﻿<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಕಣಜ</title>
	<atom:link href="http://kanaja.in/feed/" rel="self" type="application/rss+xml" />
	<link>http://kanaja.in</link>
	<description>ಅಂತರಜಾಲ ಕನ್ನಡ ಜ್ಞಾನಕೋಶ</description>
	<lastBuildDate>Thu, 04 Apr 2013 09:44:12 +0000</lastBuildDate>
	<language>en-US</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
	<generator>http://wordpress.org/?v=3.4.2</generator>
		<item>
		<title>ಏಣಗಿ ಬಾಳಪ್ಪ</title>
		<link>http://kanaja.in/%e0%b2%8f%e0%b2%a3%e0%b2%97%e0%b2%bf-%e0%b2%ac%e0%b2%be%e0%b2%b3%e0%b2%aa%e0%b3%8d%e0%b2%aa/</link>
		<comments>http://kanaja.in/%e0%b2%8f%e0%b2%a3%e0%b2%97%e0%b2%bf-%e0%b2%ac%e0%b2%be%e0%b2%b3%e0%b2%aa%e0%b3%8d%e0%b2%aa/#comments</comments>
		<pubDate>Thu, 04 Apr 2013 09:44:12 +0000</pubDate>
		<dc:creator>kanaja</dc:creator>
				<category><![CDATA[ಧ್ವನಿ - ಚಿತ್ರ]]></category>

		<guid isPermaLink="false">http://kanaja.in/?p=106354</guid>
		<description><![CDATA[ರಂಗಗೀತೆಗಳ ಸರದಾರ, ಹಲವು ನಾಟಕಗಳ ಸೂತ್ರದಾರ ಸ್ತ್ರಿ ಪಾತ್ರದ ಮೂಲಕವೇ ಜನಪ್ರಿಯತೆ ಗಳಿಸಿದ ಕಲಾವಿದ ಅಭಿನಯವೇ ಉಸಿರು, ರಂಗಭೂಮಿಯೇ ಬದುಕು ಏಣಗಿ ಬಾಳಪ್ಪನವರ ಜೀವನಯಾನವೇ ಭಿನ್ನ ವಿಭಿನ್ನ ಅಭಿನವ ಬಸವಣ್ಣನ ಬಣ್ಣದ ಬದುಕಿನ ಕಥೆ ಇಲ್ಲಿದೆ.. *Video: ದೇ ಜ ಗೌ]]></description>
			<content:encoded><![CDATA[<p>ರಂಗಗೀತೆಗಳ ಸರದಾರ, ಹಲವು ನಾಟಕಗಳ ಸೂತ್ರದಾರ<br />
ಸ್ತ್ರಿ ಪಾತ್ರದ ಮೂಲಕವೇ ಜನಪ್ರಿಯತೆ ಗಳಿಸಿದ ಕಲಾವಿದ<br />
ಅಭಿನಯವೇ ಉಸಿರು, ರಂಗಭೂಮಿಯೇ ಬದುಕು<br />
ಏಣಗಿ ಬಾಳಪ್ಪನವರ ಜೀವನಯಾನವೇ ಭಿನ್ನ ವಿಭಿನ್ನ<br />
ಅಭಿನವ ಬಸವಣ್ಣನ ಬಣ್ಣದ ಬದುಕಿನ ಕಥೆ ಇಲ್ಲಿದೆ..</p>
<p>
				<script type='text/javascript'>
				if (typeof jQuery == 'undefined') { document.write('<script type="text/javascript" src="http://kanaja.in/wp-content/plugins/hana-flv-player/mediaelement/build/jquery.js"><\/script>'); }	
				</script>
<style>.mejs-inner img { max-width:100%; max-height:100%; margin:0 ; padding:0 } 
				.mejs-overlay-button, .mejs-overlay-loading  {display:none;}</style>

				<script type='text/javascript' src='http://kanaja.in/wp-content/plugins/hana-flv-player/mediaelement/build/mediaelement-and-player.min.js'></script>
<link rel='stylesheet' href='http://kanaja.in/wp-content/plugins/hana-flv-player/mediaelement/build/mediaelementplayer.mod.css' />
				
<div style='padding:0;margin:0; border:0;'><video  id='hana_flv_media_1'  src='http://kanaja.in/videos/enagibalappa1.flv' width='320' height='240'
	preload='none'     controls='controls' >	<object width="320" height="240" type="application/x-shockwave-flash" data="http://kanaja.in/wp-content/plugins/hana-flv-player/mediaelement/build/flashmediaelement.swf"><param name="movie" value="http://kanaja.in/wp-content/plugins/hana-flv-player/mediaelement/build/flashmediaelement.swf" /><param name="flashvars" value="controls=true&amp;file=http://kanaja.in/videos/enagibalappa1.flv&amp;poster=" />*Video:ದೇ ಜ ಗೌ
	</object></video></div>

<script type='text/javascript'>

				jQuery('#hana_flv_media_1').mediaelementplayer({ pauseOtherPlayers: false , pluginType:'youtube'   });
				</script></p>
]]></content:encoded>
			<wfw:commentRss>http://kanaja.in/%e0%b2%8f%e0%b2%a3%e0%b2%97%e0%b2%bf-%e0%b2%ac%e0%b2%be%e0%b2%b3%e0%b2%aa%e0%b3%8d%e0%b2%aa/feed/</wfw:commentRss>
		<slash:comments>0</slash:comments>
<enclosure url="http://kanaja.in/videos/enagibalappa1.flv" length="274051072" type="video/x-flv" />
		</item>
		<item>
		<title>ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್</title>
		<link>http://kanaja.in/%e0%b2%ae%e0%b2%b9%e0%b2%be%e0%b2%b0%e0%b2%be%e0%b2%9c-%e0%b2%b6%e0%b3%8d%e0%b2%b0%e0%b3%80-%e0%b2%a8%e0%b2%be%e0%b2%b2%e0%b3%8d%e0%b2%b5%e0%b2%a1%e0%b2%bf-%e0%b2%95%e0%b3%83%e0%b2%b7%e0%b3%8d/</link>
		<comments>http://kanaja.in/%e0%b2%ae%e0%b2%b9%e0%b2%be%e0%b2%b0%e0%b2%be%e0%b2%9c-%e0%b2%b6%e0%b3%8d%e0%b2%b0%e0%b3%80-%e0%b2%a8%e0%b2%be%e0%b2%b2%e0%b3%8d%e0%b2%b5%e0%b2%a1%e0%b2%bf-%e0%b2%95%e0%b3%83%e0%b2%b7%e0%b3%8d/#comments</comments>
		<pubDate>Tue, 02 Apr 2013 11:03:04 +0000</pubDate>
		<dc:creator>kanaja</dc:creator>
				<category><![CDATA[ಧ್ವನಿ - ಚಿತ್ರ]]></category>

		<guid isPermaLink="false">http://kanaja.in/?p=106359</guid>
		<description><![CDATA[ಸಮಾನತೆಯ ಮಂತ್ರ ಸಾರಿದ ಮಾನವತಾವಾದಿ ಶಿಕ್ಷಣಕ್ಕೆ ಒತ್ತು ನೀಡಿದ ದಾರ್ಶನಿಕ ರಾಜರ್ಷಿ ರಾಮರಾಜ್ಯದ ಕನಸಿನ ಸಾಕಾರಕ್ಕಾಗಿ ಸರ್ವತೋಮುಖ ಅಭಿವೃದ್ಧಿ ರೈತರ ಬೆನ್ನೆಲುಬಾಗಿ ನಿಂತ ಒಡೆಯರ್, ಹಸಿರು ಕ್ರಾಂತಿಯ ರೂವಾರಿ ಯದುವಂಶದ ದೊರೆ ವೈಜ್ಞಾನಿಕ ಕ್ರಾಂತಿಯ ಹರಿಕಾರ ದೂರದೃಷ್ಟಿಯ ಮೈಸೂರು ಸಂಸ್ಥಾನದ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ವ್ಯಕ್ತಿ ಚಿತ್ರಣ ಕಣಜದಲ್ಲಿ. *Video: ದೇ ಜ ಗೌ]]></description>
			<content:encoded><![CDATA[<p>ಸಮಾನತೆಯ ಮಂತ್ರ ಸಾರಿದ ಮಾನವತಾವಾದಿ<br />
ಶಿಕ್ಷಣಕ್ಕೆ ಒತ್ತು ನೀಡಿದ ದಾರ್ಶನಿಕ ರಾಜರ್ಷಿ<br />
ರಾಮರಾಜ್ಯದ ಕನಸಿನ ಸಾಕಾರಕ್ಕಾಗಿ ಸರ್ವತೋಮುಖ ಅಭಿವೃದ್ಧಿ<br />
ರೈತರ ಬೆನ್ನೆಲುಬಾಗಿ ನಿಂತ ಒಡೆಯರ್, ಹಸಿರು ಕ್ರಾಂತಿಯ ರೂವಾರಿ<br />
ಯದುವಂಶದ ದೊರೆ ವೈಜ್ಞಾನಿಕ ಕ್ರಾಂತಿಯ ಹರಿಕಾರ<br />
ದೂರದೃಷ್ಟಿಯ ಮೈಸೂರು ಸಂಸ್ಥಾನದ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ವ್ಯಕ್ತಿ ಚಿತ್ರಣ ಕಣಜದಲ್ಲಿ.</p>
<p>
<div style='padding:0;margin:0; border:0;'><video  id='hana_flv_media_2'  src='http://kanaja.in/videos/krishnaraja-odeyar.flv' width='320' height='240'
	preload='none'     controls='controls' >	<object width="320" height="240" type="application/x-shockwave-flash" data="http://kanaja.in/wp-content/plugins/hana-flv-player/mediaelement/build/flashmediaelement.swf"><param name="movie" value="http://kanaja.in/wp-content/plugins/hana-flv-player/mediaelement/build/flashmediaelement.swf" /><param name="flashvars" value="controls=true&amp;file=http://kanaja.in/videos/krishnaraja-odeyar.flv&amp;poster=" />*Video:ದೇ ಜ ಗೌ
	</object></video></div>

<script type='text/javascript'>

				jQuery('#hana_flv_media_2').mediaelementplayer({ pauseOtherPlayers: false , pluginType:'youtube'   });
				</script></p>
]]></content:encoded>
			<wfw:commentRss>http://kanaja.in/%e0%b2%ae%e0%b2%b9%e0%b2%be%e0%b2%b0%e0%b2%be%e0%b2%9c-%e0%b2%b6%e0%b3%8d%e0%b2%b0%e0%b3%80-%e0%b2%a8%e0%b2%be%e0%b2%b2%e0%b3%8d%e0%b2%b5%e0%b2%a1%e0%b2%bf-%e0%b2%95%e0%b3%83%e0%b2%b7%e0%b3%8d/feed/</wfw:commentRss>
		<slash:comments>0</slash:comments>
<enclosure url="http://kanaja.in/videos/krishnaraja-odeyar.flv" length="209489229" type="video/x-flv" />
		</item>
		<item>
		<title>ಸಾಂಬಶಿವ ಪ್ರಹಸನ : ದೃಶ್ಯ-೧೩</title>
		<link>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%a7%e0%b3%a9/</link>
		<comments>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%a7%e0%b3%a9/#comments</comments>
		<pubDate>Fri, 22 Mar 2013 00:37:15 +0000</pubDate>
		<dc:creator>kanaja</dc:creator>
				<category><![CDATA[ಕನ್ನಡ]]></category>
		<category><![CDATA[ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ]]></category>
		<category><![CDATA[ಡಾ. ಚಂದ್ರಶೇಖರ ಕಂಬಾರ]]></category>

		<guid isPermaLink="false">http://kanaja.in/?p=78474</guid>
		<description><![CDATA[(ರಂಗದ ಇನ್ನೊಂದು ಕಡೆಗೆ ರಾಜ, ಹೆಣ್ಣು ವೇಷದ ಕಾರಭಾರಿ ಹಾಗೂ ಸಾಂಬ ಬರುವರು. ರಾಜನಿಗೆ ಆಗಲೇ ಅರ್ಧ ಮೇಕಪ್ ಆಗಿದೆ. ಅವನನ್ನು ಕತ್ತೆ ಮಾಡೋದಕ್ಕೆ ಮೇಕಪ್ಪಿನಿಂದ ಏನು ಸಾಧ್ಯವೋ ಅದನ್ನೆಲ್ಲಾ ಮಾಡಿದ್ದಾರೆ. ಬಾಲ ಕಟ್ಟಿದ್ದಾರೆ. ಉಳಿದರ್ಧ ಇಲ್ಲೇ ಪೂರ್ತಿ ಮಾಡಲು ಬಂದಿದ್ದಾರೆ. ) ರಾಜ : ಇಲ್ಲಿಯ ಸೈನ್ಯದ ತುಕಡಿ ಬೇರೆ ದಕಡೆ ಕಳಿಸಿದೆಯಾ? ಕಾರಭಾರಿ : ಓಹೋ. ರಾಜ : ಡಿಂಗ್‌ಡಾಂಗ್? ಕಾರಭಾರಿ : ಬಿಚ್ಚಿ ಊರ ಹೊರಗೆ ಓಡಿಸಿದೆ. ರಾಜ : ಕಾವಲುಗಾರರು? ಕಾರಭಾರಿ [...]]]></description>
			<content:encoded><![CDATA[<p><em>(</em><em>ರಂಗದ</em><em> </em><em>ಇನ್ನೊಂದು</em><em> </em><em>ಕಡೆಗೆ</em><em> </em><em>ರಾಜ</em><em>, </em><em>ಹೆಣ್ಣು</em><em> </em><em>ವೇಷದ</em><em> </em><em>ಕಾರಭಾರಿ</em><em> </em><em>ಹಾಗೂ</em><em> </em><em>ಸಾಂಬ</em><em> </em><em>ಬರುವರು</em><em>. </em><em>ರಾಜನಿಗೆ</em><em> </em><em>ಆಗಲೇ</em><em> </em><em>ಅರ್ಧ</em><em> </em><em>ಮೇಕಪ್</em><em> </em><em>ಆಗಿದೆ</em><em>. </em><em>ಅವನನ್ನು</em><em> </em><em>ಕತ್ತೆ</em><em> </em><em>ಮಾಡೋದಕ್ಕೆ</em><em> </em><em>ಮೇಕಪ್ಪಿನಿಂದ</em><em> </em><em>ಏನು</em><em> </em><em>ಸಾಧ್ಯವೋ</em><em> </em><em>ಅದನ್ನೆಲ್ಲಾ</em><em> </em><em>ಮಾಡಿದ್ದಾರೆ</em><em>. </em><em>ಬಾಲ</em><em> </em><em>ಕಟ್ಟಿದ್ದಾರೆ</em><em>. </em><em>ಉಳಿದರ್ಧ</em><em> </em><em>ಇಲ್ಲೇ</em><em> </em><em>ಪೂರ್ತಿ</em><em> </em><em>ಮಾಡಲು</em><em> </em><em>ಬಂದಿದ್ದಾರೆ</em><em>. )<span id="more-78474"></span></em><em></em></p>
<p><em>ರಾಜ :</em> ಇಲ್ಲಿಯ ಸೈನ್ಯದ ತುಕಡಿ ಬೇರೆ ದಕಡೆ ಕಳಿಸಿದೆಯಾ?</p>
<p>ಕಾರಭಾರಿ : ಓಹೋ.</p>
<p>ರಾಜ : ಡಿಂಗ್‌ಡಾಂಗ್?</p>
<p>ಕಾರಭಾರಿ : ಬಿಚ್ಚಿ ಊರ ಹೊರಗೆ ಓಡಿಸಿದೆ.</p>
<p>ರಾಜ : ಕಾವಲುಗಾರರು?</p>
