೆ : ೧೦೧. ಪಾಶ್ಚಾತ್ಯ ವಿಜ್ಞಾನ ಮತ್ತು ನೈಜಸುಖ
Friday, July 27th, 2012ಬೇಲೂರು ಮಠ ಸೋಮವಾರ, ಮೇ ೩೧, ೧೯೩೨ ಪಾಶ್ಚಾತ್ಯ ದೇಶಗಳಲ್ಲಿ ವಿಜ್ಞಾನದ ಉನ್ನತಿಯ ಫಲವಾಗಿ, ಅದರ ಜೊತೆ ಜೊತೆಗೇ, ಮಾನವನ ದೈನಂದಿನ ಜೀವನದಲ್ಲಿ ಸುಖಸ್ವಾಚ್ಛಂದ್ಯ ಮತ್ತು ಆರಾಮದ ವ್ಯವಸ್ಥೆ ಹಚ್ಚಿರುವುದೆಂದೂ, ಆ ದೃಷ್ಟಿಯಿಂದ ನೋಡಿದರೆ ಭಾರತೀಯರ ಬದುಕಿಗಿಂತಲೂ ಪಾಶ್ಚಾತ್ಯರು ಬದುಕಿನಲ್ಲಿ ಹೆಚ್ಚು ಸುಖಿಗಳಾಗಿರುವರೆಂದೂ ಮಾತು ಬಂದಾಗ ಮಹಾಪುರುಷಜಿ ಹೇಳಿದರು: “ ಆ ಎಲ್ಲ ಸುಖವೂ ಎಂಥಾದ್ದು? ಕ್ಷಣಿಕ ಸುಖ. ಅದರಲ್ಲೇನಿದೆ? ಅವರು ಭಗವದಾನಂದದ ಅಸ್ವಾದವನ್ನು ಯಾವಾಗಲೂ ಸವಿದಿಲ್ಲವಾದ್ದರಿಂದಲೆ ಈ ಕ್ಷಣಿಕ ಆನಂದದಿಂದ ಉನ್ಮತ್ತರಾಗಿದ್ದಾರೆ. ಅಯ್ಯಾ, ಯಾರು [...]