<p>ಕಾರಭಾರಿ : ಅವರನ್ನು ಬೇರೆ ಕಡೆಗೆ ಕಳಿಸಿದ್ದೇನೆ. ಆಸುಪಾಸು ಯಾರೂ ಇಲ್ಲ ಪ್ರಭು. ಗಾಬರಿಯಾಗಿ ಗಜನಿಂಬೆ ಕೂಗಿದರೂ ಯಾರೂ ಕೇಳೋದಿಲ್ಲ.</p>
<p>ರಾಜ : ಗಾಬರಿಯಾಗಿ? ಯಾಕೆ ನಾನು ಡಿಂಗ್‌ಡಾಂಗ್ ಥರ ಕಾಣಿಸೋದಿಲ್ವಾ?</p>
<p>ಸಾಂಬ : ಓಹೋ. ಪೂರ್ತಿ ಡ್ರೆಸ್ ಹಾಕ್ಕೊಳಿ ಪ್ರಭು. ಡಿಂಗ್‌ಡಾಂಗೇನು, ಅವನಜ್ಜನ ಥರಾ ಕಾಣತೀರಿ.</p>
<p>ರಾಜ : ಅವನಜ್ಜ ಬೇಡ. ಅವನ ಹಾಗೆ ಕಾಣಿಸೋ ಹಾಗೆ ಮಾಡು ಸಾಕು.</p>
<p>ಸಾಂಬ : ಹಾಗಿದ್ದರೆ ಬನ್ನಿ.<br />
<em>(</em><em>ರಾಜನ</em><em> </em><em>ಒಂದೊಂದೇ</em><em> </em><em>ಬಟ್ಟೆ</em><em> </em><em>ಕಳಚಿ</em><em> </em><em>ಬೆತ್ತಲೆ</em><em> </em><em>ಮಾಡಿ</em><em> </em><em>ಅವನಿಗೆ</em><em> </em><em>ಕತ್ತೆ</em><em> </em><em>ಉಡುಪನ್ನು</em><em> </em><em>ಹಾಕುವನು</em><em>)</em><em></em></p>
<p>ರಾಜ : ಸ್ವಲ್ಪ ಬಾಲ ಬಾಚ್ರಯ್ಯ <em>(</em><em>ಬಾಚುವರು</em><em>.)</em><em><br />
</em>ಕತ್ತಿನ ಕೂದಲು ಬಾಚ್ರಯ್ಯ <em>(</em><em>ಅದನ್ನೂ</em><em> </em><em>ಬಾಚುವರು</em><em>)</em><em><br />
</em>ಕನ್ನಡಿ <em>(</em><em>ಕೊಡುವರು</em><em>, </em><em>ನೊಡಿಕೊಂಡು</em><em>)</em><em><br />
</em>ಸೆಂಟ್ <em>(</em><em>ಹಚ್ಚುವರು</em><em>)</em><em></em></p>
<p>ಸಾಂಬ : ಎಷ್ಟಂದರೂ ರಾಜಕಳೆ ಮುಚ್ಚೋದಕ್ಕೆ ಆಗೋದಿಲ್ಲ ನನ್ಮಗಂದು. ನೀವು ಪುಟ್ಟದ ಕತ್ತೆ ಪ್ರಭು.</p>
<p>ರಾಜ : ಗಜನಿಂಬೆ ಏನಂದುಕೊಳ್ತಾಳೊ.</p>
<p>ಸಾಂಬ : ಇವೊತ್ತು ಜಾಸ್ತಿ ಪ್ರೀತಿ ಮಾಡತಾಳೆ.</p>
<p>ಕಾರಭಾರಿ : ಪ್ರಭು ಇದೇ ಗಜನಿಂಬೆ ಬೆಡ್ ರೂಂ.</p>
<p>ಸಾಂಬ : ದೀಪ ಇನ್ನೂ ಉರೀತಿದೆ. ಗಜನಿಂಬೆ ಕಾಯ್ತಿದಾಳೆ ಪ್ರಭು.</p>
<p>ರಾಜ : ನನಗಿನ್ನು ಪ್ರಭು ಅನ್ನಬೇಡವೋ, ಡಿಂಗ್‌ಡಾಂಗನ್ನು, ಎಲ್ಲಾ ಸರಿಯಾಗಿದೆಯಾ ಅಂತ ನೋಡ್ರಯ್ಯ.</p>
<p>ಸಾಂಬ : ಪಸಂದಾಗಿದೆ.</p>
<p>ರಾಜ : ನೀನು ಅಲ್ಲಿ ಹೋಗಿ ಹಾಡು ಸುರು ಮಾಡು. ಹ್ಯಾಂಕರಿಸಲಾ? ಈ ಹಾಹಾ&#8230;. ಇರು ಇರು ನನ್ನ ಕೈ ಬೆರಳು ಕಾಣಿಸುತ್ತಲ್ಲಯ್ಯ?</p>
<p>ಸಾಂಬ : ನೀವು ಕೈ ಊರಿದರೆ ಹುಲ್ಲಿನಲ್ಲಿ ಕೈ ಬೆರಳು ಮುಚ್ಚುತ್ತೆ ಪ್ರಭು.</p>
<p>ರಾಜ : ಹೌದಲ್ಲವಾ? ನಾ ಈಗ ಹುಲ್ಲು ಮೇಯಬೇಕಾ?</p>
<p>ಸಾಂಬ : ಈಗ ಬೇಡ ಆಮೇಲೆ. ಡಾನ್ಸ್ ಸುರುಮಾಡಿ.</p>
<p>ರಾಜ : ಈ ಹಾಹಾಹಾ&#8230;. ಊಹೂ ಹೂ ಹಾ ಹಾ&#8230;. ಹ್ಯಾಗಿತ್ತು?</p>
<p>ಕಾರಭಾರಿ : ಅಬ್ಬಾ ನನಗೆ ರೋಮಾಂಚನವಾಯಿತು.</p>
<p>ಸಾಂಬ : ಏನಂದಿ?</p>
<p>ಕಾರಭಾರಿ : ಛಳಿ ಆಗತಾ ಇದೆ.</p>
<p>ರಾಜ : ನಾನು ಹ್ಯಾಂಕರಿಸಿದ್ದು ಹ್ಯಾಗಿತ್ರಯ್ಯಾ ಅಂದ್ರೆ&#8230;.</p>
<p>ಸಾಂಬ : ಸರಿಹೊಗಲಿಲ್ಲ. ಇನ್ನಷ್ಟು ದನಿ ಏರಿಸಿ.</p>
<p>ರಾಜ : ಈ ಹಾಹಾಹಾ&#8230;. ಈ ಹಾಹಾಹಾ</p>
<p>ಸಾಂಬ : ಸೊಂಟ ಸೆಟೆಯಬೇಕು. ಎಲ್ಲಿ ಸ್ವಲ್ಪ ಕುಣೀರಿ ನೋಡೋಣ<em>. (</em><em>ರಾಜ</em><em> </em><em>ಕುಣಿಯುವನು</em><em>)</em> ಹ್ಯಾಂಕರಿಸಿಕೊಂಡು ಕುಣಿಯಬೇಕು<em>. (</em><em>ರಾಜ</em><em> </em><em>ಹಾಗೇ</em><em> </em><em>ಮಾಡುವನು</em><em>) </em>ಇದು ನೋಡಪ್ಪಾ ಡಿಂಗ್‌ಡಾಂಗ್ ಅಂದರೆ. ಏ ನೀ ಹಾಡು.</p>
<p>ಕಾರಭಾರಿ :<strong> </strong><strong>ಛಳಿ</strong><strong> </strong><strong>ಛಳಿ</strong><strong> </strong><strong>ತಾಳೆನು</strong><strong> </strong><strong>ಈ</strong><strong> </strong><strong>ಛಳಿಯಾ</strong><strong> </strong><strong>ಈಹಾ</strong></p>
<p>ಶಿವ : ಓಹೋ ಸುರುವಾಯ್ತು ಆಟ. ಈ ಧೋಬಿ ಬರಲಿಲ್ವೆ.</p>
<p>ರಾಜ : ಈ ಹಾಹಾಹಾ&#8230;. ಈ ಹಾಹಾಹ.<br />
<em>(</em><em>ಎನ್ನುತ್ತಾ</em><em> </em><em>ಮುಂದೆ</em><em> </em><em>ಬರುತ್ತಾನೆ</em><em>. </em><em>ಶಿವ</em><em> </em><em>ಡಿಂಗ್‌ಡಾಂಗನ್ನು</em><em> </em><em>ಹುಡುಕುತ್ತಿರುವವನಂತೆ</em><em>)</em></p>
<p>ಶಿವ : ಯಾರದು,? ನನ್ನ ಮಹಾಸ್ವಾಮಿಗಳಾದ ಡಿಂಗ್‌ಡಾಂಗ್ ಸಾಹೇಬರೇನು?<em> (</em><em>ರಾಜ</em><em> </em><em>ಸುಮ್ಮನಿರುವನು</em><em>)</em><em></em></p>
<p><em>ಶಿವ :</em> ಆಗಿರಲಾರದು. ಡಿಂಗ್‌ಡಾಂಗ್ ಸಾಹೇಬರಾಗಿದ್ದರೆ ನನ್ನನ್ನು ಕಂಡ ತಕ್ಷಣವೇ ಪ್ರೀತಿಯಿಂದ ಹ್ಯಾಂಕರಿಸುತ್ತಿದ್ದರು.</p>
<p>ರಾಜ : ಈ ಹಾಹಹ&#8230;. ಈ ಹಾಹಹ&#8230;. ಈ ಹಾಹಹ&#8230;.</p>
<p>ಶಿವ : ಡಿಂಗ್‌ಡಾಂಗ್  ಸಾಹೇಬರಾಗಿದ್ದರೆ, ನನ್ನನ್ನು ಕಂಡ ತಕ್ಷಣವೇ ಬಾಲ ನಿಗುರಿಸಿ ಅಲುಗುತ್ತಿದ್ದರು <em>(</em><em>ರಾಜ</em><em> </em><em>ಹಾಗೆ</em><em> </em><em>ಮಡುವನು</em><em>)</em><em></em></p>
<p><em>ಶಿವ :</em> ಎಲ್ಲಿ ಪರಿಮಳದ ಸುವಾಸನೆ ಇಲ್ಲವಲ್ಲ. <em>(</em><em>ರಾಜ</em><em> </em><em>ಎರಡೂ</em><em> </em><em>ಕೈ</em><em> </em><em>ಎತ್ತಿ</em><em> </em><em>ಬಗಲು</em><em> </em><em>ತೋರಿಸುವನು</em><em>)</em><em></em></p>
<p><em>ಶಿವ :</em> ಯಾಕಿವೊತ್ತು ಆನಂದದಿಂದ ಕುಣಿದಾಡುತ್ತಿಲ್ಲವಲ್ಲ? <em>(</em><em>ರಾಜ</em><em> </em><em>ಹಾಗೇ</em><em> </em><em>ಮಾಡುವನು</em><em>)</em><em></em></p>
<p><em>ಶಿವ :</em> ಆಹಾ ಇವರಪ್ಪ ನನ್ನ ಸ್ವಾಮಿ ಡಿಂಗ್‌ಡಾಂಗ್  ಸಾಹೇಬರು. ಇದರಲ್ಲಿ ಸಂಶಯವೇ ಇಲ್ಲ. ನಾನು ತಮ್ಮ ನಮ್ರ ಸೇವಕ ಶಿವಣ್ಣ ಸ್ವಾಮಿ.</p>
<p>ರಾಜ : ಈ ಹಾಹಹ&#8230;.</p>
<p>ಶಿವ : ಮಹಾಸ್ವಾಮಿ ಸೇವಕನ ಕಣ್ಣು ತಪ್ಪಿಸಿ ಕೊಟ್ಟಿಗೆಯಿಮದ ಕನ್ಮರೆಯಾಗುವುದು ತಮಗೆ ಶೋಭಿಸುವುದಿಲ್ಲವೆಂದು ಹೇಳಲೇಬೇಕಾಗಿದೆ. <em>(</em><em>ರಾಜ</em><em> </em><em>ಸಾರಿ</em><em> </em><em>ಎಂಬಂತೆ</em><em> </em><em>ತಲೆ</em><em> </em><em>ಕೆಳಗೆ</em><em> </em><em>ಹಾಕುವನು</em><em>) </em><em></em></p>
<p><em>ಶಿವ :</em> ಇಡೀ ಊರಿನ ತುಂಬಾ ತಮ್ಮನ್ನು ಹುಡುಕಿ ಬಂದೆ ಸ್ವಾಮಿ ಇಗೊ ತಗೋಳ್ಳಿ, ನಿಮ್ಮ ಪ್ರೀತಿಯ ಈರುಳ್ಳಿ ಮತ್ತು ಮೆಣಸಿನ ಕಾಯಿ ತಿನ್ನಿ. <em>(</em><em>ರಾಜ</em><em> </em><em>ಗಾಬರಿಯಿಂದ</em><em> </em><em>ಶಿವನ</em><em> </em><em>ಕಡೆಗೆ</em><em> </em><em>ನೋಡುವನು</em><em>)</em><em></em></p>
<p><em>ಶಿವ :</em> ಇದೇನು ಪ್ರೀತಿ ಮಾಡೋದಕ್ಕೆ ಹೊರಟಾಗೊಮ್ಮೆ ಶಕ್ತಿ ಬರತ್ತದೆ ಅಂತ ತಾವು ಈರುಳ್ಳಿ ಮೆಣಸಿನಕಾಯಿ ತಿನ್ನುತ್ತಿರಲಿಲ್ಲವೇ ಸ್ವಾಮಿ? ಅದೇಕೆ ಈವೊತ್ತು ತಿನ್ನುತ್ತಿಲ್ಲ? ಅಥವಾ ಇದು ನಮ್ಮ ಡಿಂಗ್‌ಡಾಂಗ್ ಸಾಹೇಬರು ಆಗಿರಲಿಕ್ಕಿಲ್ಲವೆ?<em> (</em><em>ರಾಜ</em><em> </em><em>ಗಾಬರಿಯಿಂದ</em><em> </em><em>ತಿಂದು</em><em> </em><em>ಬಾಯಿಗೆ</em><em> </em><em>ಖಾರ</em><em> </em><em>ಹತ್ತಿ</em><em> </em><em>ಒದ್ದಾಡುವನು</em><em>)</em></p>
<p>ಶಿವ : ಇದಪ್ಪ ನಮ್ಮ ಯಜಮಾನರೂ ಅಂದರೆ. ಈರುಳ್ಳಿ ಮೆಣಸಿನ ಕಯಿ ಹ್ಯಾಗಿತ್ತು ಪ್ರಭು.</p>
<p>ರಾಜ : ಈ ಹಾಹಹ&#8230;.</p>
<p>ಶಿವ : ಇದೇನು ಮಹಾಸ್ವಾಮಿಗಳು ಇಷ್ಟೊತ್ತಿನಲ್ಲಿ ತಮ್ಮ ಮುದ್ದಿನ ಮಡದಿಯ ಜೊತೆ ಮಲಗಿರಬೇಕಿತ್ತಲ್ಲ.</p>
<p>ರಾಜ : <em>(</em><em>ಹೌದೆಂಬಂತೆ</em><em> </em><em>ಕತ್ತು</em><em> </em><em>ಹಾಕಿ</em><em>) </em>ಈ ಹಾಹಹ&#8230;.</p>
<p>ಶಿವ : ಮಹಾಸ್ವಾಮಿಗಳಿಗೆ ಯಾಕೆ ನಿದ್ದೆ ಬರುತ್ತಿಲ್ಲ? ಓಹೋ ತಿಳಿಯಿತು. ಈ ಸೇವಕನಿಗೆ ತಮ್ಮ ಗುಟ್ಟುಗಳೆಲ್ಲಾ ಗೊತ್ತು ಸ್ವಾಮಿ. ಗಾಬರಿಯಾಗಬೇಡಿ. ನಿಮ್ಮ ರಾಣಿಯವರಿಗೆ ನಾನು ಹೇಳೋದಿಲ್ಲ. ತಾವು ತಪ್ಪಿಸಿಕೊಂಡು ಊರಲ್ಲಿ ಹೋದದ್ದು ಆ ಧೋಬಿ ಮನೆಯ ರಾಧೆಗಾಗಿ ಅಲ್ಲವೆ ಸ್ವಾಮಿ?</p>
<p>ರಾಜ :<em> (</em><em>ಹೌದೆಂಬಂತೆ</em><em>) </em>ಈಹಾ.</p>
<p>ಶಿವ : ಅವಳು ಅಷ್ಟೊಂದು ಚೆಲುವೆಯಾ ಸ್ವಾಮಿ?</p>
<p>ರಾಜ :<em> (</em><em>ನಾಚಿಕೊಂಡಂತೆ</em><em>) </em>ಈ ಹೀ ಹೀ ಹೀ&#8230;.</p>
<p>ಶಿವ : ತಾವು ಆ ಕಡೆ ಹೋದಾಗ ರಾಧೆ ಈ ಕಡೆ ಬಂದಿದ್ದಳು ಸ್ವಾಮಿ.</p>
<p>ರಾಜ : <em>(</em><em>ನಾಚಿ</em><em>) </em>ಹಿ ಹಿ ಹಿ&#8230;.</p>
<p>ಶಿವ : ತಮ್ಮ ಆಸೆ ಈಡೇರಿಸಲಿಕ್ಕೆ ಈ ನಮ್ರ ಸೇವಕ ಇಲ್ಲವೇ ಸ್ವಾಮಿ? ಎಲ್ಲಿ ರಾಧಾ ಅಂತ ಒಂದು ಭಾರಿ ಹೇಂಕರಿಸಿ ನೋಡೋಣ.</p>
<p>ರಾಜ : ಹಿ ಹಾ ಹಾ ಹಾ ಹಾ<br />
<em>(</em><em>ಇನ್ನೊಂದು</em><em> </em><em>ಕಡೆಯಿಂದ</em><em> </em><em>ರಾಧೆ</em><em> </em><em>ಹೇಂಕರಿಸುವುದು</em><em>. </em><em>ರಾಜ</em><em> </em><em>ಬೆರಗಾಗಿ</em><em> </em><em>ಶಿವನನ್ನು</em><em> </em><em>ನೋಡುತ್ತಿರುವಂತೆ</em><em>, </em><em>ಕೈಯಲ್ಲಿ</em><em> </em><em>ಹಗ್ಗ</em><em> </em><em>ಮಚ್ಚು</em><em> </em><em>ಹಿಡಿದುಕೊಂದು</em><em> </em><em>ರಾಧೆಯನ್ನು</em><em> </em><em>ತರುವರು</em><em>. </em><em>ಬೀರಯ್ಯ</em><em> </em><em>ಈಗ</em><em> </em><em>ನೇತೃತ್ವ</em><em> </em><em>ವಹಿಸಿದ್ದಾನೆ</em><em>.)</em></p>
<p>ಶಿವ : ತಮಗಾಗಿ ರಾಧೆಯನ್ನು ತಂದಿದ್ದಾರೆ ಸ್ವಾಮಿ.<br />
<em>(</em><em>ರಾಜ</em><em> </em><em>ತಪ್ಪಿಸಿಕೊಂಡು</em><em> </em><em>ಓಡಲೆತ್ನಿಸುವನು</em><em>. </em><em>ಬೀರಯ್ಯ</em><em> </em><em>ರಾಜನ</em><em> </em><em>ಕತ್ತಿಗೆ</em><em> </em><em>ಹಗ್ಗ</em><em> </em><em>ಹಾಕಿ</em><em> </em><em>ಹಿಡಿದುಕೊಳ್ಳುವನು</em><em>)</em><em></em></p>
<p><em>ಶಿವ :</em> ಹಾಗೆಲ್ಲ ಓಡಬೇಡಿ ಸ್ವಾಮಿ. ರಾಧೆ ನಿಮ್ಮ ವಿರಹವೇದನೆಯಿಂದ ತುಂಬಾ ನೊಂದಿದ್ದಾಳೆ. ಎಲ್ಲಿ ಹಗ್ಗ ಮಚ್ಚು ತಂದಿದ್ದೀರಾ?</p>
<p>ಬೀರಯ್ಯ : ತಂದಿದ್ದೀವಿ.</p>
<p>ಶಿವ : ನೋಡಿ ಡಿಂಗ್‌ಡಾಂಗ್ ಸಾಹೇಬರು ಹತ್ತೋವಾಗ ರಾಧೆ ಬಾಲ ಮುಚ್ಕೋ ಬಾರದು ನರಳಬಾರದು, ಒದರಬಾರದು. ಹಾಗೇನಾದರೂ ಮಾಡಿದರೆ ನಿಮಗೆ ಕೊಡೋ ಹಣದಲ್ಲಿ ಮೂರನೇ ಒಂದು ಭಾಗ ಕಟ್. ಆಗಬಹುದೋ?<br />
ಧೋಬಿ : ಆಗಬಹುದು ಸ್ವಾಮಿ.</p>
<p>ಶಿವ : ಹತ್ತಿರ ಮೇಲೆ ನಮ್ಮ ಸಾಹೇಬರು ಚಿತ್ತವನ್ನು ಏಕಾಗ್ರಗೊಳಿಸಿ ತುಸು ಹೊತ್ತು ಗದ್ದ ಊರುತ್ತಾರೆ. ಆ ಸಮಯದಲ್ಲಿ ನಿಮ್ಮ ರಾಧೆ, ಅಕ್ಕಪಕ್ಕ ಹಿಂದೆ ಮುಂದೆ ಸರಿದಾಡಬಾರದು. ಸರಿದರೆ ಇನ್ನೊಂದು ಭಾಗ ಕಟ್.</p>
<p>ಬೀರಯ್ಯ : ಆಗಬಹುದು. ಅದಕ್ಕೇ ಸ್ವಾಮಿ, ಕೋಲು ಹಗ್ಗ, ಹಂಟರ‍, ಕ್ಲಬ್ಬು ಎಲ್ಲಾ ತಂದೀವಿ.</p>
<p>ಶಿವ : ನಮ್ಮ ಸಾಹೇಬರು ಮಧ್ಯೆ ಮಧ್ಯೆ ದಶವಿಧ ಚುಂಬನ ಕೊಡುತ್ತಾರೆ ಅಥವಾ ಕಚ್ಚುತ್ತಾರೆ. ನಖಾಗ್ರದಿಂದ ದಶವಿಧ ತಿವೀತಾರೆ. ಆವಾಗೆಲ್ಲ ನಿಮ್ಮ ರಾಧೆ ಸಹಕರಿಸಬೇಕು. ತಪ್ಪಿದರೆ ಹಣದ ಕೊನೆಭಾಗವೂ ಕಟ್ಟಾಗುತ್ತೆ.</p>
<p>ಬೀರಯ್ಯ : ಅವಳೇನಾರ ಅಂಗೂ ಇಂಗೂ ಮಾಡ್ಲಿ. ಅವಳನ್ನು ಇಲ್ಲೇ ಚಚ್ಚಿಹಾಕಿ ಖೈಮ ಮಾಡ್ತೀನಿ. ನೋಡಿ ಮಚ್ಚೂ ತಂದೀನಿ.</p>
<p>ಶಿವ : ರಾಧೆಗೆ ಗೊನೋರಿಯಾ ವಗೈರೆ ರೋಗ ಇಲ್ಲ ತಾನೆ?<br />
ಧೋಬಿ :  ಇಲ್ಲ ಸ್ವಾಮಿ ಡಾಕ್ಟರ‍ ಸರ್ಟಿಫಿಕೇಟ್ ಇದೆ.</p>
<p>ಶಿವ : <em>(</em><em>ರಾಜನಿಗೆ</em><em>) </em>ನಮ್ಮ ಕೆಲಸ ಮುಗೀತು ಸ್ವಾಮಿ, ಇನ್ನು ತಮ್ಮ ಕೆಲಸ.<em> (</em><em>ಈ</em><em> </em><em>ಮಧ್ಯೆ</em><em> </em><em>ರಾಜ</em><em> </em><em>ಅನೇಕ</em><em> </em><em>ಬಾರಿ</em><em> </em><em>ತಪ್ಪಿಸಿಕೊಂಡು</em><em> </em><em>ಓಡಲು</em><em> </em><em>ಪ್ರಯತ್ನಸಿದ್ದಾನೆ</em><em>. </em><em>ಇವರು</em><em> </em><em>ಬಿಟ್ಟಿಲ್ಲ</em><em>. </em><em>ಕತ್ತೆಯನ್ನಾಗಲೇ</em><em> </em><em>ಕಟ್ಟಿ</em><em> </em><em>ಹಾಕಿದ್ದಾರೆ</em><em>. </em><em>ಎಲ್ಲರೂ</em><em> </em><em>ಸುತ್ತ</em><em> </em><em>ನಿಂತು</em><em> </em><em>ಹೋಲಿ</em><em> </em><em>ಹೋಲಿ</em><em> </em><em>ಹೋಲಿ</em><em> </em><em>ಎಂದು</em><em> </em><em>ಹುರುಪು</em><em> </em><em>ಕೊಡುತ್ತಾರೆ</em><em>. </em><em>ರಾಜ</em><em> </em><em>ತಪ್ಪಿಸಿಕೊಂಡು</em><em> </em><em>ಹೊರಟಾಗೊಮ್ಮೆ</em><em> </em><em>ಅಲ್ಲಿದ್ದವರು</em><em> </em><em>ತಳ್ಳಿ</em><em> </em><em>ಕ್ರೂರವಾಗಿ</em><em> </em><em>ಹೊಡೆಯುತ್ತಾರೆ</em><em>. </em><em>ಇದು</em><em> </em><em>ಬಹಳ</em><em> </em><em>ಹೊತ್ತಿನತನಕ</em><em> </em><em>ನಡೆದು</em><em> </em><em>ರಾಜನ</em><em> </em><em>ವೇಷಭೂಷಣ</em><em> </em><em>ಹರಿದು</em><em> </em><em>ಚಿಂದಿಯಾಗಿದೆ</em><em>. </em><em>ಉಳಿದವರು</em><em>, </em><em>ವಿಜಯೋನ್ಮಾದ</em><em> </em><em>ಮತ್ತು</em><em> </em><em>ಸಂತೋಷದಿಂದ</em><em> </em><em>ಇನ್ನಷ್ಟು</em><em> </em><em>ಹಿಂಸೆ</em><em> </em><em>ಕೊಡುತ್ತಿದ್ದಾರೆ</em><em>.)</em><em><br />
</em>ಧೋಬಿ : ಅದೇನು ಹೊಸಾ ತೆರಿಗೆ ಅಂತ ತಿಳಿದೀಯೇನೋ ಮಗನೆ&#8230;.</p>
<p>ರಾಜ : ಬ್ಯಾಡ್ರೋ ನಾ ನಿಮ್ಮ ರಾಜ ಕಣ್ರೋ ಕಾಪಾಡ್ರೋ.</p>
<p>ಬೀರಯ್ಯ : ಈ ಕತ್ತೆ ಧಿಮಾಕನ್ನ ನೋಡ್ರಯ್ಯ ನಾನೇ ರಾಜ ಅಂತದೆ! ನಮ್ಮ ರಾಜರಿಗೆ ಅವಮಾನ ಮಾಡತೀಯೇನೋ ಕತ್ತೆ. <em>(</em><em>ಹೊಡೆಯುವರು</em><em>, </em><em>ರಾಜ</em><em> </em><em>ತಪ್ಪಿಸಿಕೊಂಡು</em><em> </em><em>ಓಡುವನು</em><em>. </em><em>ಎಲ್ಲರೂ</em><em> </em><em>ಬೆನ್ನು</em><em> </em><em>ಹತ್ತುವರು</em><em>. </em><em>ಅಂತೂ</em><em> </em><em>ಈ</em><em> </em><em>ಭಾಗದಲ್ಲಿ</em><em> </em><em>ಗಣೇಶನೊಬ್ಬನನ್ನು</em><em> </em><em>ಹೊರತುಪಡಿಸಿ</em><em> </em><em>ಎಲ್ಲಾ</em><em> </em><em>ಪಾತ್ರಧಾರಿಗಳು</em><em> </em><em>ರಾಜನನ್ನು</em><em> </em><em>ಹಿಡೀರಿ</em><em> </em><em>ಹಿಡೀರಿ</em><em> </em><em>ಎಂದು</em><em> </em><em>ಓಡಿ</em><em> </em><em>ಬರುತ್ತಾರೆ</em><em>. </em><em>ರಾಜ</em><em> </em><em>ಕೊನೆಗೆ</em><em> </em><em>ದೂರದಲ್ಲಿ</em><em> </em><em>ಸೀಮೆ</em><em> </em><em>ಆಚೆಗೆ</em><em> </em><em>ನಿಂತು</em><em>)</em><em></em></p>
<p><em>ರಾಜ :</em> ನನ್ನ ಬಿಡ್ರೋ. ನಾ ನಿಮ್ಮ ರಾಜ ಅಲ್ಲವೇನ್ರೋ? ಪ್ರಜೆಗಳು ಹ್ಯಾಗಿರತ್ತಾರೋ ಹಾಗಲ್ಲವೇನ್ರೋ, ಒಬ್ಬ ರಾಜ ಇರೋದು? ನಿಮ್ಮ ಯೋಗ್ಯತೆ ಹಾಗಿತ್ತು ಅದಕ್ಕೇ ನಾ ಹೀಗಿದ್ದೇನೆ ಕಣ್ರೋ. ನಾ ದೇಶ ಬಿಟ್ಟು ಎಲ್ಲಾದ್ರೂ ಓಡಿ ಹೋಗ್ತೇನೆ ಬಿಡ್ರೋ. ಇನ್ನೊಂದು ಸಲ ಈ ದೆಶದ ಕಡೆಗೆ ತಲೆ ಹಾಕೋದಿಲ್ಲ. ಜೀವದಾನ ಮಾಡ್ರೋ.<br />
<em>(</em><em>ಆದರೂ</em><em> </em><em>ಜನ</em><em> </em><em>ಕಿರಚಿ</em><em> </em><em>ಅವನ</em><em> </em><em>ಕಡೆ</em><em> </em><em>ಕಲ್ಲು</em><em> </em><em>ಎಸೆಯುತ್ತಾರೆ</em><em>. </em><em>ರಾಜ</em><em> </em><em>ಓಡಿ</em><em> </em><em>ಹೋಗುತ್ತಾನೆ</em><em>)</em><em></em></p>
<p><em>ಮಂತ್ರಿ :</em> ಸಧ್ಯ ಪೀಡೆ ತೊಲಗಿತು.<br />
ಧೋಬಿ : ಕ್ರಾಂತಿಕಾರಿ ಮಂತ್ರಿಗಳಿಗೆ ಜಯವಾಗಲಿ.</p>
<p>ಮಂತ್ರಿ : ಎಲ್ಲರಿಗೂ ಜಯ ಆಗಿದೆ. ಈ ಜಯದ ರೂವಾರಿ ನಮ್ಮ ಶಿವ ಮತ್ತು ಸಾಂಬ. ಸಾಂಬಶಿವರಿಗೆ ವಂದನೆ ಹೇಳಿ.</p>
<p>ಶಿವ : ಇನ್ನು ಮೇಲೆ ಯಾರು ಸ್ವಾಮಿ ರಾಜರು? ಅವರು ಯಾರಿದ್ರೂ ಅವರಲ್ಲಿ ನನ್ನದೊಂದು ವಿನಂತಿ ಇದೆ.</p>
<p>ಮಂತ್ರಿ : ರಾಜರ ಸಹವಾಸ ಸಾಕು ಸ್ವಾಮಿ. ನಮ್ಮ ನಾವೇ ಚುನಾವಣೆ ಮಡಿಕೊಂಡು ಆಲಿಕೊಳ್ಳೋಣ. ನಾವೆಲ್ಲರೂ ಇಲ್ಲಿ ಸೇರಿದ್ದೇವಾದ್ದರಿಮದ ನಿನ್ನ ಆಶೆ ಹೇಳ ಬಹುದು.</p>
<p>ಶಿವ : ಇನ್ನೇನಿಲ್ಲ ಸ್ವಾಮಿ. ಗಜನಿಂಬೆಯ ಮದುವೆ ಕತ್ತೆ ಜೊತೆಗಾದರೂ ನಾನೇ ಅವಳ ಜೊತೆಗಿದ್ದೆ. ದಯವಿಟ್ಟು ಆ ಕತ್ತೆಯಿಂದ ಅವಳನ್ನು ಬಿಡಿಸಿ ನನಗೆ ಮದುವೆ ಮಾಡಿಕೊಡಬೇಕೂಮತ ಪ್ರಾರ್ಥನೆ.</p>
<p>ಮಂತ್ರಿ : ಓಹೋ ಅಗತ್ಯವಾಗಿ. <em>(</em><em>ಮಂತ್ರಿ</em><em> </em><em>ಇಬ್ಬರ</em><em> </em><em>ಕೈ</em><em> </em><em>ಕೂಡಿಸುವನು</em><em>. </em><em>ಎಲ್ಲರೂ</em><em> </em><em>ಚಪ್ಪಾಳೆ</em><em> </em><em>ದತಟ್ಟುವರು</em><em>. </em><em>ಗಣೇಶ</em><em> </em><em>ಬರುವನು</em><em>.)</em><em></em></p>
<p><em>ಗಣೇಶ : </em>ಎಷ್ಟು ಹುಡುಕೋದ್ರಯ್ಯ ನಿಮ್ಮನ್ನ?</p>
<p>ಶಿವ : ಯಾಕೆ ದೇವರು ?</p>
<p>ಗಣೇಶ : ಎಲ್ಲಯ್ಯ ನಿನ್ನ ತಂದೆ. <em>(</em><em>ಸಾಂಬ</em><em> </em><em>ಎಲ್ಲಾ</em><em> </em><em>ಜನರನ್ನು</em><em> </em><em>ಸರಿಸಿ</em><em> </em><em>ಹೊರಬಂದು</em><em> </em><em>ಗಣೇಶನಿಗೆ</em><em> </em><em>ಕೈ</em><em> </em><em>ಮುಗಿಯುವನು</em><em>)</em><em></em></p>
<p><em>ಸಾಂಬ :</em> ನಿನ್ನ ಪಾದ ದರ್ಶನದಿಂದ ಪುನೀತನಾದೆ ಪ್ರಭು.</p>
<p>ಗಣೇಶ : ಅದಿರಲಯ್ಯ ಮೊದಲು ಆ ಮುತ್ತೆಲ್ಲಿದೆ ತಂದುಕೊಡು.</p>
<p>ಸಾಂಬ : ಯಾವ ಮುತ್ತು ದೇವರು?</p>
<p>ಗಣೇಶ : ಪರವಾಗಿಲ್ಲಯ್ಯ ನೀನು! ಬಾಯಲ್ಲಿಟ್ಟುಕೊಂಡ್ರೆ ಹೆಂಗ್ಸಾಗ್ತಾರಲ್ಲ ಆ ಮುತ್ತು ಕೊಡಯ್ಯಾ ಅಂದ್ರೆ.</p>
<p>ಸಾಂಬ : ಕೊಡಲೇಬೇಕಾ ದೇವರೂ?</p>
<p>ಗಣೇಶ : ಯೋ ಅದು ನಂದಲ್ಲಯ್ಯ ನಮ್ಮಪ್ಪಂದು. ಆ ಮುತ್ತು ಕೊಡದೇ ಇದ್ದದ್ದಕ್ಕೆ ನಮ್ಮಪ್ಪ ನನಗೇನಂದ ಗೊತ್ತಾ?</p>
<p>ಸಾಂಬ : ಏನಂದ್ರು ದೇವರೂ?</p>
<p>ಗಣೇಶ : ಮಗನೇ ಆ ಮುತ್ತನ್ನು ಹ್ಯಾಗ್ ಹ್ಯಾಗೆ ಉಪಯೋಗಿಸ್ತ ಇದ್ದೀಯೋ! ಅದಕ್ಕೇ ನಿನಗೆ ಭಕ್ತರು ಕಮ್ಮಿ  ಆಗತಿರೋದು ಅಂತ ನನ್ನನ್ನೇ ಮಿಸ್ಟೇಕ್ ಮಾಡಿ ಕೊಂಡಿದ್ದಾನೆ.</p>
<p>ಸಾಂಬ : ಹಾಗಾದರೆ ಇಕಾ ಈಗಲೇ ಕೊಟ್ಟೆ.<br />
<em>(</em><em>ಹೋಗಿ</em><em> </em><em>ಕಾರಭಾರಿಯನ್ನು</em><em> </em><em>ಎಳೆದು</em><em> </em><em>ತರುವನು</em><em>)</em> ಬಾಯಲ್ಲಿದೆಯಲ್ಲಾ ಆ ಮುತ್ತನ್ನು ಕೊಡು.</p>
<p>ಕಾರಭಾರಿ : ಅದಾ? ಅದಿಲ್ಲವಲ್ಲ.</p>
<p>ಸಾಂಬ : ಮುಚ್ಕೊಂಡು ಸುಮ್ನೆ ಕೊಡು.</p>
<p>ಕಾರಭಾರಿ : ಇಲ್ಲಾ ಮಾರಾಯಾ. ಮೊದಮೊದಲು ನೀ ಹೋದ ಮೇಲೆ ಬಾಯಿಂದ ಹೊರಗೆ ತೆಗೀತಿದ್ದೆ. ಆಮೇಲಾಮೇಲೆ ನಿನ್ನ ಸಹವಾಸ ಜಾಸ್ತಿ ಆಯ್ತು ನೋಡು, ಖಾಯಂ ನುಂಗಿಬಿಟ್ಟೆ.</p>
<p>ಸಾಂಬ : ಅಯ್ಯೋ ದೇವರೆ ಗಣೇಶದೇವರಿಗೆ ನಾ ಏನು ಹೇಳಲಿ?</p>
<p>ಶಿವ : ದೇವರು ತಮ್ಮ ದಯದಿಂದ ಇಡೀ ದೇಶಕ್ಕೆ ಒಳ್ಳೇದಾಗಿದೆ. ನನಗೂ ಒಳ್ಳೇದಾಗಿದೆ.</p>
<p>ಸಾಂಬ : <em>(</em><em>ಕಾರಭಾರಿಯ</em><em> </em><em>ಕೈ</em><em> </em><em>ಹಿಡಿದು</em><em>) </em>ನನಗೂ ಒಳ್ಳೇದಾಗಿದೆ ಸ್ವಾಮಿ.</p>
<p>ಶಿವ : ನಿನಗೆ ಪ್ರಾರ್ಥನೆ ಮಾಡ್ತೀವಿ. ನಮಗೆಲ್ಲಾ ಇನ್ನೂ ಒಳ್ಳೇದಾಗಲಿ ಅಂತ ಆಶೀರ್ವಾದ ಮಾಡಿ.</p>
<p>ಗಣೇಶ : ಸ&#8230;.ರಿ.</p>
<p>ಸಾಂಬ : ಅಂಧಾಂಗೆ ಡಿಂಗ್‌ಡಾಂಗೆಲ್ಲಿ.</p>
<p>ಗಣೇಶ : ದೇವಸ್ಥಾನದ ಹತ್ತಿರ ಬಂದಿತ್ತು ಮತ್ತೆ ಚಿತ್ರ ಮಾಡಿಬಿಟ್ಟೆ.</p>
<p>ಶಿವ : ಸಧ್ಯ, ಬನ್ನಿ ಎಲ್ಲರೂ ಗಣೇಶ ದೇವರಿಗೆ ಪ್ರಾರ್ಥನೆ ಸಲ್ಲಿಸೋಣ.<br />
<em>(</em><em>ಎಲ್ಲರೂ</em><em> </em><em>ರಂಗದ</em><em> </em><em>ಮುಂಭಾಗಕ್ಕೆ</em><em> </em><em>ಬಂದು</em><em> </em><em>ಸಾಲಾಗಿ</em><em> </em><em>ನಿಲ್ಲುವರು</em><em>. </em><em>ರಾಜನಾಗಿದ್ದವನೂ</em><em>, </em><em>ಕತ್ತೆ</em><em> </em><em>ಮೇಕಪ್</em><em> </em><em>ತೆಗೆದು</em><em> </em><em>ಬರುವನು</em><em>.)</em><em></em></p>
<p><em>ಶಿವ :</em> ನೀನು ದೇಶ ಬಿಟ್ಟು ಹೊಗತೀನಂದೆ. ಮತ್ತೆ ಯಾಕಯ್ಯಾ ಬಂದೆ?</p>
<p>ರಾಜ : ನಾನು ನಟ ಕಣಯ್ಯ.<br />
ಎಲ್ಲರೂ : ಶ್ರೀ ಗಜವದನಾ&#8230;.</p>
]]></content:encoded>
			<wfw:commentRss>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%a7%e0%b3%a9/feed/</wfw:commentRss>
		<slash:comments>0</slash:comments>
		</item>
		<item>
		<title>ಸಾಂಬಶಿವ ಪ್ರಹಸನ : ದೃಶ್ಯ-೧೦</title>
		<link>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%a7%e0%b3%a6/</link>
		<comments>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%a7%e0%b3%a6/#comments</comments>
		<pubDate>Fri, 22 Mar 2013 00:36:54 +0000</pubDate>
		<dc:creator>kanaja</dc:creator>
				<category><![CDATA[ಕನ್ನಡ]]></category>
		<category><![CDATA[ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ]]></category>
		<category><![CDATA[ಡಾ. ಚಂದ್ರಶೇಖರ ಕಂಬಾರ]]></category>

		<guid isPermaLink="false">http://kanaja.in/?p=78468</guid>
		<description><![CDATA[(ದೂರದಲ್ಲಿ ಒಂದು ಹಾಡು ಕೆಳಿ ಬರುತ್ತದೆ. ಬೆಳದಿಂಗಳು, ಈಗ ಡಿಂಗ್‌ಡಾಂಗ್ ಪ್ರಸ್ತ. ಒಳಗಡೆ ಕೂಡಿದ್ದಾರೆಂದು ಭಾವಿಸಿ ಹೊರಗಡೆ ರಾಜ, ಕಾರಭಾರಿ ಬರುತ್ತಾರೆ. ಗುರುತಾಗದಿರಲೆಂದು ಹೆಣ್ಣು ಗಂಡು ದೆವ್ವಗಳ ಹಾಗೆ ಉಡುಪು ಬದಲಿಸಿದ್ದಾರೆ. ದೂರದಿಂದ ಹಾಡು ಕೇಳಿ ಬರುತ್ತಿದೆ.) ಆಗಲಿ ಇರಲಾರನೊ ಮರೆತು ಇರಲಾರೆನೊ ನಿನ್ನನ್ನಾ &#124;&#124; ಒಲಿದವನೆ ನಲಿದವನೆ &#124; ಹೃದಯದವನೆ ಗೆಲಿದವನೆ ಘಾಸಿಯಾಗುವೆನೊ ನಾನಾ &#124; ಮದನಾ         ಮರೆತಿರಲಾರೆ ನಿನ್ನಾ &#124;&#124; ಸ್ಮರಣ ಹೂವಿನ ಬಾಣಾ ಹೊಕ್ಕಾವೋ ಹೃದಯವನಾ ಅಬಲೆ ನಾ ಮಾಡಲೇನಾ? ತರುಣಿಯ [...]]]></description>
			<content:encoded><![CDATA[<p><em>(</em><em>ದೂರದಲ್ಲಿ</em><em> </em><em>ಒಂದು</em><em> </em><em>ಹಾಡು</em><em> </em><em>ಕೆಳಿ</em><em> </em><em>ಬರುತ್ತದೆ</em><em>. </em><em>ಬೆಳದಿಂಗಳು</em><em>, </em><em>ಈಗ</em><em> </em><em>ಡಿಂಗ್‌ಡಾಂಗ್</em><em> </em><em>ಪ್ರಸ್ತ</em><em>. </em><em>ಒಳಗಡೆ</em><em> </em><em>ಕೂಡಿದ್ದಾರೆಂದು</em><em> </em><em>ಭಾವಿಸಿ</em><em> </em><em>ಹೊರಗಡೆ</em><em> </em><em>ರಾಜ</em><em>, </em><em>ಕಾರಭಾರಿ</em><em> </em><em>ಬರುತ್ತಾರೆ</em><em>. </em><em>ಗುರುತಾಗದಿರಲೆಂದು</em><em> </em><em>ಹೆಣ್ಣು</em><em> </em><em>ಗಂಡು</em><em> </em><em>ದೆವ್ವಗಳ</em><em> </em><em>ಹಾಗೆ</em><em> </em><em>ಉಡುಪು</em><em> </em><em>ಬದಲಿಸಿದ್ದಾರೆ</em><em>. </em><em>ದೂರದಿಂದ</em><em> </em><em>ಹಾಡು</em><em> </em><em>ಕೇಳಿ</em><em> </em><em>ಬರುತ್ತಿದೆ</em><em>.)<span id="more-78468"></span></em><em></em></p>
<p><strong>ಆಗಲಿ</strong><strong> </strong><strong>ಇರಲಾರನೊ</strong><strong><br />
</strong><strong>ಮರೆತು</strong><strong> </strong><strong>ಇರಲಾರೆನೊ</strong><strong> </strong><strong>ನಿನ್ನನ್ನಾ</strong><strong> </strong><strong>||</strong><strong><br />
</strong><strong>ಒಲಿದವನೆ</strong><strong> </strong><strong>ನಲಿದವನೆ |</strong><strong><br />
</strong><strong>ಹೃದಯದವನೆ</strong><strong> </strong><strong>ಗೆಲಿದವನೆ</strong><strong><br />
</strong><strong>ಘಾಸಿಯಾಗುವೆನೊ</strong><strong> </strong><strong>ನಾನಾ |</strong><strong> </strong><strong>ಮದನಾ</strong><strong><br />
</strong><strong>        </strong><strong>ಮರೆತಿರಲಾರೆ</strong><strong> </strong><strong>ನಿನ್ನಾ ||</strong><strong><br />
</strong><strong>ಸ್ಮರಣ</strong><strong> </strong><strong>ಹೂವಿನ</strong><strong> </strong><strong>ಬಾಣಾ</strong><strong> </strong><strong>ಹೊಕ್ಕಾವೋ</strong><strong> </strong><strong>ಹೃದಯವನಾ</strong><strong><br />
</strong><strong>ಅಬಲೆ</strong><strong> </strong><strong>ನಾ</strong><strong> </strong><strong>ಮಾಡಲೇನಾ</strong><strong>?<br />
</strong><strong>ತರುಣಿಯ</strong><strong> </strong><strong>ಬಿರಹವ</strong><strong> </strong><strong>ಮರೆಯಬೇಡಲೊ</strong><strong> </strong><strong>ಚೆಲುವ</strong><strong><br />
</strong><strong>ಹೂವಿನ</strong><strong> </strong><strong>ಹಾಸಿಗೆ</strong><strong> </strong><strong>ಸುಡು</strong><strong> </strong><strong>ಸುಡುವ</strong><strong> </strong><strong>ಬೇಸಿಗೆ</strong><strong><br />
</strong><strong>ಘಾಸಿಯಾಗುವೆನೊ</strong><strong> </strong><strong>ನಾನಾ |</strong><strong> </strong><strong>ಮದನಾ</strong><strong><br />
</strong><strong>ಮರೆತಿರಲಾರೆ</strong><strong> </strong><strong>ನಿನ್ನಾ</strong><strong> </strong><strong>||</strong><strong><em></em></strong></p>
<p>ರಾಜ : ನಮ್ಮಿಬ್ಬರ ಗುರುತು ಯಾರಿಗೂ ಸಿಕ್ಕೋದಿಲ್ಲ ಅಲ್ಲವ?</p>
<p>ಕಾರಭಾರಿ : ಸಾಧ್ಯವೇ ಇಲ್ಲ ಪ್ರಭು. ತಾವಂತೂ ಥೇಟ್ ಗಂಡು ದೆವ್ವನ ಥರಾನೇ ಕಾಣ್ತೀರಿ.</p>
<p>ರಾಜ : ನೀನೂ ಅಷ್ಟೆ ಕಣೊ ಥೇಟ್ ಹೆಣ್ಣುಭೂತ. ಅವಳು ನರಳೋದು ಕೇಳಿಸೋದೇ ಇಲ್ಲವಲ್ಲ!</p>
<p>ಕಾರಭಾರಿ : ಬಹುಶಃ ಅವರನ್ನೂ ಮಲಗಿಲ್ಲವೇನೋ. ದೀಪ ಹಾಗೇ ಇದೆ.</p>
<p>ರಾಜ : ಹೊತ್ತಾಯ್ತಲ್ಲ. ಎಲ್ಲಾದರೂ ಹಣಿಕಿ ಹಾಕೋದಕ್ಕೆ ಅವಕಾಸ ಇದೆಯಾ ನೋಡು, ಏನು ಮಾಡ್ತಿದಾರೆ ನೋಡೋಣ.</p>
<p>ಕಾರಭಾರಿ : ನಾವು ನೋಡೋದನ್ನ ಯಾರಾದರೂ ನೋಡಿದರೆ?</p>
<p>ರಾಜ : ನನ್ನ ಅಪ್ಪಣೆ ಅಲ್ಲದೆ ಅದ್ಯಾವನಯ್ಯ ನೋಡೋನು?</p>
<p>ಕಾರಭಾರಿ : ಜಾಸ್ತಿ ಗಲಾಟೆ ಮಾಡಬೇಡಿ ಪ್ರಭು.</p>
<p>ರಾಜ : ಯೋ-ನನಗೆಷ್ಟು ಬೇಕೋ ಅಷ್ಟು ಗಲಾಟೆ ಮಾಡ್ತೀನಯ್ಯ, ನೀನ್ಯಾವನು ಕೇಳೋಕೆ?</p>
<p>ಕಾರಭಾರಿ : ಪ್ರಭು, ಪ್ರಭು ಇವೊತ್ತು ಇಡೀ ಊರಿನ ಕಿವಿ ಈ ಕಡೆಗಿದೆ. ನೋಡೋವಾಗ ನಾವೇನಾದರೂ ಸಿಕ್ಕುಬಿದ್ದರೆ ದಜನ ನಮ್ಮನ್ನು ತಿರಸ್ಕಾರದಿಂದ ನೋಡ್ತಾರೆ.</p>
<p>ರಾಜ : ಹಾಗೆ ಹೇಳು ಮತ್ತೆ. ಜನ ನಮ್ಮನ್ನು ಸತ್ಕಾರದಿಂದ ನೋಡೋಹಾಗೆ ಒಂದು ಉಪಾಯ ಮಾಡು.</p>
<p>ಕಾರಭಾರಿ : ಏನಕ್ಕೆ?</p>
<p>ರಾಜ : ಒಳಗಡೆ ನೋಡೋದಕ್ಕೆ ಬಾಗಿಲಿಗೆ ತೂತು ಇದೆಯಾ ನೋಡು-</p>
<p>ಕಾರಭಾರಿ : ಇಲ್ಲ ಪ್ರಭು.</p>
<p>ರಾಜ : ಕಿಡಕಿಗೆ ಕಿಂಡಿ ಇದೆಯಾ ನೋಡು.</p>
<p>ಕಾರಭಾರಿ : ಇಲ್ಲ ಪ್ರಭು.</p>
<p>ರಾಜ : ಹೋಗಲಿ ಗೋಡೆಗೆ ಕಿವಿ ಹಚ್ಚಿ ಏನಾದರೂ ಮಾತಾಡಿಕೊಳ್ಳುತ್ತಿದ್ದಾರಾ ಕೇಳು.</p>
<p>ಕಾರಭಾರಿ : ಅದೂ ಕೇಳಿಸೋದಿಲ್ಲ ಪ್ರಭು.</p>
<p>ರಾಜ : ಕಿಂಡಿ ಇಲ್ಲ, ತೂತಿಲ್ಲ, ಮಾತು ಕೇಳಿಸೋದಿಲ್ಲ. ಬೋಳೀಮಗನೆ ಇಂಥಲ್ಲಿ ಯಾಕೆ ಪ್ರಸ್ತ ಇಟ್ಟೆ? ಮ್ಯಾಲೆ ಹತ್ತಿ ಒಂದು ಹೆಂಚು ತಗಿ. ಏನು ಮಾಡುತ್ತಿದ್ದಾರೆ ನೋಡಿ ಹೇಳು. <em>(</em><em>ಕಾರಭಾರಿ</em><em> </em><em>ಮೇಲೆ</em><em> </em><em>ಹತ್ತುವನು</em><em>. </em><em>ಅಲ್ಲಿಂದಲೇ</em><em> </em><em>ಸುಳ್ಳು</em><em> </em><em>ಸುಳ್ಳೇ</em><em> </em><em>ಹೇಳತೊಡಗುವನು</em><em>)</em><em></em></p>
<p><em>ಕಾರಭಾರಿ :</em> ಪ್ರಭು ಇಬ್ಬರೂ ಹಾಸಿಗೆ ಮೇಲೆ ಕೂತಿದ್ದಾರೆ!</p>
<p>ರಾಜ : ಹೌದು, ಆಮೇಲೆ!</p>
<p>ಕಾರಭಾರಿ : ಆವಳ ಕಿವೀನಲ್ಲಿ ಡಿಂಗ್‌ಡಾಂಗ್ ಏನೋ ಹೇಳ್ತಿದ್ದಾರೆ!</p>
<p>ರಾಜ : ಬೇಗ ಹೇಳು, ಆಮೇಲೆ?</p>
<p>ಕಾರಭಾರಿ : ಅವಳು ನಗ್ತಿದಾಳೆ!</p>
<p>ರಾಜ : ನಗ್ತಿದಾಳಾ? ಸಂತೋಷದಿಂದ ನಗ್ತಿದಾಳ, ದುಃಖದಿಂದ ನಗ್ತಿದಾಳ?</p>
<p>ಕಾರಭಾರಿ : ಸಂತೋಷದಿಂದ ಪ್ರಭು.</p>
<p>ರಾಜ : <em>(</em><em>ಕಾರಭಾರಿಯ</em><em> </em><em>ಕಾಲು</em><em> </em><em>ಹಿಡಿದೆಳೆದು</em><em> </em><em>ಬೀಳಿಸಿ</em><em>) </em>ಬೋಳಿಮಗನೆ ಅವಳನ್ನೇ ಕಣೊ ನಾನು ಮೊದಲು ಹೇಳಿದ್ದು. ನೀನು ಯಾವಳನ್ನೋ ಕರಕೊಂಬಂದು ಗೋಳಾಡಿಸಿ ಬಿಟ್ಟೆ ನನ್ನ. ಸಂತೋಷದಿಂದ ನಗೋಳು ಕಾಪಾಡು ದೇವರೇ ಅಂತ ಪದಾ ಯಾಕೋ ಹಾಡತಾಳೆ? ಪದಾ ಹಾಡದಿದ್ದರೆ ನಾ ಹ್ಯಾಗೋ ಅವಳನ್ನ ಕಾಪಾಡೋದು? ಬಡ್ಡೀಮಗನೇ ಒಂದು ಕೆಲಸ ಮಾಡು. ಹೆಂಚು ತೆಗೆದಿದ್ದೀಯಲ್ಲ, ಅಲ್ಲಿ ಮುಕ ಥೂರಿ ಗೂಗೆ ಥರ ಕೂಗು. ಅವಳು ಹೆದರಿದ ಹೊರಗಡೆ ಬರಬಹುದು<em>.(</em><em>ಕಾರಭಾರಿ</em><em> </em><em>ಹಾಗೇ</em><em> </em><em>ಮಾಡುವನು</em><em>. </em><em>ಅಷ್ಟರಲ್ಲಿ</em><em> </em><em>ಸಾಂಬನ</em><em> </em><em>ಸಿಳ್ಳು</em><em> </em><em>ಕೇಳಿ</em><em> </em><em>ಬರುತ್ತದೆ</em><em>. </em><em>ಅದಾಗಿ</em><em> </em><em>ಡಿಂಗ್‌ಡಾಂಗ್</em><em> </em><em>ವೀರಾವೇಶದಿಂದ</em><em> </em><em>ಹೇಂಕರಿಸುವುದು</em><em>. </em><em>ಇಬ್ಬರೂ</em><em> </em><em>ಓಡಿ</em><em> </em><em>ದೂರದಲ್ಲಿ</em><em> </em><em>ಬಂದು</em><em>)</em><em></em></p>
<p>ರಾಜ : ಡಿಂಗ್‌ಡಾಂಗ್ ಗೆ ನಮ್ಮ ಗುರುತು ಸಿಕ್ಕಿರಭೌದು ಅಂತಿಯಾ?</p>
<p>ಕಾರಭಾರಿ : ಸಾಧ್ಯವಿಲ್ಲ ಪ್ರಭು. <em>(</em><em>ಅಲ್ಲೇ</em><em> </em><em>ಕಂಬಳಿ</em><em> </em><em>ಹೊದ್ದುಕೊಂಡು</em><em> </em><em>ಒಳಗೊಳಗೆ</em><em> </em><em>ಹೆಂಡ</em><em> </em><em>ಕುಡಿಯುತ್ತಿದ್ದ</em><em> </em><em>ಸಾಂಬ</em><em> </em><em>ಈಗ</em><em> </em><em>ಮುಸುಕು</em><em> </em><em>ತೆಗೆಯುವನು</em><em>)</em><em></em></p>
<p>ಸಾಂಬ : ಕಳ್ಳ ನನಮಕ್ಕಳ್ರಾ ಬರೋ ಇಲ್ಲಿ.</p>
<p>ಕಾರಭಾರಿ : ಇವನ್ಯಾವನೋ ಕುಡುಕ.</p>
<p>ರಾಜ : ನಾವಿಬ್ಬರೂ ದೆವ್ವ ಭೂತ ಅಂತ ಹೇಳೋಣ. ನಂಬಿ ಓಡ್ತಾನೆ. ಆಮೇಲೆ ನಾನೊಂದು ನಿರಾಶೆ ಬಗ್ಗೆ ಪದ ಹಾಡ್ತೀನಿ. ಇಬ್ಬರೂ ಕೂತಗೊಂಡು ಅಳೋಣ.</p>
<p>ಸಾಂಬ : ಬರೋ ಇಲ್ಲಿ. ಪ್ರೀತಿ ಪ್ರೇಮ  ಮಾಡೋ ಹೊತ್ನಲ್ಲಿ ಕಳ್ಳತನ ಮಾಡ್ತೀರಾ ಹಲ್ಕಾಗಳ್ರ! ದೆವ್ವಿನಂಥ ದೆವ್ವ ಭೂತ ಪ್ರೀತಿ ಮಾಡ್ತಾ ಇವೆ. ಮನುಷ್ಯರಾಗಿ ನೀವು&#8230;.</p>
<p>ರಾಜ : ನಾವೂ ದೆವ್ವ ಭೂತ ಕಣ್ಲಾ.</p>
<p>ಸಾಂಬ : ನಿಮ್ಮಲ್ಲಿ ದೆವ್ವ ಯಾರು ? ಭೂತ ಯಾರು?</p>
<p>ರಾಜ : ಇದು ಭೂತ.</p>
<p>ಕಾರಭಾರಿ : ಇದು ದೆವ್ವ.</p>
<p>ಸಾಂಬ : ದೆವ್ವ ಭೂತ ಜೋಡಿ ಸರಿಯಾಗಿದೆ. ಪ್ರೀತಿ ಮಾಡೋದು ಬಿಟ್ಟು ಯಾಕೆ ಅಡ್ಡಾಡತಿದ್ದೀರಿ?</p>
<p>ರಾಜ : ಪ್ರೀತಿ ಮಾಡ್ತಾನೇ ಇದ್ವಿ ಕಣಯ್ಯ. ನಿನ್ನ ದನಿ ಕೇಳಿ ಇಲ್ಲಿಗೆ ಬಂದಿವೆ.</p>
<p>ಸಾಂಬ : ಹಂಗನ್ನು ಮತ್ತೆ.ದ ಈ ಲೋಕದಲ್ಲಿ ಎಲ್ಲರೂ ಸುಖವಾಗಿದ್ದಾರೆ. ನನ್ನ ಮಗ ಸೊಸೆ; ಆ ರಾಜ ಅವನ ಕಾರುಭಾರಿ, ಆ ಡಿಂಗ್‌ಡಾಂಗ್, ಆವನ ಕತ್ತೆ,ದ ಈ ಊರಿನ ಗಂಡಂದಿರು ಅವರ ಹೆಂಡಂದಿರು, ನೀನು ನಿನ್ನ ಭೂತ ಎಲ್ಲರೂ ಸುಖವಾಗಿದ್ದಾರೆ. ನಾನೊಬ್ಬನೇ ಕಣೊ ಜೋಡಿ ಇಲ್ಲದೆ ದುಃಖದಲ್ಲಿರೋನು <em>(</em><em>ಹೋ</em><em> </em><em>ಎಂದು</em><em> </em><em>ಅಳುವನು</em><em>)</em><em></em></p>
<p><em>ರಾಜ :</em> <em>(</em><em>ತಾನೂ</em><em> </em><em>ಅಳುತ್ತ</em><em>) </em>ನಿನ್ನ ದುಃಖ ಕಂಡು ನನಗೂ ಅಳು ಬರುತ್ತೆ ಕಣೊ.</p>
<p>ಸಾಂಬ : ಅಳಬೇಡ ನಾ ಕೇಳಲಾರೆ. ಬೇರೆಯವರು ಅತ್ತರೆ, ಅವರು ವನುಷ್ಯರಿರಲಿ ದೆವ್ವ ಭೂತ ಇರಲಿ ನನಗೆ ಕೇಳೋದಕ್ಕಾಗೊದಿಲ್ಲ. ಇಕಾ ಹೆಂಡ ಇದೆ ಕುಡಿ. ಆತ್ಮ ತೃಪ್ತಿ ಸಿಗತದೆ. <em>(</em><em>ಕೊಡುವನು</em><em> </em><em>ರಾಜ</em><em> </em><em>ಗಟಗಟ</em><em> </em><em>ಕುಡಿಯುವನು</em><em>) </em>ನೋಡಣ್ಣ ಒಂದೇ ಬುಡ್ಡಿಯಿಂದ ಹೆಂಡ ಕುಡಿದಿವಿ. ನಾವಿಬ್ಬರೂ ಅಣ್ಣ ತಮ್ಮ ಇದ್ದಂಗೆ ಏನಂತಿ?</p>
<p>ರಾಜ : ಓಹೋ.</p>
<p>ಸಾಂಬ : ಇಲ್ಲಿಗೆ ಬರೋಕೆ ಮುಂಚೆ ನೀನೇನಣ್ಣ ಮಾಡ್ತಿದ್ದೆ? ಪ್ರೀತಿ ತಾನೆ?ನನಗೋಸ್ಕರ ನೀನ್ಯಾಕಣ್ಣ ಪ್ರೀತಿ ಮಾಡೋದು ಬಿಡಬೇಕು? ಮಾಡು, ಪ್ರೀತಿ ಮಾಡು. ನಾ ಕಣ್ಣಾರೆ ನೋಡಿ ಸಂತೋಷ ಪಡ್ತೀನಿ, ಮಾಡು.</p>
<p>ರಾಜ : ಬೇಡ ತಮ್ಮ, ಇವಳು ನಾಚಿಕೊಳ್ಳತಾಳೆ.</p>
<p>ಸಾಂಬ : ನಾಚಿಕೊಂಡರೆ ಬಿಟ್ಟುಬಿಡೋದಾ? ಹೆಂಡಂದಿರಿಗೆ ಹಂಗೆಲ್ಲಾ ಸಲಿಗೆ ಕೊಡಬಾರದಣ್ಣ. ಏಳತಾ ಎರಡು  ಬೀಳತಾ ಇರಬೇಕು. ಅದ್ಸರಿ ನಿಮ್ಮ ಲೋಕದಲ್ಲಿ ಪದ್ಧತಿ ಹೆಂಗದೆ?</p>
<p>ರಾಜ : ಏನು ಪದ್ಧತಿ?</p>
<p>ಸಾಂಬ : ಹಿಂಗಿಟ್ಟುಕೊ; ನೀನು ದೆವ್ವ, ನನ್ನಣ್ಣ. ನಾ ಮನುಸ-ನಿನ್ನ ತಮ್ಮ. ಏನಣ್ಣಾ, ನಿನ್ನ ಹೆಂಡದೀರನ್ನ ಇಕಾ ಇವಳನ್ನ ನಾ ಮಡಿಕ್ಕೊಂಡೆ ಅನ್ನು. ಆಗ ನೀ ಏನ್ಮಾಡತೀಯ ಇವಳನ್ನ? ಕುಲ ಬಿಟ್ಟು ಹೊರಗಟ್ಟತೀಯಾ?</p>
<p>ಕಾರಭಾರಿ : <em>(</em><em>ನಗುತ್ತಾ</em><em>) </em>ನೀನೂ ಸತ್ತು ನಮ್ಮ ಲೋಕಕ್ಕೆ ಬಂದು ಬಿಡು, ನಮ್ಮ ಜೊತೆಗೇ ಇದ್ದೀಯಂತೆ.</p>
<p>ಸಾಂಬ : ಲೇ ದೆವ್ವಣ್ಣ, ಬಲೇ ಕಿಲಾಡಿ ನಿನ್ನೆಂಡತಿ. ತುಂಬ ಮುದ್ದಾಗವಳೆ. <em>(</em><em>ಕಾರಭಾರಿ</em><em> </em><em>ಇನ್ನೂ</em><em> </em><em>ನಗುವನು</em><em>) </em>ನನಗೂ ಬೇಕಾದಷ್ಟು ದೆವ್ವ ಭೂತ ಗೆಣೆಕಾರರು ಇದ್ದಾರಣ್ಣ. ಈಗಲೂ ಹಳ್ಳಿಗೋದರಾಯ್ತು. ರಾತ್ರಿ ಒಬ್ಬಳು ಭೂತ ಬುಡ್ಡಿ ತುಂಬಾ ಹೆಂಡ ಕೊಟ್ಟು ಮಲಗಿ ಹೋಯ್ತಾಳೆ ಗೊತ್ತಾ?</p>
<p>ಕಾರಭಾರಿ : ಸುದೈವಿಯಪ್ಪಾ ನೀನು.</p>
<p>ಸಾಂಬ : ಹೆಂಡ ತರದಿದ್ದರೆ ಅವಳನ್ನು ನಾ ಮುಟ್ಟಾಕಿಲ್ಲ.</p>
<p>ಕಾರಭಾರಿ : ಭಲೆ!</p>
<p>ಸಾಂಬ : ಆ ಭೂತ ಕೊಂಚದವಳು ಅನ್ನಬೇಡವೆ. ರಾಜ ದೆವ್ವ ಇದಾನಲ್ಲ, ಅವನ ಮಗಳು! ರಾಜಕುಮಾರಿ ಭೂತ!</p>
<p>ರಾಜ : ಹೌದಾ!</p>
<p>ಸಾಂಬ : ಮತ್ತೆ ಏನಂದುಕೊಂಡೆ ನನ್ನ? ಸಿಕ್ಕಸಿಕ್ಕಲ್ಲಿ ಕಾಲೆತ್ತೋ ಹಡಬಿಟ್ಟಿ ಭೂತಗಳಿಗೆಲ್ಲ ಬಲಿಯೋನಾ ನಾನು? ಹೆಂಗೆ ಸಂಪದಿಸಿದೆ ಗೊತ್ತಾ ಅವಳನ್ನ?</p>
<p>ರಾಜ : ಹೆಂಗೆ ಹೇಳಣ್ಣ.</p>
<p>ಸಾಂಬ : ಒಂದಿನ ಅಮಾವಾಸ್ಯೆ ಕತ್ತಲೆ. ಹಿಂಗೇ ಕುಡ್ಡಿದ್ದೆ. ನನ್ನ ಮನಸಾ ಹೆಂಡ್ತಿ ಸತ್ತು ಎರಡು ದಿನ ಆಗಿತ್ತು ಅಷ್ಟೆ. ಹೆಂಗೌಳೆ ನೋಡಿಕೊಂಡು ಬರಾಣ ಅಂತ ಸುಡುಗಾಡಿಗೆ ಹೋದೆ ನೋಡು: ದೆವ್ವ ಭೂತ ಸಾವಿರ ಸಾವಿರ ನೆರೆದು ದರ್ಬಾರ ಮಾಡತಾ ಅವೆ! ಸಿಂಹಾಸನದ ಮೇಲೆ ರಾಜ ದೆವ್ವ ಅದೆ. ಅದರ ಪಕ್ಕ ಅವನ ರಾಣಿ ಭೂತ. ಅವಳ ಪಕ್ಕ ಒಂದು ಚೆಂದುಳ್ಳೆ ಎಳೆ ಭೂತ ಫಳಫಳ ಹೊಳೀತಿದೆ. ಅವಳೇ ಆಮೇಲೆ ನನ್ನ ಕೀಪು. ನನ್ನ ಹೆಂಡತೀಗೆ ಅಲ್ಲಿ ಇನ್ನೂ ಜೀವ ಬಂದಿರಲಿಲ್ಲ. ಹಾಜರಿ ಪುಸ್ತಕದಲ್ಲಿ ಅವಳ ಹೆಸರಿನ್ನೂ ದಾಖಲಾಗಿರಲಿಲ್ಲ. ನೋಡತೇನೆ ದರ್ಬಾರು ಭರ್ಜರಿ ಸಾಗಿದೆ. ಯಾವ್ಯಾವುದೊ ದೆವ್ವ ಭೂತ ರಾಜನಿಗೆ ಏನೇನೋ ಕಸರತ್ತು ತೋರಿಸತಾ ಇವೆ.ದ ಎಲ್ಲರೂ ನಗತಾ ಚಪ್ಪಾಳೆ ತಟ್ಟತಾ ಅವ್ರೆ! ನನಗೂ ಪ್ರೋತ್ಸಾಹ ಬಂತು ನೋಡು. ಹೋದೋನೆ ರಾಜನ ಎದುರಿಗೆ ಹಿಂಗಂದು ಒಂದು ಲಾಗ ಹಾಕಿದೆ ನೋಡುದ ನನ್ಮಗಂದು, ಕೂತಿರೋದೆವ್ವ ಭೂತ ಎಲ್ಲ ಹೋ ಅಂತ ಸಿಳ್ಳೆ ಹಾಕಿದ್ವು. ರಾಜ ಎಷ್ಟು ಖುಷಿ ಆದನಪ್ಪಾ ಅಂದರೆ-ತಗೋ ಬಹುಮಾನ ಅಂತ ಆ ಎಳೆ ಭೂತ ರಾಜಕುಮಾರೀನ್ನೇ ಕೊಟ್ಟುಬಿಟ್ಟ! ಆ ರಾಜ ದೆವ್ವ ಇತ್ತಲ್ಲ ಥೇಟ್ ನಿನ್ನಂಗೇ ಇದ್ದ ಕಣಣ್ಣ! ಬೇಕಾದರೆ ಅಲ್ಲಿ ಹಾಕಿದ ಹಾಗೆ ಇಲ್ಲೂ ಒಂದು ಲಾಗಾ ಹಾಕ್ತೇನೆ. ನೀನೂ ಆ ರಾಜ ದೆವ್ವದ ಹಾಗೆ ಉದಾರಿ ಆಗತೀಯಾ?</p>
<p>ರಾಜ : ಆಗೋಣ ಆಗೋಣ. ಮೊದಲು ಆ ರಾಜಕುಮಾರಿ ಭೂತದ ವಿಷಯಾ ಹೇಳಣ್ಣ. ಈಗಲೂ ನಿನ್ನ ಹತ್ರ ಬರತ್ತಾಳಾ ಅವಳು?</p>
<p>ಸಾಂಬ : ಓಹೋ.</p>
<p>ರಾಜ : ಮತ್ತೆ ಅವಳು ಯಾಕಿಲ್ಲ ಇಲ್ಲಿ?</p>
<p>ಸಾಂಬ : ಅದೇ ಮತ್ತೆ. ಅವಳಿರೋದು ನನ್ನ ಹಳ್ಳೀಲಿ. ಬರೋವಾಗ ಹೇಳಿದೆ. ಜೊತೇಲಿ ನೀನೂ ಬಾರೆ ನೋಡಿಕೊಂಡು ಬರೋವಾ ಅಂತ. ಅದಕ್ಕೆ ಅವಳು ಏನಂದಳು ಗೊತ್ತಾ? ಅಯ್ಯೋ ನನ್ನ ರಾಜ ನಾವು ಹಳ್ಳಿ ಭೂಗಳು. ಸಿಟಿ ಭೂತ ನಮ್ಮನ್ನು ನೋಡಿ ನಗಾಡುತ್ವೆ. ನೀನೇ ಹೋಗಿ ಬಾ ರಾಜ ಅಂದಳು.</p>
<p>ಕಾರಭಾರಿ : ಮತ್ತೆ ನೀನಿಲ್ಲಿ ಒಬ್ಬಂಟಿ ಗೋಳಾಡತಾ ಇದ್ದೀಯಲ್ಲ.</p>
<p>ಸಾಂಬ : ಅದೇ ಮತ್ತೆ. ಅವಳಿಗೆ ಹೇಳಿದೆ; ಲೇ ಚಿನ್ನ ನೀನಿಲ್ಲದೆ ಛಳಿ ಆಗುತ್ತೆ. ಏನೇ ಮಾಡಲಿ ಅಂದೆ. ಅದಕ್ಕೆ ಅವಳೇನು ಮಾಡಿದಳು ಗೊತ್ತಾ? ಹಿಂಗಂದು ಒಂದು ಮುತ್ತು ಕೊಟ್ಟಳು. ‘ರಾಜಾ ನಿನಗೆ ತುಂಬಾ ಛಳಿ ಆದಾಗ ಯಾರಾದಾದರೂ ಬಾಯಲ್ಲಿ ಇದನ್ನಿಡು, ಅವರು ಹೆಂಗಸಾಗತಾರೆ’ ಅಂದಳು.</p>
<p>ರಾಜ :<em> (</em><em>ಉತ್ಸಾಹದಿಂದ</em><em> </em><em>ಎದ್ದು</em><em> </em><em>ಬಂದು</em><em>) </em>ಈವಾಗ ಆ ಮುತ್ತು ನಿನ್ನ ಹತ್ತರ ಇದೆಯಾ?</p>
<p>ಸಾಂಬ : ಓಹೋ.</p>
<p>ರಾಜ : ಕೊಡಿಲ್ಲಿ.</p>
<p>ಸಾಂಬ : ನೀ ಬ್ಯಾಡ ಕಣೊ. ನಿನ್ನ ದಾಡಿ ಕಂಡರೆ ನನಗಾಗೋದಿಲ್ಲ. ಇವಳಿಗೆ ಕೊಡೋಣವಾ?</p>
<p>ರಾಜ : ಕೊಡು.</p>
<p>ಕಾರಭಾರಿ :<em> (</em><em>ಗಾಬರಿಯಾಗಿ</em><em>) </em>ಪ್ರಭು ನಾ ತಗೋಬೇಕು?</p>
<p>ರಾಜ : ತಗೋ ಬೇಗ.</p>
<p>ಕಾರಭಾರಿ : ಪ್ರಭು ನನಗ್ಯಾಕೋ ಸಂದೇಹ ಬರತಾ ಇದೆ. ಬೇಡ ಪ್ರಭು.</p>
<p>ರಾಜ : ತಗೋ ಅಂದರೆ.</p>
<p>ಸಾಂಬ : ಬಾಯಲ್ಲಿಟ್ಟುಕೊ <em>(</em><em>ಕೊಡುವನು</em><em>, </em><em>ಸಾಂಬನಿಗೆ</em><em> </em><em>ಆನಂದವಾಗಿದೆ</em><em>. </em><em>ರಾಜನಿಗೆ</em><em> </em><em>ಕುತೂಹಲ</em><em>. </em><em>ಸಾಂಬ</em><em> </em><em>ಕಾರಭಾರಿಯ</em><em> </em><em>ಕೈ</em><em> </em><em>ಹಿಡಿಯುತ್ತಾ</em><em>) </em>ನನ್ನ ಛಳಿ ಹೋಗೋ ತನಕ ಇವಳು ಇಲ್ಲಿರಲಿ, ಆಮೇಲೆ ಕಳಿಸಿಕೊಡತೀನಿ.</p>
<p>ಕಾರಭಾರಿ : <em>(</em><em>ಮುತ್ತು</em><em> </em><em>ಬಾಯಲ್ಲಿಟ್ಟುಕೊಂಡು</em><em>)</em> ಅಯ್ಯಯ್ಯೋ ಪ್ರಭು. ಇಲ್ಲಿ ನೋಡೀಂದ್ರೆ! ನಾನು ನಿಜವಾಗಿ ಹೆಣ್ಣಾಗಿದ್ದೇನೆ! ದಮ್ಮಯ್ಯ ತಿರಗ ನನ್ನನ್ನು ಗಂಡಸು ಮಡಿ.</p>
<p>ರಾಜ : ನಿಜವಾಗ್ಲೂ?</p>
<p>ಕಾರಭಾರಿ : ಅಯ್ಯಯ್ಯೋ ಹ್ಯಾಗೆ ಹೇಳಲಿ ಪ್ರಭು; ನಿಜವಾಗಿ ನಾ ಹೆಣ್ಣಾಗಿದ್ದೀನಿ!</p>
<p>ರಾಜ : ಒಳ್ಳೇದಾಯ್ತು ಬಿಡು. ಆ ಗಜನಿಂಬೆ ಕತ್ತೆ ಜೊತೆ ಮಲಗಲಿ. ನೀನು ನನ್ನ ಜೊತೆ ಬಾ. <em>(</em><em>ಅವಳ</em><em> </em><em>ಹತ್ತಿರ</em><em> </em><em>ಹೋಗುವನು</em><em>. </em><em>ಸಾಂಬ</em><em> </em><em>ಅಡ್ಡಬರುವನು</em><em>)</em><em></em></p>
<p><em>ಸಾಂಬ :</em> ಲೇ ನನ್ಮಗನೇ ಅವನನ್ನು ಹೆಂಗಸು ಮಡಿದವನು ನಾನು. ನನಗೇ ಬೇಕಾದವಳು. ಬಂದ ದೊಡ್ಡ ಮನುಷ್ಯ.</p>
<p>ರಾಜ : ಬಡ್ಡೀ ಮಗನೇ, ಏನಂದುಕೊಂಡೆ ನನ್ನ? ನಾನು ಈ ದೇಶದ ರಜ.</p>
<p>ಸಾಂಬ : ಕಳ್ಳ ನನ್ಮಗನೆ. ಯಾವುದೋ ದೆವ್ವ ನೀನು. ದೇಶದ ರಾಜ ಅಂತ ಸುಳ್ಳು ಹೆಳತೀಯೇನೋ? ನಿನ್ನ ಮುಸಡಿ ನೋಡಿಕೊಳ್ಳೋ ಮಗನೆ. ಅವಳನ್ನ ಮುಟ್ಟಿದರೆ ಒದೀತೀನಿ ನೋಡು. ಹೋಗತೀಯೋ? ಇಲ್ಲಾ&#8230;.<br />
<em>(</em><em>ಹೋಗಿ</em><em> </em><em>ಒಂದೆರಡು</em><em> </em><em>ಏಟು</em><em> </em><em>ಹಾಕುವನು</em><em>. </em><em>ರಾಜ</em><em> </em><em>ಅಷ್ಟು</em><em> </em><em>ದೂರ</em><em> </em><em>ಹೋಗಿ</em><em> </em><em>ಬೀಳುವನು</em><em>. </em><em>ಮತ್ತೆ</em><em> </em><em>ಸಾಂಬ</em><em> </em><em>ಹೊಡೆಯ</em><em> </em><em>ಹೋದಾಗ</em><em> </em><em>ರಾಜ</em><em> </em><em>ಓಡುವನು</em><em>. </em><em>ಕಾರಭಾರಿ</em><em> </em><em>ಪ್ರಭು</em><em> </em><em>ಎಂದು</em><em> </em><em>ಓಡಬೇಕೆಂದಾಗ</em><em> </em><em>ಇವನು</em><em> </em><em>ಅವಳನ್ನು</em><em> </em><em>ಹಿಡಿದು</em><em> </em><em>ಎಳೆಯುವನು</em><em>.)</em><em><br />
</em>ಸುಮ್ಮನೆ ಬಿದ್ದುಕೊಂಡರೆ ಸರಿ. ಗಲಾಟೆ ಮಾಡಿದರೆ ಬೆಳತನಕ ಬಿಡೋದಿಲ್ಲ ಹುಷಾರ‍.<strong></strong></p>
]]></content:encoded>
			<wfw:commentRss>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%a7%e0%b3%a6/feed/</wfw:commentRss>
		<slash:comments>0</slash:comments>
		</item>
		<item>
		<title>ಸಾಂಬಶಿವ ಪ್ರಹಸನ : ದೃಶ್ಯ &#8211; ೨</title>
		<link>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%a8/</link>
		<comments>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%a8/#comments</comments>
		<pubDate>Fri, 22 Mar 2013 00:36:54 +0000</pubDate>
		<dc:creator>kanaja</dc:creator>
				<category><![CDATA[ಕನ್ನಡ]]></category>
		<category><![CDATA[ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ]]></category>
		<category><![CDATA[ಡಾ. ಚಂದ್ರಶೇಖರ ಕಂಬಾರ]]></category>

		<guid isPermaLink="false">http://kanaja.in/?p=78452</guid>
		<description><![CDATA[(ರಾಜ ಮತ್ತು ಪೊಲೀಸ್ ಆಫೀಸರ್) ರಾಜ : ಪೋಲಿಸ್ ಬಂದೋಬಸ್ತು ಸರಿಯಾಗಿದೆಯ? ಪೊಲೀಸ್ : ಎಲ್ಲ ಸರಿಯಾಗಿದೆ ಪ್ರಭೂ. ರಾಜ : ಕ್ರಾಂತಿ ಗೀಂತಿ ವಗೈರೆ&#8230;.? ಪೊಲೀಸ್ : ಏನೂ ಇಲ್ಲ ಪ್ರಭು. ಎಲ್ಲಾ ಜೇಲಲ್ಲಿ ತುರುಕಿ ಬಿಟ್ಟಿದೀವಿ. ರಾಜ : ಕಾರಭಾರೀನ್ನ ಕಳಿಸು. ಅಂತರಂಗ ಮಾತಡ್ತೀವಿ. ನೀನು ಹೊರಗೆ ನಿಂತಿರು. ಪೊಲೀಸ್ : ಆಪ್ಪಣೆ ಪ್ರಭೂ (ಹೋಗುವನು, ಕಾರಭಾರಿ ಬರುವನು) ರಾಜ : ಏ ಕಾರಭಾರೀ, ಸಿಕ್ಕಳೇನೊ? ರಾಯಭಾರಿ : ಪ್ರಯತ್ನ ಮಾಡತಾ ಇದೀನಿ ಪ್ರಭೂ. [...]]]></description>
			<content:encoded><![CDATA[<p><em>(</em><em>ರಾಜ</em><em> </em><em>ಮತ್ತು</em><em> </em><em>ಪೊಲೀಸ್</em><em> </em><em>ಆಫೀಸರ್</em><em>)</em><em></em></p>
<p><em>ರಾಜ :</em> ಪೋಲಿಸ್ ಬಂದೋಬಸ್ತು ಸರಿಯಾಗಿದೆಯ?<span id="more-78452"></span></p>
<p>ಪೊಲೀಸ್ : ಎಲ್ಲ ಸರಿಯಾಗಿದೆ ಪ್ರಭೂ.</p>
<p>ರಾಜ : ಕ್ರಾಂತಿ ಗೀಂತಿ ವಗೈರೆ&#8230;.?</p>
<p>ಪೊಲೀಸ್ : ಏನೂ ಇಲ್ಲ ಪ್ರಭು. ಎಲ್ಲಾ ಜೇಲಲ್ಲಿ ತುರುಕಿ ಬಿಟ್ಟಿದೀವಿ.</p>
<p>ರಾಜ : ಕಾರಭಾರೀನ್ನ ಕಳಿಸು. ಅಂತರಂಗ ಮಾತಡ್ತೀವಿ. ನೀನು ಹೊರಗೆ ನಿಂತಿರು.</p>
<p>ಪೊಲೀಸ್ : ಆಪ್ಪಣೆ ಪ್ರಭೂ<em> (</em><em>ಹೋಗುವನು</em><em>, </em><em>ಕಾರಭಾರಿ</em><em> </em><em>ಬರುವನು</em><em>)</em><em></em></p>
<p><em>ರಾಜ :</em> ಏ ಕಾರಭಾರೀ, ಸಿಕ್ಕಳೇನೊ?</p>
<p>ರಾಯಭಾರಿ : ಪ್ರಯತ್ನ ಮಾಡತಾ ಇದೀನಿ ಪ್ರಭೂ.</p>
<p>ರಾಜ : ಎಷ್ಟು ದಿನ ಪ್ರಯತ್ನ ಮಾಡೋದು? ಶಿವಪುರವನ್ನಾಳುವ ಕಾಲ್ಮಡಿ ಮಹಾ ಪ್ರಭುಗಳಿಗೆ ಅವರು ನೋಡಿ ಇಷ್ಟಪಟ್ಟ ಒಂದು ಯಃಕಶ್ಚಿತ್ ಹುಡುಗಿ ಸಿಗ್ತಾ ಇಲ್ಲ ಅಂದರೆ ಜನ ನನ್ನ ನೋಡಿ ಒಳಗೊಳಗೇ ನಗೋದಿಲ್ಲವೇನೊ? ಜನ ನಕ್ಕರೆ ನಾನ್ಯಾಕೋ ಬದುಕಬೇಕು? ಪಟ್ಟಣದ ಪ್ರತಿಯೊಂದು ಮನೆ  ಹುಡಿಕಿದೆಯಾ?</p>
<p>ಕಾರಭಾರಿ : ಹುಡುಕಿದೆ ಪ್ರಭು.</p>
<p>ರಾಜ : ಆದರೂ ಹೆಂಗಸರು ಸಿಗಲಿಲ್ಲವ?</p>
<p>ಕಾರಭಾರಿ : ಹೆಂಗಸರಿದ್ದಾರೆ. ಆದರೆ ಹಸಿರು ಸೀರೆ, ನೀಲಿ ರವಕೆಯವಳು ಸಿಗ್ತಾ ಇಲ್ಲ ಪ್ರಭು. ಖಂಡಿತ ಇಷ್ಟರಲ್ಲೇ ಗುರುತು ಹಿಡೀತೀನಿ. ಇವತ್ತು ಸ್ವಲ್ಪ ವಿಷಯ ಗೊತ್ತಾಗಿದೆ. ಅವಳು ಶೆಟ್ಟರ ಮಗಳಂತೆ &#8230;.</p>
<p>ರಾಜ : ಹಸಿರು ಸೀರೆ, ನೀಲಿ ರವಕೆ &#8211; ಗುರುತಿಟ್ಟುಕೋ ಮಗನೆ; ಮರೆಯಬೇಡ. ಅಹಾ ಚೆಲುವೆ ಅಂದರೆ ಅವಳಯ್ಯಾ! ಉದ್ಯಾನವನ ಲೇ ಕಾರಭಾರೀ, ಕಲ್ಪನಾ ಮಾಡು, &#8211; ಉದ್ಯಾನವನ-</p>
<p>ಪೊಲೀಸ್ : <em>(</em><em>ಒಳಬಂದು</em><em> </em><em>ನಮಸ್ಕರಿಸಿ</em><em>) </em>ಪ್ರಭು ತಮ್ಮ ದರ್ಶನಕ್ಕಾಗಿ ಗಣ್ಯ ನಾಗರಿಕರ ನಿಯೋಗ ಬಂದಿದೆ.</p>
<p>ರಾಜ : ಅಂತರಂಗ ಮಾತಾಡ್ತಿದೀವಿ ಅಂತ ಹೇಳಲಿಲ್ಲವಾ?</p>
<p>ಪೊಲೀಸ್ : ಹೆಳಿದೆ ಪ್ರಭು. ಆದರೂ ತಮ್ಮ ದರ್ಶನ ಪಡೀಲೇಬೇಕಂತಿದಾರೆ.</p>
<p>ರಾಜ : ಯಾತಕ್ಕಂತೆ?</p>
<p>ಪೊಲೀಸ್ : ಮನವಿ ಇಲ್ಲಿದೆ ಪ್ರಭು.</p>
<p>ರಾಜ : ಒಂದು ವಾಕ್ಯದಲ್ಲಿ ಸಾರಾಂಶ ಓದು.</p>
<p>ಪೊಲೀಸ್ : (ಓದುತ್ತ) ಹಾಯ್ ಹಾಯ್ ! ನಮ್ಮ ಜೀವನಕ್ಕೆ ಧಿಕ್ಕಾರ! ಕೂತರೆ ತೆರಿಗೆ, ನಿಂತರೆ ತೆರಿಗೆ, ಹಲ್ಲುಜ್ಜಿದರೆ ತೆರಿಗೆ, ಬಟ್ಟೆ ಹಾಕಿದರೆ. ತೆರಿಗೆ ಆ ತೆರಿಗೆ ಈ ತೆರಿಗೆ ಊರಿಗೆ&#8230;. ಸಾರಾಂಶ ಅಂದರೆ &#8211; ಪ್ರಜೆಗಳು ತೆರಿಗೆಯ ಭಾರದಲ್ಲಿ ತೊಳಲುತ್ತಿದ್ದಾರೆ ಪ್ರಭೂ.</p>
<p>ರಾಜ : ಅರ್ಥವಾಯಿತು. ಮತ್ತೆ ಯಾಕೆ ನಿಂತೆ? ಹೋಗು. ಅಂತರಂಗ ಮುಗಿಯೋತನಕ ಇನ್ನೊಂದು ಬಾರಿ ನೀನು ಒಳಗೆ ಬಂದರೆ ಮಗನೇ ನಿನ್ನ ಚರ್ಮ ಸುಲೀತೇನೆ. <em>(</em><em>ಪೊಲೀಸ್</em><em> </em><em>ಗಾಬರಿಯಲ್ಲಿ</em><em> </em><em>ಹೋಗುವನು</em><em>) </em>ಛೇ, ಏನು ಜನರಯ್ಯಾ ಇವರು, ಮೂಡನ್ನೆಲ್ಲಾ ಹಾಳು ಮಾಡಿಬಿಡ್ತಾರೆ! ಏನ್ನ ಹೇಳತಿದ್ದೆ?</p>
<p>ಕಾರಭಾರಿ : ಉದ್ಯಾನವನ!</p>
<p>ರಾಜ : ಹಾ, ಉದ್ಯಾನವನ! ಕಾರಭಾರೀ, ಉದ್ಯಾನವನ! ಹಕ್ಕಿಪಕ್ಕಿ ಗಿಡಗಂಟಿಗಳು ಒದರುತ್ತಿವೆ! ಇನ್ನೊಂದೆಡೆ ಕೋಗಿಲೆ ಕಾಲು ಕೆದರುತ್ತ ಧೂಳೆಬ್ಬಿಸಿದೆ! ಬೆಳ್ದಿಂಗಳು ಅಕ್ಕೀ ಹಿಟ್ಟಿನಂತೆ ಸುರಿಯುತ್ತಿದೆ! ಆಗ ಆ ಚೆಲುವೆ, ಅದೇ ಹಸಿರು ಸೀರೆ, ನೀಲಿ ರವಕೆಯ ಹುಡುಗಿ &#8211; ಹಾಡಿಪಾಡಿ ನಲಿಯುತ್ತ, ಥೈ ಥೈ ಕುಣಿಯುತ್ತ, ಚಳ್ಳಂಗ ಪಳ್ಳಂಗ ಗಜ್ಜೆನಾದ ಮಾಡುತ್ತ, ಪೀಪೀಪೀ ಢಂಢಂಢಂ ಬಾಜಾ ಬಜಂತ್ರಿ ಸಮೇತ ಬರುತ್ತಾಳೆ! ಬಂದಳೇನಯ್ಯಾ?</p>
<p>ಕಾರಭಾರಿ : ಬಂದಳು ಪ್ರಭು. ಉದ್ಯಾನವನದಲ್ಲಿ ನನಗೂ ಪ್ರವೇಶ ಇದೆಯಾ ಪ್ರಭು?</p>
<p>ರಾಜ : ಹೌದಯ್ಯಾ, ನಿನ್ನ ಸಹಕಾರ ಇಲ್ಲದೆ ನಾನೊಬ್ಬನೇ ಎಷ್ಟಂತ ಪ್ರೀತಿ ಮಾಡಲಿ? ಆದರೆ ಹುಲ್ಲು ಮೇಯುತ್ತಿರೋ ಕೋಗಿಲೆ ಮರಿ ಓಡಿ ಹೋಗದ ಹಾಗೆ ಬಾ ಅಷ್ಟೆ.</p>
<p>ಕಾರಭಾರಿ : ಕೋಗಿಲೆಮರಿ ಹುಲ್ಲ ಮೇಯುತ್ತಿದೆಯೆ? ಕೋಗಿಲೆ ಒಂದು ಪಕ್ಷಿ ಅಲ್ಲವೆ ಪ್ರಭು?</p>
<p>ರಾಜ : ಮಗನೇ ಅದೊಂದು ಪ್ರಾಣಿ, ಅದು ಹಕ್ಕಿ ಆದರೆ ನಿನ್ನ ಹಲ್ಲು ಮುರೀತೇನೆ.</p>
<p>ಕಾರಭಾರಿ : ಅರರೇ ಹೌದಲ್ಲ! ಅದೊಂದು ಪ್ರಾಣಿಯೇ ಇರಬೇಕು ನಾಲಕ್ಕು ಕಾಲು&#8230;.?</p>
<p>ರಾಜ : ಉದ್ದ ಬಾಲ, ಕುದುರೆ ಥರ ಮುಖ- ಆದರೆ ಕವಿ ಚಿಕ್ಕದು. ಆಕಾಶದ ಕಡೆ ಮುಖ ಮಾಡಿ ಬಾಲ ನಿಗರಿಸಿ ಒದರುತ್ತೆ. ನಮ್ಮ ಉದ್ಯಾನವನದಲ್ಲಿ ಬೇಕಾದಷ್ಟಿವೆ. ಅದು ನಮ್ಮ ರಾಷ್ಟ್ರೀಯ ಪ್ರಾಣಿ ಮಗನೇ.</p>
<p>ಕಾರಭಾರಿ : ನಿಜ ನಿಜ. ಮೊದಮೊದಲು ನಿಮ್ಮ ಮಾತು ಕೇಳಿ ನನಗೆ ಕತ್ತೆ ನೆನಪಾಗಿತ್ತು.</p>
<p>ರಾಜ : ಅದರದ್ದೊಂದು ಕಥೆ ಇದೆ. ಕತ್ತೆ ಮನುಷ್ಯರ ಥರ ಇರುತ್ತೆ, ಬೇಜಾರಾದಾಗಲೆಲ್ಲಾ ಒದರುತ್ತೆ. ಆದರೆ ನನಗೆ ಆ ಪ್ರಾಣಿ ಬಗ್ಗೆ ಯಾಕಪ್ಪಾ ನಿರಾಸೆ ಅಂದರೆ ಅದು ಒದೆಯುತ್ತೆ ಕಣೊ. ಒದೆಯೋ ಹಕ್ಕು ರಾಜರಿಕಗೆ ಮಾತ್ರ ಇರಬೇಕು. ಏನಂತಿ?</p>
<p>ಕಾರಭಾರಿ : ಅಲ್ಲವೆ?</p>
<p>ರಾಜ : ಈ ಕ್ರಾಂತಿಕಾರಿ ನನ್ನ ಮಕ್ಕಳು ತಮಗೂ ಒದೆಯೋ ಹಕ್ಕು ಬೇಕಂತಾರೆ!</p>
<p>ಕಾರಭಾರಿ : ತಪ್ಪಲ್ಲವೇ?</p>
<p>ರಾಜ : ಉದ್ಯಾನವನ ಅಲ್ಲೇ ಬಿಟ್ಟೆವಲ್ಲಯ್ಯಾ. ಅವಳು ಬಂದು ಸುಮ್ಮನೆ ನಿಂತಿದಾಳೆ! ಮುಂದೆ ಏನು ಮಾಡಬೇಕು ಹೇಳು.</p>
<p>ಕಾರಭಾರಿ : ಅಂದರೆ ಹೀಗೆ ಪ್ರಭು: ಆ ಹುಡುಗಿ ಅಲ್ಲಿದಾಳೆ ಅಂತ ಇಟ್ಟುಕೊಳ್ಳಿ. ತಾವು ಇಲ್ಲಿದೀರಿ. ನಾನು ಅವಳ ಪಕ್ಕದಲ್ಲಿದೀನಿ.</p>
<p>ರಾಜ : ಅದ್ಯಾಕಂತೆ ನೀ ಅವಳ ಪಕ್ಕ ಇರಬೇಕು? ನಾನೇ ಅವಳ ಪಕ್ಕ ಇರತೀನಿ, ನೀ ಇಲ್ಲಿರು.</p>
<p>ಕಾರಭಾರಿ : ಅಲ್ಲಲ್ಲ ಹಾಗೆ ತಿಳಕೊಳ್ಳಿ ಅಷ್ಟೆ.</p>
<p>ರಾಜ :ಅದೇ ಮತ್ತೆ, ನಾ ಹೇಳಿದ ಹಾಗೇ ತಿಳಕೊಳ್ಳೋಣ.</p>
<p>ಕಾರಭಾರಿ : ಅಲ್ಲ ಪ್ರಭು, ಈಗಷ್ಟೇ ನಾನವಳನ್ನು ಕರಕೊಂಬಂದಿದ್ದೇನೆ. ಅದಕ್ಕೆ ಅವಳು ನನ್ನ ಪಕ್ಕದಲ್ಲಿದ್ದಾಳೆ. ಈಗ ನನ್ನ ಪಕ್ಕದಿಂದ ತಮ್ಮ ಹತ್ತಿರಕ್ಕೆ ಬರುತ್ತಾಳೆ.</p>
<p>ರಾಜ : ಹಾಗೋ? ಸರಿ.</p>
<p>ಕಾರಭಾರಿ : ತಾವು ಇಲ್ಲಿದೀರಿ. ಆಕೆ ಬಂದಳು. ಹ್ಯಾಗೆ ನಿಂತಿರತೀರಿ? ತೋರಿಸಿ ನೋಡೋಣ.</p>
<p>ರಾಜ : ಹೀಗೆ ನಿಂತಿರಲಾ?</p>
<p>ಕಾರಭಾರಿ : ನಿಲ್ಲೋದಕ್ಕೊಂದು ಶೈಲಿ ಇದ್ದರೆ ಒಳ್ಳೇದಲ್ಲವ?</p>
<p>ರಾಜ : ಹೀಗೆ?</p>
<p>ಕಾರಭಾರಿ : ಈಗ ಸರಿ. ನೋಡಿ ನಾನೇ ಅವಳೂಂತಿಟ್ಟುಕೊಳ್ಳಿ. ಇಕಾ ಬಂದೆ. ಏನ್ ಮಾಡ್ತೀರಿ?</p>
<p>ರಾಜ : ಏನ್-ಮಾಡಲಿ?</p>
<p>ಕಾರಭಾರಿ : ಛೇ ಬಗ್ಗಿ ಪುರ್ ಮಾಡಬೇಕಷ್ಟೆ.</p>
<p>ರಾಜ : <em>(</em><em>ಬಗ್ಗಿ</em><em>)</em> ಪುರ್ ರ್ ರ್!</p>
<p>ಕಾರಭಾರಿ : ಹಾಗಲ್ಲ ಪ್ರಭು. ಅವಳು ಬರತ್ತಿರೋ ಹಾಗೇನೇ ಒಂದು ಮುಗುಳು ನಕ್ಕು ಪ್ರಿಯೇ ಅಂತ ಒಂದು ಮುದ್ದು ಎಸೀಬೇಕು. ಹ್ಯಾಗೆ ಹೇಳಿ?</p>
<p>ರಾಜ : ಪ್ರೀಯೆ!</p>
<p>ಕಾರಭಾರಿ : ಹಾಗಲ್ಲ ಒಂಚೂರು ಗತ್ತಿನಿಂದ ಮುದ್ದು ಅವಳ ಕಡೆ ಎಸೀತೀರಲ್ಲ, ಹಾಗೇ ಅವಳು ತನ್ನ ಹೃದಯ ನಿಮ್ಮ ಕಡೆ ಎಸೆದಿರಬೇಕು, ಆ ಥರ ಇರಬೇಕು ನಿಮ್ಮ ಗತ್ತು.</p>
<p>ರಾಜ : ನೀನು ತೋರಿಸುವಾಗ ನಿನ್ನ ಮುಖ ಎಂಜಲೆಲೆ ಥರ ಆಗಿತ್ತು. ನಾನೂ ಹಾಗೇ ಮಾಡಬೇಕು?</p>
<p>ಕಾರಭಾರಿ : ತಾವು ಸ್ವಾಭಾವಿಕವಾಗಿ ಮಾಡಿ.</p>
<p>ರಾಜ : ಪ್ರೀಯೆ.</p>
<p>ಕಾರಭಾರಿ : ಈಗ ತಾವು ಮೊಳಕಾಲೂರಿ ಎರಡೂ ಕೈಯಿಂದ ಎದೆ ಮುಟ್ಟಿಕೊಂಡು ಮಾತಾಡಬೇಕು. ಆ ಹುಡುಗೀ ಹಾಗೇ ಇನ್ನೊಮ್ಮೆ ಬರಲಾ? <em>(</em><em>ಕಾರಭಾರಿ</em><em> </em><em>ಹೆಂಗಸಿನ</em><em> </em><em>ವಯ್ಯಾರ</em><em> </em><em>ಮಾಡುತ್ತ</em><em> </em><em>ಬರುವನು</em><em>)</em><em></em></p>
<p><em>ರಾಜ :</em> ಅಯ್ಯಯೋ, ನನಗೆ ನಾಚಿಕೆ ಬರತ್ತಾ ಇದೆ!<em> (</em><em>ಮುಖ</em><em> </em><em>ಮುಚ್ಚಿಕೊಳ್ಳುವನು</em><em>)</em><em></em></p>
<p><em>ಕಾರಭಾರಿ :</em> ನಾಚಬೇಕಾದವಳು ಅವಳಲ್ಲವೇ ಪ್ರಭು?</p>
<p>ರಾಜ : ಹಾಗಿದ್ದರೆ ನಾ ಏನು ಹೇಳಬೇಕು, ಹ್ಯಾಗೆ ಹೇಳಬೇಕು-ಎಲ್ಲಾ ನೀನೇ ಮಾಡಿ ತೋರಿಸು.</p>
<p>ಕಾರಭಾರಿ : ತಾವು ಅವಳು ಅಂತ ಇಟ್ಟುಕೊಳ್ಳಿ, ನಾನು ತಾವು, ಇಲ್ಲಿ ಹೀಗೆ ಕೂತಿದೀನಿ<em>. (</em><em>ಮೊಳಕಾಲೂರಿ</em><em> </em><em>ಕುಳಿತು</em><em> </em><em>ಎರಡೂ</em><em> </em><em>ಕೈಗಳಿಂದ</em><em> </em><em>ಎದೆ</em><em> </em><em>ಹಿಡಿದುಕೊಂಡು</em><em>)</em> ಪ್ರಿಯೆ, ನಾನು ನಿನಗೆ ಈವಾಗೊಂದು ಮಾತನ್ನು ಹೇಳಲೇಬೇಕು. ಯಾಕೆಂದರೆ ನನ್ನ ಆತ್ಮಕ್ಕೆ ನೋವಾಗಿದೆ. ಆತ್ಮ ದೇಹದಲ್ಲಿದೆ. ದೇಹದಿಂದ ನಾವು ಬದುಕುತ್ತೇವೆ. ನಾವು ಬದುಕೋದು ಜೀವನದಲ್ಲಿ. ಆದರೆ ಜೀವನವು ಜಗತ್ತಿಗಿಂತ ದೊಡ್ಡದೆಂದು ಅಥವಾ ಸಣ್ಣದೆಂದು ಹುತಾತ್ಮರು ಅಲ್ಲ, ಮಹಾತ್ಮರು ಹೇಳಿರುವರು. ಆದ್ದರಿಂದಲೇ ನಾನು ಹೇಳಬೇಕಾಗಿರುವುದೇನೆಂದರೆ ಜೀವನವು ನಮಗಿಂತ ದೊಡ್ಡದು. ಯಾಕೆಂದರೆ ಅದರಲ್ಲಿ ಪ್ರೀತಿ ಪ್ರೇಮ ಇದೆ. ಅಂಥಾ ಪ್ರೇಮವೆಂಬ ಪಾಶದಲ್ಲಿ ಸಿಕ್ಕುಬಿದ್ದು ನಾನು ವಿಲವಿಲ ಒದ್ದಾಡುತ್ತಿರುವೆನು! ಹ್ಯಾಗನಿಸ್ತು ಪ್ರಭು?</p>
<p>ರಾಜ : ಗಳಗಳ ಅಳೋಣ ಅನ್ನಿಸ್ತು. ಅಲ್ಲವೋ ಇದರಲ್ಲೊಂದು ಪ್ರಾಸ, ಒಂದುಲಯ, ಒಂದು ಗತ್ತು- ಏನಿತ್ತೊ ಇದರಲ್ಲಿ? ಛೇ ಛೇ ನೀನಿಂಥಾ ಗದ್ಯಾತ್ಮಕ ಅಂತ ಗೊತ್ತಿರಲಿಲ್ಲ ಬಿಡು. ಗದ್ಯಂ ಪದ್ಯಂ ವದ್ಯಂಹ್ರದ್ಯಂ ಅಂತ ಹಿರೇರು ಹೇಳೋದನ್ನ ಕೇಳಿಲ್ಲವೇನಯ್ಯಾ? ಹ್ಯಾಗಿರಬೇಕು ಗೊತ್ತ ಡೈಲಾಗು? ನಾ ಹೇಳ್ತೀನಿ ಕೇಳು :<br />
ನಾ ಅಂತೀನಿ : ಪ್ರೀಯೆ!<br />
ಅವಳಂತಾಳೆ : ಪ್ರೀಯಕರಾ!<br />
ನಾ ಅಂತೀನಿ : ಅಯ್ಯೋ ಪ್ರೀಯೆ!, ನೀ ಎನ್ನ ಹೃದಯದಲ್ಲಿ ಒಂದು ಕುರ್ಚಿಹಾಕಿ ಕುಳಿತುಕೊಂಡಿರುವೆ. ಜೀವ ಬಿಟ್ಟೇನು. ಆದರೆ ಆ ಕುರ್ಚಿಯಿಂದ ನಿನ್ನನ್ನು ಕೆಳಕ್ಕೆ ಇಳಿಸೋದಿಲ್ಲ.<br />
ಅವಳಂತಾಳೆ : ಹಾ ಪ್ರೀಯಕರಾ! ನಲ್ಮೆಯ ನಲ್ಲನಾದ ನೀನಿಲ್ಲದ್ದರಿಂದ ಖುಲ್ಲಮಾರನು ಎನ್ನ ಪುಲ್ಲತರವ ಮಾಡಿ ಗುಲ್ಲು ಮಾಡುವನು. ಛಲವನ್ನು ತೋರದೆ ನೀನೀಗಲೇ ಬಂದು ಎನ್ನಲಿ ಸೇರಬಾರದೆ?<br />
ನಾ ಅಂತೀನಿ: ಹಾ ಪ್ರೀಯೆ ಪ್ರಶಾಂತ ಹೃದಯೆ! ಈ ಬಾಳು ಸರಸ, ಇನ್ನೇಕೆ ವಿರಸ ಸವಿಯುವಾ ಸಂತಸ. ಕುಸುಮ ಶಯನದಿ ದಶವಿಧ ಚುಂಬಿಸುತ ಹಸನಾಗಿ ಸುಖದೋರಬಾರದೆ? ಗಮನಿಸಾ ದಮದಸಾ ಪಗಪಗಪಗ ಪಗರಿಕಸಾ ಕರಗಸಾ!<br />
ಹ್ಯಾಗಿತ್ತು?</p>
<p>ಕಾರಭಾರಿ : <em>(</em><em>ಚಪ್ಪಾಳೆ</em><em> </em><em>ತಟ್ಟಿ</em><em>) </em>ಅದ್ಭುತವಾಗಿತ್ತು ಪ್ರಭು! ಕೇವಲ ಅದ್ಭುತ! ಆದರೆ ಇಂಥ ಅದ್ಭುತ ದೃಶ್ಯ ಉದ್ಯಾನವನದಲ್ಲಿ ಚೆನ್ನಾಗಿ ಬರೋದಿಲ್ಲ ಪ್ರಭು.</p>
<p>ರಾಜ : ಯಾಕೆ?</p>
<p>ಕಾರಭಾರಿ : ಉದ್ಯಾನವನದಲ್ಲಿ ರಾತ್ರಿ ವಿಪರೀತ ಸೊಳ್ಳೆ ಕಾಟ. ಚಳಿ ಬೇರೆ. ಈ ಡೈಲಾಗು ಹೇಳುವಾಗ ಬಾಯಲ್ಲಿ ಸೊಳ್ಳೆ ಹೊಕ್ಕರೆ ಕಷ್ಟವಲ್ಲವೆ ಪ್ರಭು? ಇದು ವಿಶ್ರಾಂತಿ ಗೃಹದಲ್ಲಾದರೇ ಶೋಭೆ ಹೆಚ್ಚಲ್ಲವೇ?</p>
<p>ರಾಜ : ಹಾಗಂತೀಯಾ? ಹಾಗಿದ್ದರೆ ಆ ಹುಡುಗಿ &#8211; ಅದೇ ಹಸಿರು ಸೀರೆ, ನೀಲಿ ರವಕೆ ಯೋಳು ಸಿಕ್ಕ ತಕ್ಷಣವೇ ದನಮ್ಮ ವಿಶ್ರಾಂತಿ ಗೃಹದಲ್ಲಿ ವ್ಯವಸ್ಥೆ ಮಾಡು.</p>
<p><strong>ಕೇಳಯ್ಯ</strong><strong> </strong><strong>ಕಾರಭಾರಿ</strong><strong><br />
</strong><strong>ಸಿಕ್ಕರೆ</strong><strong> </strong><strong>ಆ</strong><strong> </strong><strong>ಹುಡುಗಿ</strong><strong>!</strong><strong><br />
</strong><strong>ಕರತಾರೊ</strong><strong> </strong><strong>ಆ</strong><strong> </strong><strong>ಕ್ಷಣ</strong><strong><br />
</strong><strong>ನಮ್ಮ</strong><strong> </strong><strong>ವಿಶ್ರಾಂತಿ</strong><strong> </strong><strong>ಗೃಹಕೇ</strong><strong></strong></p>
<p><strong>ಕಾರಭಾರಿ :</strong> ಹಾಗೆ ಅಗಲಿ ಪ್ರಭು.</p>
]]></content:encoded>
			<wfw:commentRss>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%a8/feed/</wfw:commentRss>
		<slash:comments>0</slash:comments>
		</item>
		<item>
		<title>ಸಾಂಬಶಿವ ಪ್ರಹಸನ : ದೃಶ್ಯ &#8211; ೪</title>
		<link>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%aa/</link>
		<comments>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%aa/#comments</comments>
		<pubDate>Fri, 22 Mar 2013 00:36:49 +0000</pubDate>
		<dc:creator>kanaja</dc:creator>
				<category><![CDATA[ಕನ್ನಡ]]></category>
		<category><![CDATA[ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ]]></category>
		<category><![CDATA[ಡಾ. ಚಂದ್ರಶೇಖರ ಕಂಬಾರ]]></category>

		<guid isPermaLink="false">http://kanaja.in/?p=78456</guid>
		<description><![CDATA[(ಸಾಹುಕಾರನ ಮನೆ, ಗಜನಿಂಬೆ ಕಿಟಕಿ ಹತ್ತಿರ ನಿಂತಿದ್ದಾಳೆ. ಸಾಂಬ, ಅಂದರೆ ಬಂಗಾರಿ ಗಜನಿಂಬೆಯ ಹತ್ತಿರ ನಿಂತಿದ್ದಾಳೆ) ಗಜನಿಂಬೆ :         ನಾ ತಾಳೆ! ಈ ವೇದನೆ         ಅಗಲಿಕೆಯಾ  ಪ         ಸ್ಮರನಾ ಬಾಣಾ ಸಹಿಸೆ ನಾನಾ ಅ.ಪ         ಪ್ರಿಯ ಯಾಕೆ ಬರದೆ ನಿಂತಾ ಕಾಂತಾ         ಸ್ಮರನಿಗೆ ತರುಣಿಯ         ವಶಗೈಯುತಾ (ಸ್ವಗತ) ಆಹಾ ಮೊನ್ನೆಯಷ್ಟೇ ಆ ತರುಣನು ನನ್ನ ಮಾನಸವನ್ನು ಕದ್ದು ಮರುಳು ಮಾಡಿ ಹೋದಾಗಿನಿಂದ ನನ್ನ ಹೃದಯವು ವಿರಹದ ಉರಿಯಲ್ಲಿ ಬೇಯುತ್ತಿರುವುದು. [...]]]></description>
			<content:encoded><![CDATA[<p><em>(</em><em>ಸಾಹುಕಾರನ</em><em> </em><em>ಮನೆ</em><em>, </em><em>ಗಜನಿಂಬೆ</em><em> </em><em>ಕಿಟಕಿ</em><em> </em><em>ಹತ್ತಿರ</em><em> </em><em>ನಿಂತಿದ್ದಾಳೆ</em><em>. </em><em>ಸಾಂಬ</em><em>, </em><em>ಅಂದರೆ</em><em> </em><em>ಬಂಗಾರಿ</em><em> </em><em>ಗಜನಿಂಬೆಯ</em><em> </em><em>ಹತ್ತಿರ</em><em> </em><em>ನಿಂತಿದ್ದಾಳೆ</em><em>)<span id="more-78456"></span></em></p>
<p>ಗಜನಿಂಬೆ :<br />
<strong>        ನಾ</strong><strong> </strong><strong>ತಾಳೆ</strong><strong>! </strong><strong>ಈ</strong><strong> </strong><strong>ವೇದನೆ</strong><strong><br />
</strong><strong>        ಅಗಲಿಕೆಯಾ</strong><strong>  </strong><strong>ಪ</strong><strong><br />
</strong><strong>        ಸ್ಮರನಾ</strong><strong> </strong><strong>ಬಾಣಾ</strong><strong> </strong><strong>ಸಹಿಸೆ</strong><strong> </strong><strong>ನಾನಾ</strong><strong> </strong><strong>ಅ</strong><strong>.</strong><strong>ಪ</strong><strong><br />
</strong><strong>        ಪ್ರಿಯ</strong><strong> </strong><strong>ಯಾಕೆ</strong><strong> </strong><strong>ಬರದೆ</strong><strong> </strong><strong>ನಿಂತಾ</strong><strong> </strong><strong>ಕಾಂತಾ</strong><strong> </strong><strong><br />
</strong><strong>        ಸ್ಮರನಿಗೆ</strong><strong> </strong><strong>ತರುಣಿಯ</strong><strong><br />
</strong><strong>        ವಶಗೈಯುತಾ</strong><strong> </strong></p>
<p><em></em></p>
<p><em>(</em><em>ಸ್ವಗತ</em><em>)</em> ಆಹಾ ಮೊನ್ನೆಯಷ್ಟೇ ಆ ತರುಣನು ನನ್ನ ಮಾನಸವನ್ನು ಕದ್ದು ಮರುಳು ಮಾಡಿ ಹೋದಾಗಿನಿಂದ ನನ್ನ ಹೃದಯವು ವಿರಹದ ಉರಿಯಲ್ಲಿ ಬೇಯುತ್ತಿರುವುದು. ನನ್ನಂಥ ಕೋಮಲ ತರುಣಿಯನ್ನು ಮಾರಶರಘಾತಕ್ಕೆ ಗುರಿ ಮಾಡಿ ಹೋಗುವುದು ತರವಲ್ಲ ಅಂತ ಆತನಿಗೆ ಬುದ್ಧಿ ಹೇಳುವವರು ಯಾರು? ನಲ್ಲನನ್ನು ಕಾಣದೆ ನನ್ನ ಮನವು ನಿಲ್ಲದಾಗಿದೆ. ರಾತ್ರಿ ನಿದ್ದೆ ಇಲ್ಲದೆ ಹೊರಳಿ ಹೊರಳಿ ಸಾಯುತ್ತಿದ್ದೇನೆ ಅಂತ ಅವನಿಗೆ ಹೇಳುವವರು ಯಾರು? ಆಹಾ! ಅಗೋ ಅವನೇ ಬಂದ. ಈ ಹೆಂಗಸು ನಮ್ಮ ಮನೆಯಲ್ಲಿ ಆಳಿನ ಕೆಲಸ ಕೊಡಿರೆಂದು ಅಂಗಲಾಚಿ ಕೇಳುತ್ತಿದ್ದಾಳೆ. ಅಮ್ಮನಿಗೆ ಹೇಳಿ ಕೆಲಸ ಕೊಡಿಸಿ, ಅವಳನ್ನು ಮೊದಲು ಆಪ್ತ ಸಖಿಯನ್ನಾಗಿ ಮಾಡಿಕೊಳ್ಳುತ್ತೇನೆ. ಆಮೇಲೆ ಇವಳ ಸಹಾಯದಿಂದ ಆ ಕಳ್ಳನನ್ನು ಹಿಡಿಯುತ್ತೇನೆ. <em>(</em><em>ಪ್ರಕಾಶ</em><em>) </em>ಏನೇ ಕೆಲಸ ಬೇಕೂ ಅಂದ್ರೆ ಅಮ್ಮ ಬರೋತನಕ ಕಾಯಬೇಕು. ನಿನ್ನ ಹೆಸರೇನಂದೆ?</p>
<p>ಸಾಂಬ : ಬಂಗಾರಿ.</p>
<p>ಗಜನಿಂಬೆ : ಇದೇ ಊರಿನವಳಾ?</p>
<p>ಸಾಂಬ : ಹೌದು.</p>
<p>ಗಜನಿಂಬೆ : ಬಂಗಾರಿ, ಆ ಹಿತ್ತಲ ಹತ್ರ ಒಬ್ಬ ಹುಡುಗಾ ನಿಂತಾನ್ನೋಡು. ಯಾರವನು? ಗೊತ್ತಾ ನಿನಗೇನಾದರೂ?</p>
<p>ಸಾಂಬ : <em>(</em><em>ನೋಡಿ</em><em> </em><em>ತನ್ನಲ್ಲೇ</em><em>)</em> ನನ್ನ ಮಗ ಆಗಲೆ ಹಾಜರಾಗಿ ಬಿಟ್ಟನಾ! <em>(</em><em>ಪ್ರಕಾಶ</em><em>) </em>ಗೊತ್ತೂ ತಾಯಿ. ನಮ್ಮ ಗಲ್ಲೀಯವನೆ.</p>
<p>ಗಜನಿಂಬೆ : ನಿಮ್ಮ ಗಲ್ಲಿಯವನಾ? ಏನು ಅವನ ಹೆಸರು?</p>
<p>ಸಾಂಬ : ಶಿವ ಅಂತ. ಯಾಕ್ರಿ ಅವ್ವ?</p>
<p>ಗಜನಿಂಬೆ : ಈಗ ಮೂರು ದಿನದಿಂದ ಅವನು ಅಲ್ಲೇ ನಿಂತಿರತ್ತಾನೆ. ಜೊತೆಗೊಬ್ಬ ಮುದುಕನೂ ಇದ್ದ. ಇವೊತ್ತು ಯಾಕೋ ಬಂದಿಲ್ಲ ಅವನು.</p>
<p>ಸಾಂಬ : ಆ ಮುದುಕ ಹೆಂಗೆ, ನೋಡೋದಕ್ಕೆ ಚೆನ್ನಾಗಿದ್ದನಾ?</p>
<p>ಗಜನಿಂಬೆ : ಥೂ ಮುದಿಕೋತಿ ಥರಾ ಇದ್ದ. ಸ್ವಲ್ಪ ಹೆಚ್ಚು ಕಮ್ಮಿ ನಿನ್ನ ಹಾಗೇ ಅಂದುಕೋ. ಹುಡುಗ ಮಾತ್ರ ತುಂಬ ಚೆಲುವ, ಅಲ್ಲೇನೆ?</p>
<p>ಸಾಂಬ : ಎಂಥ ಚೆಲುವಿಕೆ ಬಿಡಮ್ಮ. ಮಾರಿದರೆ ಎರಡು ಬೀಡಿ ಬರೋದಿಲ್ಲ. ಅವನ ಮುಸಡಿ ನೋಡಿ! ಸರಿಯಾಗಿ ನಗೋದಕ್ಕೂ ಬರೋದಿಲ್ವೆ. ಆ ಇನ್ನೊಬ್ಬ; ಸ್ವಲ್ಪ ವಯಸ್ಸಾದೋನು ಅಂದಿರಲ್ಲ, ಆತ ನೋಡಿ ತುಂಬಾ ರಸಿಕ. ವಯಸ್ಸೂ ಜಾಸ್ತಿ ಆಗಿಲ್ಲ ಅವನಿಗೆ. ಏನ್ ಚೆಂದ ಹಾಡ್ತಾನೆ, ಕುಣೀತಾನೆ, ಜನ ಅವನ್ನ ಏನ್ ಕೇಳ್ತಾರೆ ಗೊತ್ತಾ? ‘ಸ್ವಾಮಿ ನಿಮ್ಮ ಯೌವ್ವನದ ಗುಟ್ಟೇನು?’</p>
<p>ಗಜನಿಂಬೆ : ಥೂ ಆ ಕಪಿ ಮುಂಡೇದನ್ನದ ನೋಡಿದರೆ ಅದರ ಮುಖದ ಮೇಲೆ ವಾಂತಿ ಮಾಡೋಣ ಅನ್ಸುತ್ತೆ. ಅವನ ಮುಂದೆ ನೀನೇ ವಾಸಿ. ಆದರೆ ಆ ಹುಡುಗ ಇದಾನಲ್ಲ, ಒಳ್ಳೆ ಕಾಮ, ಕಾಮಣ್ಣ ಕಣೆ.</p>
<p>ಸಾಂಬ : ಕಳ್ಳ ನನಮಗ ಕಣಮ್ಮ ಅವನು. ಅವನ ಜೊತೆಗಿದ್ದಾನಲ್ಲ ಸ್ವಲ್ಪ ವಯಸ್ಸಾದೋನು, ಆತ ನೋಡಿ ಮಹಾ ಸಜ್ಜನ! ಈ ಮುಂಡೇದಕ್ಕೆ ಅವನ ಹಾಗೆ ಉಗಿಯೋದಕ್ಕೂಬರೋದಿಲ್ವೆ.</p>
<p>ಗಜನಿಂಬೆ : ಆ ಮುದಿಯನ ಬಗ್ಗೆ ನಿನಗೆ ಅಷ್ಟೊಂದು ಪ್ರೀತಿ ಇದ್ರೆ ಅವನ ಬೆನ್ನು ಹತ್ತಿ ಹೋಗು. ಇಲ್ಲಿಗೆ ಯಾಕೆ ಬಂದೆ? ಇನ್ನೊಂದು ಸಲ ಅವನ ವಿಷಯ ಹೇಳಿದ್ರೆ ನಿನ್ನ ಕೆಲಸಾನೂ ಬೇಡ, ನೀನೂ ಬೇಡ. ಸಧ್ಯ ಈ ದಿನ ಅದ್ಯಾಕೋ ಆ ಮುದಿಗೂಬೆ ಬಂದಿಲ್ಲ.</p>
<p>ಸಾಂಬ : <em>(</em><em>ಸ್ವಗತ</em><em>) </em>ಸಾಂಬಾ ಇದು ನಿನ್ನ ಕೇಸಲ್ಲ ಕಣೊ. ಅಲ್ಲ, ಇಷ್ಟು ದಿವಸ ನನ್ನ ಮಗನ್ನ ಪೆದ್ದು ಮುಂಡೇದೂ ಅಂತಿದ್ದೆ. ಇಲ್ಲಿ ನೋಡಿದ್ರೆ ಈ ಹುಡಿಗೀ ಎದೆಯೊಳಗೇನೋ ಗಡಿಬಿಡಿ ಮಾಡಿಬಿಟ್ಟಿದ್ದಾನೆ! ಬಲ್ನನ್ಮಗಾ! ಬಲ್ನನ್ಮಗಾ!ಶಿವ ನನಗೆ ವಯಸ್ಸಾಯ್ತು ಅಂತ ಒಪ್ಪಿಕೊಮಡೆ ಕಣೊ.</p>
<p>ಗಜನಿಂಬೆ : ವಯಸ್ಸೆಷ್ಟು?</p>
<p>ಸಾಂಬ : ಯಾರದು, ನನ್ನ ವಯಸ್ಸಾ?</p>
<p>ಗಜನಿಂಬೆ : ಥೂ, ಆ ಹುಡುಗಂದು.</p>
<p>ಸಾಂಬ : ನಲವತ್ತೋ ಐವತ್ತೋ ಇರಬೇಕು.</p>
<p>ಗಜನಿಂಬೆ : ಏನೇ ಆಗಿದೆ ನಿನಗೆ? ಸರಿಯಾಗಿ ಮಾತಾಡ್ತೀಯಾ, ಇಲ್ಲ ಮನೆ ಆಚೆ ಹೋಗ್ತೀಯಾ?</p>
<p>ಸಾಂಬ : ಇಲ್ಲಮ್ಮಾ, ಹುಡುಗನಿಗೆ ತುಂಬಾ ಎಳೇ ವಯಸ್ಸು.</p>
<p>ಗಜನಿಂಬೆ : ಹುಡುಗ ತುಂಬಾ ಒಳ್ಳೆಯವನು ಅಂದಿಯೇನು?</p>
<p>ಸಾಂಬ : ಒಳ್ಳೆಯವನೆ. ನಡತೆ ಸರಿಯಿಲ್ಲ.</p>
<p>ಗಜನಿಂಬೆ : ನಡತೆಗೇನಾಗಿದೆ? ನಿನ್ನೆ ನೋಡಿದೆ, ಚೆನ್ನಾಗೇ ನಡೀತಾನೆ, ನೋಡೋದಕ್ಕೆ ತುಂಬಾ ಚೆನ್ನಾಗಿದ್ದಾನೆ ಅಂದಿಯೇನು?</p>
<p>ಸಾಂಬ : ಚೆನ್ನಾಗೇನೋ ಇದಾನೆ. ನಿಲ್ಲೋ ಶೈಲಿ ಸರಿ ಇಲ್ಲ.</p>
<p>ಗಜನಿಂಬೆ : ಅದ್ಯಾಕೆ, ನೋಡು ಎಷ್ಟು ಚೆನ್ನಾಗಿ ನಿಂತ್ಕೊಂಡಿದಾನೆ.</p>
<p>ಸಾಂಬ : ಬಡವ ನೋಡಿ, ಮುಖ ಕೊಳಕಾಗಿದೆ.</p>
<p>ಗಜನಿಂಬೆ : ಅದ್ಯಾಕೆ? ಮುಖ ಎಷ್ಟು ಮುದ್ದಾಗಿದೆ ನೋಡೆ.</p>
<p>ಸಾಂಬ : <em>(</em><em>ಸ್ವಗತ</em><em>) </em>ಸಾಂಬ ಇನ್ನು ನಿನ್ನ ಆಟ ನಡೆಯೊದಿಲ್ಲ ಕಣೊ. ಶಿವ ಅವಳ ಮುನಸ್ಸಿನಲ್ಲಿ ನಟ್ಟುಬಿಟ್ಟಿದ್ದಾನೆ <em>(</em><em>ಪ್ರಕಾಶ</em><em>) </em>ಅದೇನೋ ಸರಿ ತಾಯಿ ಅವನ ನಡತೆ, ನಲ್ಲೋ ಶೈಲಿ, ಅವನ ಮುಖ, ಅವನ ಬಡತನ ಎಲ್ಲ ಚೆನ್ನಾಗಿದೆ, ಆದ್ರೆ ಈಗ ಮೂರು ದಿನದಿಂದ ಯಾವುದೋ ರೋಗ ಬಡಕೊಂಡಿದೆ, ಪಾಪ.</p>
<p>ಗಜನಿಂಬೆ : ರೋಗ? ಮೂರು ದಿನದಿಂದ?</p>
<p>ಸಾಂಬ : ಹೂ. ಯಾವಳೋ ಒಬ್ಬ ಚೆಲುವೇನ್ನ ನೋಡಿದನಂತೆ. ಆವಾಗಿನಿಂದ ತಂತಾನೆ ಮತಾಡಿಕೋತಾನೆ. ಆಕಾಶದಕಡೆ ನೋಡತಾನೆ, ರಾತ್ರಿ ಎದ್ದೂ ಎದ್ದೂ ಬೀಳತಾನೆ. ಬಿದ್ದೂ ಬಿದ್ದೂ ಏಳತಾನೆ, ಬೆವರತಾನೆ, ನಡಗತಾನೆ.</p>
<p>ಗಜನಿಂಬೆ : (ನಗುತ್ತಾ) ಯಾವಳಂತೆ ಅವಳು?</p>
<p>ಸಾಂಬ : ಇದೇ ಊರವಳೆ!</p>
<p>ಗಜನಿಂಬೆ : ಹೌದಾ? ಯಾರವಳು?</p>
<p>ಸಾಂಬ : ಇದೇ ಗಲ್ಲಿಯವಳೇ?</p>
<p>ಗಜನಿಂಬೆ : ಹೌದಾ? ಯಾರವಳು?</p>
<p>ಸಾಂಬ : ಈ ಮನೆಯವಳೆ!</p>
<p>ಗಜನಿಂಬೆ : ಏನು, ಈ ಮನೆಯೋಳಾ? ಏನಂತೆ ಅವಳ ಹೆಸರು?</p>
<p>ಸಾಂಬ :<br />
<strong>        ಅಜದಂಥ</strong><strong> </strong><strong>ದೇಹ</strong><strong> </strong><strong><br />
</strong><strong>        ಗಜದಂಥ</strong><strong> </strong><strong>ನಡಿಗೆ</strong><strong><br />
</strong><strong>        ಮಜ</strong><strong> </strong><strong>ಮಾಡೋನು</strong><strong> </strong><strong>ಬಾರೆ</strong><strong> </strong><strong>ಅಂದ್ರೆ</strong><strong><br />
</strong><strong>        ಸಜ</strong><strong> </strong><strong>ಕೊಡ್ತಾಳೆ</strong><strong> </strong><strong>ಗಜನಿಂಬೆ</strong><strong>-</strong><strong>ಅಂತಾನೆ</strong><strong>!</strong><strong></strong></p>
<p><strong>ಗಜನಿಂಬೆ :</strong> <em>(</em><em>ನಗುತ್ತಾ</em><em>) </em>ಎಲ್ಲಾ ಸುಳ್ಳು.</p>
<p>ಸಾಂಬ : ಸುಳ್ಳು ಯಾಕೆ ಹೇಳ್ಳಿ ತಾಯಿ. ಅವನೇ ನಿನ್ನ ಹತ್ರ ನನ್ನನ್ನು ಕಳಿಸಿದ. ನೀನು ಏನಾರ ಅವನ್ನ ಪ್ರೀತಿ ಮಾಡೋದಿಲ್ಲ ಅಂದ್ರೆ ಹುಡುಗ ಸತ್ಹೋಗತಾನೆ. ಸುಮ್ ಸುಮ್ನೆ ಸಾಯ್ತಾನಲ್ಲ ಎಳೆ ಹುಡುಗಾ ಅಂತ ದಯಮಾಡಿ ಬಂದೆ. ನಿನಗೆ ಆ ಹುಡುಗ ಬೇಕಂದ್ರೆ ನಿಮ್ಮದ ಮನೇಲಿ ನನಗೊಂದು ಕೆಲಸ ಕೊಡಿಸು.</p>
<p>ಗಜನಿಂಬೆ : ಅಮ್ಮ ಬರಲಿ ತಾಳೆ. ನೋಡೆ : ಹಾಳಾದ್ದು ಆ ಕತ್ತೆ ಮೇಲೆ ಕೈ ಊರತಾನೆ. ನೋಡು, ಅವರ ಬೆನ್ನಮೇಲೆ ಕೈಯಾಡಿಸ್ತಾನೆ! ಥೂ ಅಲ್ಲಿ ನೋಡೇ ಅದರ ಮೂತಿ ಹತ್ತರ ಮುಖ ಒಯ್ದು ಏನೇನೋ ಹೇಳತಾನೆ. ನಾನೇ ಕತ್ತೆ ಆಗಿ ಹುಟ್ಟಬಾರದಿತ್ತೆ ಅನ್ನಿಸುತ್ತೆ. ಬಂಗಾರೀ, ಈ ಅಯೋಗ್ಯ ಹೀಗೆಲ್ಲ ಒಂದು ಕತ್ತೆ ಮಾಡಬಹುದೇನೆ. ಈತನಿಗೋಸ್ಕರ ಮೂರು ದಿನದಿಂದ ನಿದ್ದೆ ಮಾಡಿಲ್ಲ ನಾನು, ಗೊತ್ತ?</p>
<p>ಸಾಂಬ : ಅಯ್ಯೋ ಪಾಪ.</p>
<p>ಗಜನಿಂಬೆ : ಬಂಗಾರಿ ಅವನನ್ನ ಸಿಕ್ಕಾಪಟ್ಟೆ ಯದ್ವಾತದ್ವಾ ಬಯ್ಯೆ.</p>
<p>ಸಾಂಬ : ಯಾಕ್ರಮ್ಮ?</p>
<p>ಗಜನಿಂಬೆ : ನೀನು ಬಯ್ಯಿ. ಅಂದ್ರೆ ಅವನ ಬಗ್ಗೆ ನನಗೆ ತಿರಸ್ಕಾರ ಭಾವನೆ ಹುಟ್ಟುತ್ತೆ. ಆಗ ನಾನು ಆರಾಮ ನಿದ್ದೆ ಮಾಡತೀನಿ.</p>
<p>ಸಾಂಬ : ಬಯ್ಯಬೇಕಾ?</p>
<p>ಗಜನಿಂಬೆ : ಬಯ್ಯೆ ಅಂದ್ರೆ.</p>
<p>ಸಾಂಬ : ಛೇ ಛೇ, ಮನುಷ್ಯನಾ ಅವನು? ಕೋತಿ! ಕೋತಿ! ಎಷ್ಟೊಂದು ಕೋತಿಗಳಿಲ್ಲ ಈ ಜಗತ್ತಿನಲ್ಲಿ! ಈತನದೇನು ಮಹಾ ವಿಶೇಷ? ನೀವು ಇನ್ನೊಂದು ಕೋತಿ ಆರಿಸಿಕೊಳ್ಳಿ ಅಮ್ಮಾ.</p>
<p>ಗಜನಿಂಬೆ : ಆ ಇನ್ನೊಂದು ಕೋತಿ ಇಷ್ಟು ಚಂದ ಇರಬೇಕಲ್ಲೆ?</p>
<p>ಸಾಂಬ : ಛೇ, ಅವನ ಮುಸಡಿ ನೋಡಮ್ಮ ಎಷ್ಟು ಕೊಳಕಾಗಿದೆ ನನ್ಮಗಂದು.</p>
<p>ಗಜನಿಂಬೆ : ಆದ್ರೆ ಆ ಮುಖ ತುಂಬಾ ಮುದ್ದಾಗಿದೆ ಅಲ್ವಾ?</p>
<p>ಸಾಂಬ : ಬರೀ ಕಿಸಕಿಸ ಹಲ್ಕಿಸೀತಾನೆ.</p>
<p>ಗಜನಿಂಬೆ : ಹೌದು ಥೇಟ್ ತುಂಟ ಕೃಷ್ಣನ ಹಾಗೆ!</p>
<p>ಸಾಂಬ : ಥೂ ಆ ಕಣ್ಣು ನೋಡಮ್ಮ ಕವಳಿ ಹಣ್ಣಾಗಿವೆ ಅಂದ್ರೆ.</p>
<p>ಗಜನಿಂಬೆ : ಆದ್ರೆ ಫಳಫಳ ಹೊಳೆಯುತ್ತಿವೆ.</p>
<p>ಸಾಂಬ : ಅವನ ತುಟಿ ಥೂ ನೋಡಾಕಾಗೋದಿಲ್ಲ!</p>
<p>ಗಜನಿಂಬೆ : ಹೌದು. ತಕ್ಷಣ ಮುದ್ದು ಕೊಡೋನ ಅನ್ನಿಸುತ್ತೆ.</p>
<p>ಸಾಂಬ : ನಾ ಹೇಳಿದ್ದಕ್ಕೆಲ್ಲಾ ನೀನು ರಿವರ್ಸ್‌ಗೇರ ಹಾಕಿದರೆ ನಾ ಬೈದೇನು ಪ್ರಯೋಜನ? <em>(</em><em>ಗೋದಾವರಿ</em><em> </em><em>ಬರುವಳು</em><em>)</em><em></em></p>
<p><em>ಗೋದಾವರಿ :</em> ‘ಏ ಗಜನಿಂಬೆ’ ಸಾವಿರ ಬಾರಿ ಹೇಳೀನಿ. ಆ ಕಿಟಕಿ ಹತ್ತರ ನಿಲ್ಲಬೇಡಂತ. ಇನ್ನೊಂದು ಸಾರಿ ಆ ಕಿಟಕೀಲಿ ನಿಂತು ಹಾದಿ ಬೀದಿ ನಾಯಿಗಳನ್ನು ನೀ ನೋಡಿದರೆ ಆ ನಾಯೀಕಾಲು ಮುರೀತೀನಿ, ಹುಷಾರ್.</p>
<p>ಸಾಂಬ : ಅವಳೂ ದೊಡ್ಡೋಳಾಗಿದಾಳೆ &#8211; ನೋಡಬೇಕಾದ್ದು ನೋಡಬಾರದ್ದು ಎಲ್ಲಾ ತಿಳೀತದೆ ಬುಡಿ.</p>
<p>ಗೋದಾವರಿ : ಇನ್ನೂ ಬುದ್ದೀ ಹಲ್ಲು ಮೂಡಿಲ್ಲ, ದೊಡ್ಡೋಳಂತೆ. ಅಂದಹಗೆ, ಇವಳ್ಯಾರೆ ಹೊಸಬಳು?</p>
<p>ಗಜನಿಂಬೆ : ಮನೆಗೆಲಸಕ್ಕೆ ಹೆಣ್ಣಾಳು ಬೇಕಂತಿದ್ದೆಯಲ್ಲ, ಬಂದಿದಾಳೆ.</p>
<p>ಗೋದಾವರಿ : ಕೆಲಸದವಳೂ ಬೇಡ, ಗಿಲಸದವಳೂ ಬೇಡ. ತೊಲೆ ತುಂಡಿನಂಥಾ ಇಬ್ಬರು ಹೆಂಗಸರು ಮನೇಲಿದ್ದೀವಿ. ಕೆಲಸದವಳು ಬೇರೆ ದಂಡ!</p>
<p>ಗಜನಿಂಬೆ : ನೀನೇ ಹೇಳಿದ್ದೆಯಲ್ಲವಮ್ಮ ಬೇಕಂತ.</p>
<p>ಗೋದಾವರಿ : ಆಗ ಹೇಳಿದ್ದೆ. ಈಗ ಬೇಡಾ ಅನಸತ್ತೆ.</p>
<p>ಗಜನಿಂಬೆ : ಕೆಲಸ ಚೆನ್ನಾಗಿ ಮಾಡ್ತಾಳೆ ತಗೊಳಮ್ಮಾ ಅಂದ್ರೆ.</p>
<p>ಗೋದಾವರಿ : ಸರಿ, ನಿನ್ನ ಶಿಫಾರಸು ಬೇರೆ! ಎಷ್ಟು ಸಂಬಳ ಕೊಡಬೇಕೆ?</p>
<p>ಸಾಂಬ : ಹತ್ತೇ ರೂಪಾಯಿ.</p>
<p>ಗೋದಾವರಿ : ಹತ್ತು ರೂಪಾಯಿ! ಎಷ್ಟು ವರ್ಷಕ್ಕೆ?</p>
<p>ಸಾಂಬ : ಒಂದು ತಿಂಗಳಿಗೆ.</p>
<p>ಗೋದಾವರಿ : ರಾಜರಿಗೂ ಇಷ್ಟು ಸಂಬಳ ಸಿಗುತ್ತೋ ಇಲ್ಲವೋ? ಏನೇನ್ ಕೆಲಸ ಮಾಡ್ತೀಯೆ?</p>
<p>ಸಾಂಬ : ತೊಳೀತೀನಿ, ಬೆಳಗತೀನಿ, ಗುಡಸ್ತೀನಿ, ಒಗೀತೀನಿ, ಹಾಸತೀನಿ, ಹೊಚ್ಚತ್ತೀನಿ, ತಿಂತೀನಿ, ಕುಡೀತೀನಿ, ಮಲಗತೀನಿ.</p>
<p>ಗೋದಾವರಿ : ಅಯ್ಯಯ್ಯಯ್ಯ&#8230;. ಎಷ್ಟು ಮಾತಾಡತೀಯೆ? ನಮ್ಮ ಮನೇಲಿ ಕೆಲಸ ಮಾಡೋದಾದರೆ ಬಾಯ್ಮುಚ್ಚಿಕೊಂಡಿರಬೇಕು ಅಷ್ಟೆ. ಬಾ, ಕೆಲಸ ತೋರಿಸತೀನಿ. <em>(</em><em>ಹೋರಡುವರು</em><em>. </em><em>ಅಷ್ಟರಲ್ಲಿ</em><em> </em><em>ಸಾಹುಕಾರ</em><em> </em><em>ಬರುವನು</em><em>.)</em><em></em></p>
<p>ಸಾವ್ಕಾರ : ಅಬ್ಬಾ! ಹೊರಗಡೆ ಒಂದು ಕತ್ತೆ ನಿಂತಿದೆ ನೋಡೆ! ಒಳ್ಳೆ ಕುದರೆ ಥರಾ ಇದೆ.</p>
<p>ಗೋದಾವರಿ : ನಿಮ್ಮನ್ನ ನೋಡಿದ ಮೇಲೆ ಕತ್ತೆ ನೋಡೋದೇನ್ರಿ?</p>
<p>ಸಾವ್ಕಾರ : ನನಗಿಂತ ಚೆನ್ನಗಿದೆ ಕಣೆ! ನೋಡು ಬಾ<em>.(</em><em>ಎಲ್ಲರೂ</em><em> </em><em>ಕಿಟಕಿ</em><em> </em><em>ಹತ್ತಿರ</em><em> </em><em>ಹೋಗಿ</em><em> </em><em>ನೋಡುವರು</em><em>)</em><em></em></p>
<p><em>ಗೋದಾವರಿ :</em> ಅರೆ ಹೌದಲ್ರೀ! ಫಳಫಳ ಹೊಳೀತಿದೆ! ಅಮ್ಮಮ್ಮಮ್ಮಮ್ಮಾ&#8230;. ಅದರ ಕಿವಿ ಏನು! ಕಾಳೇನು! ಮೈಯೇನು!</p>
<p>ಸಾವ್ಕಾರ : ಎಷ್ಟಗಲ! ಎಷ್ಟುದ್ದ! ಎಷ್ಟೆತ್ತರ! ಎಷ್ಟು ಆಳ!</p>
<p>ಗೋದಾವರಿ : ಇನ್ನೂ ತನಕ ನಾನಿಂಥ ಕತ್ತೆ ನೋಡಿರಲಿಲ್ಲಾರಿ! ಎಲ್ಲಿ ಸಿಕ್ಕಿತು ನಿಮಗೆ?</p>
<p>ಸಾವ್ಕಾರ : ನೀನೊಬ್ಬಳು! ನಮ್ಮನೆ ಹಿತ್ತಲಲ್ಲಿ ನಿಂತಿದೆ; ನೋಡಿದೆ ಅಷ್ಟೆ.</p>
<p>ಗೋದಾವರಿ : ಆ ಹುಡುಗ ಅಲ್ಲಿ ನಿಂತಿದ್ದಾನಲ್ಲಾ. ಯಾರವನು?<br />
<em>(</em><em>ಕತ್ತೆ</em><em> </em><em>ಒದರುತ್ತದೆ</em><em>. </em><em>ಸಾಂಬ</em><em>, </em><em>ಗಜನಿಂಬೆಗೆ</em><em> </em><em>ಸನ್ನೆಯಲ್ಲಿ</em><em> </em><em>ಹೊರಗಡೆ</em><em> </em><em>ಹೋಗುವಂತೆ</em><em> </em><em>ಹೇಳುತ್ತಾನೆ</em><em>.)</em><em></em></p>
<p>ಗೋದಾವರಿ : ಅಬ್ಬಾ! ಏನ್ ಚೆನ್ನಾಗಿ ಒದರುತ್ತೆ ನೋಡಿ ಅಂದ್ರೆ!</p>
<p>ಸಾವ್ಕಾರ : ನೀನು ಹೇಳೋ ದೆವರ ನಾಮಕ್ಕಿಂಥ ಚೆನ್ನಾಗಿದೆ ಅಲ್ವೆ?</p>
<p>ಗೋದಾವರಿ : ಸರಿ, ಗಜನಿಂಬೆ ನೀನು ಸಂಗೀತದ ಪಾಠ ನೋಡಿಕೋ ಹೋಗು.</p>
<p>ಸಾಂಬ : ಅದ್ಯಾಕೆ, ಹಿತ್ತಲಲ್ಲಿ ನಿಂತುಕೊಂಡು ಕತ್ತೆ ಹಾಡು ಕೇಳಿಸಿಕೊಳ್ಳಲಿ ಬಿಡಿ. ಹೆಂಗೂ ಪುಗುಸಾಟೆ ಹಾಡ್ತಾ ಇದೆ.<br />
<em>(</em><em>ಸಮಯ</em><em> </em><em>ಸಾಧಿಸಿ</em><em> </em><em>ಗಜನಿಂಬೆ</em><em> </em><em>ಹೋಗುವಳು</em><em>. </em><em>ಬಂಗಾರಿಯನ್ನು</em><em> </em><em>ಸಾವ್ಕಾರ</em><em> </em><em>ಗಮನಿಸಿ</em><em>)</em><em></em></p>
<p><em>ಸಾವ್ಕಾರ :</em> ಪರವಾಗಿಲ್ಲವೆ ಇವಳ್ಯಾರು?</p>
<p>ಗೋದಾವರಿ : ಕೆಲಸದವಳು.</p>
<p>ಸಾವ್ಕಾರ : ನೋಡೋದಕ್ಕೆ ಚೆನ್ನಾಗಿದಾಳೆ. ಮೂರು ಮಾತ್ರ ಸ್ವಲ್ಪ&#8230;.</p>
<p>ಸಾಂಬ : ಮೂಗಿನಿಂದ ಕೆಲಸ ಮಾಡೋದಿಲ್ಲ ನಾನು. ಕೈಯಿಂದ ಮಾಡತೀನಿ.</p>
<p>ಗೋದಾವರಿ : ರೀ ನಿನ್ನೆ ಹನ್ನೆರಡು ಪೈಸ ಕಮ್ಮಿ ಬಂದಿತ್ತಲ್ಲ ಲೆಕ್ಕದಲ್ಲಿ, ಸರಿ ಹೋಯ್ತಾ ಅದು?</p>
<p>ಸಾವ್ಕಾರ : ಇನ್ನೂ ಇಲ್ಲ, ಮಾಡತೀನಿ.</p>
<p>ಗೋದಾವರಿ : ಹೋಗಿ ಮತ್ತೆ. ಬಾಯಿ ತೆರೆಕೊಂಡು ಬಂದ್ರು! ಬಾರೆ. <em>(</em><em>ಇಬ್ಬರೂ</em><em> </em><em>ಹೋಗುವರು</em><em>. </em><em>ಹೋದ</em><em> </em><em>ಹಾಗೇ</em><em> </em><em>ಹಿಂದೆ</em><em> </em><em>ಹಿಂದೆ</em><em> </em><em>ಸರಿಯುತ್ತಾ</em><em> </em><em>ಬರುವರು</em><em>. </em><em>ಅವರ</em><em> </em><em>ಮುಂದುಗಡೆಯಿಮದ</em><em> </em><em>ಕಾರಭಾರಿ</em><em> </em><em>ಬರುವನು</em><em>. </em><em>ಸಾಂಬನನ್ನು</em><em> </em><em>ನೋಡಿ</em><em> </em><em>ಅವನಿಗೆ</em><em> </em><em>ಆನಂದೋದ್ರೇಕವಾಗಿದೆ</em><em>. </em><em>ಸಾಂಬ</em><em> </em><em>ಗೋದಾವರಿ</em><em> </em><em>ಹೆದರಿದ್ದಾರೆ</em><em>.)</em></p>
<p>ಗೋದಾವರಿ : ರೀ ರೀ ಯಾರೋ ಬಂದಿದಾರೆ ನೋಡಿ ಅಂದ್ರೆ.</p>
<p>ಕಾರಭಾರಿ : ಹಸಿರು ಸೀರೆ, ನೀಲಿ ರವಕೆ! ಹಸಿರು ಸೀರೆ, ನೀಲಿ ರವಕೆ! <em>(</em><em>ತನ್ನ</em><em> </em><em>ಭುಜ</em><em> </em><em>ತಾನೆ</em><em> </em><em>ತಟ್ಟಿಕೊಳ್ಳುತ್ತಾ</em><em>) </em>ಭಲೇ ಕಾರಭಾರಿ. ಕೊನೆಗೂ ಗೆದ್ದೆ ನನ್ಮಗನೆ.</p>
<p>ಸಾವ್ಕಾರ : <em>(</em><em>ಓಡಿಬಂದು</em><em> </em><em>ಭೀತನಾಗಿ</em><em> </em><em>ನಡುಗುತ್ತಾ</em><em>) </em>ಅರರೆ ಕಾರಭಾರಿಗಳು! ಬನ್ನಿ ಸ್ವಾಮಿ! ಲೇ ಲೇ ತಿಂಡಿ ಕಾಫಿ, ಊಟ, ಉಪ್ಪು ಹುಳಿ ಖಾರ ಎಲ್ಲ ತಂದುಕೊಡೆ. ಬನ್ನಿ ಸ್ವಾಮಿ.</p>
<p>ಕಾರಭಾರಿ : ಹಹಹಹ ಹಸಿರು ಸೀರೆ! ನೀಲಿ ರವಕೆ!</p>
<p>ಸಾವ್ಕಾರ : ಇವಳು ನಮ್ಮನೆ&#8230;.</p>
<p>ಕಾರಭಾರಿ : ಗೊತ್ತು, ಗೊತ್ತು.</p>
<p>ಸಾವ್ಕಾರ : ಇವತ್ತೆ ಇವಳು ನಮ್ಮನೇಗೆ ಬಂದದ್ದು.</p>
<p>ಕಾರಭಾರಿ : ವಿಷಯ ನನಗ್ಗೊತ್ತು.</p>
<p>ಸಾವ್ಕಾರ : ನನ್ಹೆಂಡ್ತಿ ಪಾದ ಮುಟ್ಟಿ ಹೇಳ್ತೀನಿ ಸ್ವಾಮಿ : ನಾನೆಂದೂ ರಾಜದ್ರೋಹ ಮಾಡಿದೋನಲ್ಲ. ಕನಸು ಮನಸಿನಲ್ಲೂ ಕ್ರಾಂತಿ ವಿಚಾರ ಮಾಡಿದವನಲ್ಲ.</p>
<p>ಗೋದಾವರಿ : ಅಯ್ಯಯ್ಯಯ್ಯಯ್ಯೋ ನಿನ್ನೆ ಕನಸಿನಲ್ಲಿ ನಾನು ನಮ್ಮ ರಾಜರ ಪಾದಕ್ಕೆ ಮುದ್ದು ಕೊಡಲಿಲ್ವಾ?</p>
<p>ಸಾವ್ಕಾರ : ಹೌದು, ಹೌದು ಅವಳ ಜೊತೆ ನಾನೂ ಇದ್ದೆ. ನಾನೇ ಸಾಕ್ಷಿ ಸ್ವಾಮಿ&#8230;. ಆಮೇಲೆ ನಾನು ಅವರ ಬೂಟು ನೆಕ್ಕಲಿಲ್ಲವೇನೆ?</p>
<p>ಗೋದಾವರಿ : ಹೌದು, ಹೌದು.</p>
<p>ಸಾವ್ಕಾರ : ನಾನು ಇಲ್ಲೀತನಕ ಯಾವ ಕ್ರಾಂತಿಗೂ ಚಂದಾ ಹಣ ಕೊಟ್ಟಿಲ್ಲ ಸ್ವಾಮಿ. ಹಸಿರು ಹಳದಿ ಬಿಳಿ ಕೆಂಪು ಕರಿದು ಯಾವುದೇ ಕಲರನ ಕ್ರಾಂತಿಕಾರಿಗಳಿಗೂ ಚಂದಾ ಹಣ ಕೊಟ್ಟಿಲ್ಲಾ ಅಂದರೆ&#8230;.</p>
<p>ಕಾರಭಾರಿ : ಅಚ್ಚಾ!</p>
<p>ಸಾವ್ಕಾರ : ಅಷ್ಟೇ ಅಲ್ಲ. ನನ್ನ ಸ್ನೇಹಿತರಿಂದಲೂ ಕೊಡಿಸಿಲ್ಲ ಸ್ವಾಮಿ. ಆ ಕ್ರಾಂತಿಕಾರಿಗಳು ನೀವು ಹತ್ತು ಪೈಸೆ ಆದರೂ ಕೊಡಿ ಸ್ವಾಮಿ ಅಂತ ಅಂಗಲಾಚಿದರು. ನಾನೇನಂದೆ ಗೊತ್ತಾ ಸ್ವಾಮಿ? ಕಳ್ಳನನ ಮಕ್ಕಳ್ರಾ ನನ್ನ ಪ್ರಾಣ ಹೋದರೂ ನಿಮಗೆ ಐದು ಪೈಸೆ ಕೊಡೋದಿಲ್ಲ &#8211; ಅಂದೆ ಸ್ವಾಮಿ.</p>
<p>ಕಾರಭಾರಿ : <em>(</em><em>ಇಲ್ಲೀತನಕ</em><em> </em><em>ತದೇಕ</em><em> </em><em>ಚಿತ್ತದಿಂದ</em><em> </em><em>ಚಿತ್ತದಿಂದ</em><em> </em><em>ಸಾಂಬನನ್ನೇ</em><em> </em><em>ನೋಡುತ್ತಿದ್ದ</em><em> </em><em>ಕಾರಭಾರಿ</em><em> </em><em>ತಕ್ಷಣ</em><em> </em><em>ರಮ್ಯ</em><em> </em><em>ನಾಯಕನಂತೆ</em><em> </em><em>ಹಾಡತೊಡಗುತ್ತಾನೆ</em><em>)</em><em></em></p>
<p><strong>ಕಂಡೆ</strong><strong> </strong><strong>ಕಂಡೆ</strong><strong> </strong><strong>ಕಂಡೇನೊ</strong><strong> </strong><strong>ಚೆಲುವೆಯ</strong><strong> </strong><strong><br />
</strong><strong>ಕಣ್ಣೀನ</strong><strong> </strong><strong>ಮದಿರೆಯ</strong><strong> </strong><strong><br />
</strong><strong>ಓಹೊ</strong><strong> </strong><strong>ಅದೇ</strong><strong> </strong><strong>ಹಸಿರು</strong><strong> </strong><strong>ಸೀರೆ</strong><strong><br />
</strong><strong>ಆಹಾ</strong><strong> </strong><strong>ಅದೇ</strong><strong> </strong><strong>ನೀಲಿ</strong><strong> </strong><strong>ರವಿಕೆ</strong><strong><br />
</strong><strong>ಸೀರೆ</strong><strong> </strong><strong>ಹಸಿರಿನ</strong><strong> </strong><strong><br />
</strong><strong>ರವಿಕೆ</strong><strong> </strong><strong>ನೀಲಿಯ</strong><strong><br />
</strong><strong>ಕಲರು</strong><strong> </strong><strong>ಬಿಳಿಯ</strong><strong> </strong><strong>ಚೆಲುವೆ</strong><strong><br />
</strong><strong>ಇವಳೆ</strong><strong> </strong><strong>ರಾಜ</strong><strong> </strong><strong>ಕಂಡ</strong><strong> </strong><strong>ಚೆಲುವೆ</strong></p>
<p>ಸಾವ್ಕಾರ್ರೇ, ನಿಮ್ಮ ಬಗ್ಗೆ ನಾನು ರಾಜರೂ ಎಷ್ಟು ಮಾತಾಡಿಕೊಂಡಿವಿ ಗೊತ್ತಾ?</p>
<p>ಗೋದಾವರಿ : ನಮ್ಮ ಬಗ್ಗೆ?</p>
<p>ಕಾರಭಾರಿ :<em> (</em><em>ಸಾಂಬನನ್ನು</em><em> </em><em>ತೋರಿಸುತ್ತಾ</em><em>) </em>ಇವಳ ಬಗ್ಗೆ ಅಂದ್ಕೊಳ್ಳಿ.</p>
<p>ಸಾವ್ಕಾರ : ಏನು ಸ್ವಾಮಿ?</p>
<p>ಕಾರಭಾರಿ : ಗಾಬರಿ ಆಗಬೇಡಿ ಸಾವ್ಕಾರೇ, ನಿಮ್ಮನನ್ನ ಬಯ್ತಾ ಇಲ್ಲ. ನಿಮ್ಮ ಮನೆ ಕದ ತಾನಾಗೇ ತಟ್ಟಿ ಎಂಥಾ ಸುದೈವ ಒಳಗಡೆ ಬರತ್ತಾ ಇದೆ ನೋಡಿ. ಏನಮ್ಮಾ ನಿನ್ನ ಹೆಸರು?</p>
<p>ಸಾಂಬ : ಬಂಗಾರಿ,</p>
<p>ಕಾರಭಾರಿ : ತಕ್ಕ ರೂಪ ತಕ್ಕ ಹೆಸರು. ರಾಜರ ಎದೆ ಢವ ಢವ ಹೊಡಕೊಳ್ಳೋದು ಅಂದರೆ ಹುಡುಗಾಟವಾ?</p>
<p>ಸಾವ್ಕಾರ : ಸ್ವಾಮಿ ಅದೇನು ವಿಷಯ ಸ್ಪಷ್ಟವಾಗಿ ಹೆಳಬಾರದೆ?</p>
<p>ಕಾರಭಾರಿ : ಹೆಳೋದಕ್ಕೇನಿದೆ ಸಾವ್ಕಾರೇ? ರಾಜರ ಅನುಗ್ರಹ ನಿಮ್ಮ ಮೇಲೆ ಸಂಪೂರ್ಣ ಆಗಿದೇಂತ ಇಟ್ಕೊಳ್ಳಿ! ಆಮೇಲೆ ನೀವು ನಮ್ಮನ್ನ ಮರೀಬಾರದು ಅಷ್ಟೆ.</p>
<p>ಸಾವ್ಕಾರ : ಸ್ವಾಮಿ ಅದೇನು ವಿಷಯ ಸ್ಪಷ್ಟವಾಗಿ ಹೇಳಬಾರದೆ?</p>
<p>ಕಾರಭಾರಿ : ಹೇಳೋದಕ್ಕೇನಿದೆ ಸಾವ್ಕಾರೇ? ರಾಜರ ಅನುಗ್ರಹ ನಿಮ್ಮ ಮೇಲೆ ಸಂಪೂರ್ಣ ಆಗಿದೇಂತ ಇಟ್ಕೊಳ್ಳಿ! ಆಮೇಲೆ ನೀವು ನಮ್ಮನ್ನ ಮರೀಬಾರದು ಅಷ್ಟೆ.</p>
<p>ಸಾವ್ಕಾರ : ಅಂದರೆ&#8230;.</p>
<p>ಕಾರಭಾರಿ : ಅದೆಲ್ಲಾ ಮಾಮೂಲಿ ಬಿಡಿ. ನಿಮ್ಮ ಮಗಳ ವಿಚಾರ ರಾಜರ ಹತ್ತಿರ ಮೊದಲು ಹೇಳಿದವನು ನಾನೇ ಸ್ವಾಮಿ. ಬಂಗಾರಿ, ನೋಡ್ತಾ ಒರಿ. ಈ ಮನೆ ಬಂಗಾರದ್ದಾಗುತ್ತೆ!</p>
<p>ಸಾವ್ಕಾರ : ಸ್ವಾಮಿ ನನಗೆ ಹುಚ್ಚು ಹತ್ತೋಕ್ಮುಂಚೆ ಅದೇನು ವಿಷಯ ಹೇಳತೀರಾ?</p>
<p>ಕಾರಭಾರಿ : ಹೇಳೋಲ್ಲಾರೀ ಅದೇನ್ಮಾಡ್ತೀರಾ?</p>
<p>ಸಾವ್ಕಾರ : ಅಯ್ಯೋ ರಾಮರಾಮ.</p>
<p>ಗೋದಾವರಿ : <em>(</em><em>ಅಣಕಿಸುತ್ತಾ</em><em>) </em>ಅಯ್ಯೋ ಲಾಮಲಾಮ. ಸ್ಪಷ್ಟವಾಗಿ ಹೇಳಬಾರದೆ? ಕಾರಭಾರಿಗಳೇ ಇವಳು ನಮ್ಮ ಮಗಳಲ್ಲ.</p>
<p>ಕಾರಭಾರಿ : ಮಗಳಲ್ಲಾ?</p>
<p>ಗೋದಾವರಿ : ಅಲ್ಲ, ನಮ್ಮ ಮನೆ ಆಳು.</p>
<p>ಕಾರಭಾರಿ : <em>(</em><em>ಚಕಿತನಾಗುವನು</em><em>. </em><em>ಈಗ</em><em> </em><em>ಅವನ</em><em> </em><em>ಕಣ್ಣಲ್ಲಿ</em><em> </em><em>ಅಸಹ್ಯ</em><em> </em><em>ಬೆಳಕಾಡುವುದು</em><em>) </em>ನೀವಿಬ್ಬರೂ ಆ ಕಿಟಕಿ ಹತ್ತಿರ ಇರಿ. <em>(</em><em>ಇಬ್ಬರೂ</em><em> </em><em>ಹೋಗುವರು</em><em>) </em>ನೀನು ಮೊನ್ನೆ ಮದನೋತ್ಸವದಂದು ಉದ್ಯಾನವನಕ್ಕೆ ಹೋಗಿದ್ದೆಯೇನು?</p>
<p>ಸಾಂಬ : <em>(</em><em>ಅವಕಾಶ</em><em> </em><em>ಉಪಯೋಗಿಸುವುದಕ್ಕಾಗಿ</em><em> </em><em>ಸುಳ್ಳು</em><em> </em><em>ಹೊಸೆಯತೊಡಗುತ್ತಾನೆ</em><em>)</em> ಹೌದು ಸ್ವಾಮಿ.</p>
<p>ಕಾರಭಾರಿ : ಮೈಮೇಲೆ ಇದೇ ಸೀರೆ, ಇದೇ ರವಕೆ ಇತ್ತೆ?</p>
<p>ಸಾಂಬ : ಹೌದು ಸ್ವಾಮಿ.</p>
<p>ಕಾರಭಾರಿ : ಆ ದಿನ ನಿನ್ನನ್ನು ನೋಡಿ ಯಾರಾದರೂ ಪ್ರೇಮಪರವಶರಾದರೆ?</p>
<p>ಸಾಂಬ : ಒಬ್ಬರೇ, ಇಬ್ಬರೇ? ಅನೇಕರು ನನ್ನ ರೂಪರಾಶಿಯನ್ನು ಕಂಡು ಹುಚ್ಚರಾದದ್ದು ನಿಜ ಸ್ವಾಮಿ. ಅವರೇ ಇವರೇ ಎಂದು ಹೇಗೆ ಹೇಳಲಿ?</p>
<p>ಕಾರಭಾರಿ : ಒಬ್ಬರು ವಯಸ್ಸಾದವರು ನಿನ್ನ ಕಡೆಗೆ ತಮ್ಮ ಪ್ರೇಮದ ನೋಟಗಳನ್ನು ಬೀರಿ ಪರವಶರಾದದ್ದು ನೆನಪಿದೆಯೆ?</p>
<p>ಸಾಂಬ : ವಯಸ್ಸಾದವರು&#8230;. ಹೌದು&#8230;. ಅವರ ಮುಖದ ಮೇಲೆ ರಾಜಕಳೆ ಸುರಿ ಯುತ್ತಿತ್ತು,</p>
<p>ಕಾರಭಾರಿ : (ಆನಂದದಿಂದ) ಹೌದು ಆಮೇಲೆ?</p>
<p>ಸಾಂಬ : ಅವರು ನನ್ನನ್ನು ನೋಡಿ ಬಾಯಿ ತೆರೆದವರು ಮುಚ್ಚಲೇ ಇಲ್ಲ, ಈಗ ಅವರು ಬಾಯಿ ಮುಚ್ಚಿದ್ದಾರೆಯೇ ಸ್ವಾಮಿ?</p>
<p>ಕಾರಭಾರಿ : ಮುಗ್ಧ ಹೆಣ್ಣೆ, ನಿನ್ನ ಯೌವ್ವನದ ಬಲೆಯಲ್ಲಿ ಎಂಥಾ ದೊಡ್ಡ ಬೇಟೆ ಬಿದ್ದಿದೆಯೆಂಬ ಅರಿವು ನಿನಗಿಲ್ಲ! ಆ ದಿನ ನಿನ್ನನ್ನು ನೋಡಿ ಮುಚ್ಚದ ಹಾಗೆ ಬಾಯಿ ತೆರೆದವರೇ ನಮ್ಮ ಮಹಾರಾಜರು!</p>
<p>ಸಾಂಬ :<em> (</em><em>ಆಘಾತವನ್ನು</em><em> </em><em>ಅನುಭವಿಸುತ್ತಾ</em><em>) </em>ಹಾಯ್! ಹಾಯ್!</p>
<p>ಗೋದಾವರಿ :<em> (</em><em>ಕಿಟಕಿ</em><em> </em><em>ಹೊರಗಡೆ</em><em> </em><em>ನೋಡುತ್ತ</em><em>) </em>ಅಯ್ಯಯ್ಯೋ ಆ ಹುಡುಗ ಗಜನಿಂಬೆಯ ಹತ್ತರತ್ತರಾನೇ ಬಂದು ಮಾತನಾಡತಾನಲ್ರೀ, ನೋಡಿ ನೋಡಿ ಏ ಗಜನಿಂಬೇ ಹುಷಾರಾಗಿರೇ.</p>
<p>ಕಾರಭಾರಿ : ಯಾಕ್ರೀ ಕಿರಚುತೀರಿ? ಸುಮ್ಮನಿದ್ರೆ ಸರಿ. ಇಲ್ಲದಿದ್ದರೆ ಜೇಲಲ್ಲಿ ಕೊಳೀಬೇಕಾಗುತ್ತೆ, ಹೇಳಿರತೀನಿ. <em>(</em><em>ಸಾಂಬನಿಗೆ</em><em> </em><em>ಮಾತ್ರ</em><em> </em><em>ಕೇಳಿಸುವಂತೆ</em><em>) </em>ಬಂಗಾರಿ ನಿನ್ನ ದೈವ ಖುಲಾಯಿಸಬಹುದು ನನ್ನ ಮಾತು ಕೇಳೋದಾದ್ರೆ.</p>
<p>ಸಾಂಬ : ಕೇಳೋದಿಲ್ಲ ಅಂದಿನಾ?</p>
<p>ಕಾರಭಾರಿ : ನನಗೆ ನಿನ್ನ ವಿಷಯ ತಿಳಿಯಬೇಕು.</p>
<p>ಸಾಂಬ : ಕೇಳೀ ಅಂದ್ರೆ. ಮದುವೆ ಆಗಿದೆಯೇ ಅಂತ ಕೇಳಿ&#8230;.</p>
<p>ಕಾರಭಾರಿ : ಮದುವೆ ಆಗಿದೆಯೇ?</p>
<p>ಸಾಂಬ : ಅಯ್ಯೋ ಸ್ವಾಮೇರಾ, ನನ್ನ ಗಂಡ ಇದ್ದಿದ್ದರೆ ಈ ರೀತಿ ಬೀದಿ ಪಾಲಾಗತಿದ್ದಿನ? ಮಾರಾಯ ಲೋಕ ಬಿಟ್ಟು ಹೊರಟೋದ ನೋಡಿ. ಬೀದಿ ನಾಯಿಗಳೆಲ್ಲಾ ನನ್ನ ಹೆಸರು ಕೇಳಿ ಕಾಲೆತ್ತಿದ್ದೇ ಎತ್ತಿದ್ದು. ನನ್ನ ಗಂಡ ಯಾಕೆ ಸತ್ತ ಅಂತ ಕೇಳಿ.</p>
<p>ಕಾರಭಾರಿ : ನಿನ್ನ ಗಂಡ ಯಾಕೆ ಸತ್ತ?</p>
<p>ಸಾಂಬ : ನೀನೊಳ್ಳೆ ಗಂಟುಬಿದ್ದೆ. ಅವನ್ಯಾಕೆ ಸಾಯತಾನೆ, ನಾನೇ ಕೊಂದೆ.</p>
<p>ಕಾರಭಾರಿ : ಯಾಕೆ?</p>
<p>ಸಾಂಬ : ಬುಡು ಮಾರಾಯಾ ನೀನೊಳ್ಳೆ ಗಿರಾಕಿ. ಪಕ್ಕದ ಮನೆ ಹುಡುಗನೊಂದಿಗೆ ಏನೋ ಗುಟ್ಟಿನ ಯವಹಾರ ಇಟ್ಟುಕೊಂಡಿದ್ದೆ. ಗಂಡನಿಗೆ ಗೊತ್ತಾಯಿತು.ಸುಮ್ಮನೆ ಯಾಕೆ ರಾದ್ಧಾಂತ ಅಂತ ನಾನೇ ನೇಣು ಹಾಕಿ ಕೊಂದುಬಿಟ್ಟೆ. ಏನೇನು ಕೆಲಸ ಮಾಡ್ತಿ ಅಂತ ಕೇಳಲ್ವಾ?</p>
<p>ಕಾರಭಾರಿ : ಏನ ಕೆಲಸ ಮಾಡ್ತಿ?</p>
<p>ಸಾಂಬ : ಅದನ್ನೇ ಹೇಳೋಕೆ ಬಂದೆ. ಒಬ್ಬ ಬೇಕೂಫನ ಮನೇಲಿ ಕೆಲಸಕ್ಕಿದ್ದೆ. ನಿನ್ನಂಗೆ ತೆಳ್ಳಗೆ ಬೆಳ್ಳಗೆ ಸಂದಾಕಿದ್ದ. ನಿನ್ನಂಗೇ ಅವನು ಏನು ಕೆಲಸ ಮಾಡತೀಯೆ ಅಂದ. ‘ನಗನಗತಾ ನೀ ಏನೇಳಿದರೂ ಮಾಡತೇನೆ <em>(</em><em>ಕಾರಬಾರಿಯ</em><em> </em><em>ಕೆನ್ನೆ</em><em> </em><em>ಹಿಂಡುತ್ತಾ</em><em>) </em>ಆದರೆ ನೀ ನಗಬೇಕಷ್ಟೆ ಅಂದೆ’. ಇಂಗಂದು ನನ್ನ ಪಾಡಿಗೆ ನಾನು ಸುಮ್ಮನಿದ್ರೆ, ಬಂದವನೆ ಮುಂಗೈ ಹಿಡಿದು ‘ಬಂಗಾರಿ ನಿನಗೆ ಹಾಸಿಗೆ ಹಾಸಲಿಕ್ಕೆ ಬರತ್ತಾ’? ಅಂದ!</p>
<p>ಕಾರಭಾರಿ : <em>(</em><em>ಸಾಂಬನ</em><em> </em><em>ಮುಂಗೈ</em><em> </em><em>ಹಿಡಿದು</em><em>) </em>ನಾನೂ ಅದನ್ನೇ ಕೇಳತಾ ಇರೋದು: ಬಂಗಾರಿ ರಾಜರಿಗೆ ಹಾಸಿಗೆ ಹಾಸಲಿಕ್ಕೆ ಒಪ್ಪಿಗೆ ಇದೆಯಾ?</p>
<p>ಸಾವ್ಕಾರ : ಸ್ವಾಮಿ, ಕರೆದಿರಾ?</p>
<p>ಗೋದಾವರಿ : ಅಯ್ಯಯ್ಯೋ, ಆ ಹುಡುಗ ನಮ್ಮ ಗಜನಿಂಬೆ ಕಿವೀಲಿ ಏನೋ ಹೇಳ್ತಿದಾನ್ರಿ. ನೋಡಿ ನೋಡಿ ಕಿವಿ ಕಚ್ಚತಿದ್ದಾನೇಂದ್ರೆ.</p>
<p>ಸಾವ್ಕಾರ : ಲೇ ಗಜನಿಂಬೆ, ವಾಲೆ ಹುಷಾರು.</p>
<p>ಕಾರಭಾರಿ : ಬಾಯ್ಮುಚ್ಚರಿ. <em>(</em><em>ಸಾಂಬನಿಗೆ</em><em> </em><em>ಮಾತ್ರ</em><em> </em><em>ಕೇಳಿಸುವಂತೆ</em><em>) </em>ಬಂಗಾರಿ, ನೀನು ರಾಜರ ಹತ್ತಿರ ‘ನಾನು ಸಾವ್ಕಾರನ ಮಗಳು’ ಅಂತ ಸುಳ್ಳು ಹೇಳಬೇಕು.</p>
<p>ಸಾಂಬ : ಓಹೋ.</p>
<p>ಕಾರಭಾರಿ : ರಾಜರು ನಿನಗೆ ಏನೇ ಬಹುಮಾನ ಕೊಟ್ಟರೂ, ಮುಕ್ಕಾಲು ಪಾಲು ನನಗೆ ಸಿಕ್ಕಬೇಕು.</p>
<p>ಸಾಂಬ : ಎಲ್ಲಾ ನೀವೇ ಇಟ್ಕಳ್ಳಿ.</p>
<p>ಕಾರಭಾರಿ : ರಾಜರಿಗೆ ಆಗಾಗ ನಾ ಹೇಳಿಕೊಟ್ಟ ಚಾಡಿಗಳನ್ನು ಹೇಳುತ್ತಿರಬೇಕು.</p>
<p>ಸಾಂಬ : ಓಹೋ.</p>
<p>ಗೋದಾವರಿ : ಅಯ್ಯಯ್ಯೋ ನೋಡಿ ನೋಡಿ, ತಬ್ಬಿಕೊಂಡು ಕೆನ್ನೆ ಕಚ್ಚತಿದ್ದಾನೆ. ಏ ಏ ಗಜನಿಂಬೆ-</p>
<p>ಕಾರಭಾರಿ : ಯೋ <em>(</em><em>ಎಂದು</em><em> </em><em>ಗದರಿಕೊಂಡು</em><em> </em><em>ಸಾಂಬನಿಗೆ</em><em> </em><em>ಮತ್ರ</em><em> </em><em>ಕೇಳಿಸುವಂತೆ</em><em>)</em> ಮಾತು ಪಕ್ಕಾ?</p>
<p>ಸಾಂಬ : ಪಕ್ಕಾ. ಆದರೆ ನಮ್ಮ ಭೇಟಿ ಇಲ್ಲಲ್ಲ, ಊರ ಹೊರಗೆ ಗಣೇಶನ ದೇವಸ್ಥಾನ ಇದೆಯಲ್ಲ, ಅಲ್ಲಿ.</p>
<p>ಕಾರಭಾರಿ : ಗಣೇಶನ ದೇವಸ್ಥಾನ ನೆಪ್ಪಿರಲಿ <em>(</em><em>ಕಂಡೆ</em><em> </em><em>ಕಂಡೆ</em><em> </em><em>ಎಂದು</em><em> </em><em>ಹಾಡುತ್ತಾ</em><em> </em><em>ಹೊಗುವನು</em><em>.)</em><em></em></p>
]]></content:encoded>
			<wfw:commentRss>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%aa/feed/</wfw:commentRss>
		<slash:comments>0</slash:comments>
		</item>
		<item>
		<title>ಸಾಂಬಶಿವ ಪ್ರಹಸನ : ಡಿ ಆರ್ ಎನ್ ಪತ್ರ</title>
		<link>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a1%e0%b2%bf-%e0%b2%86%e0%b2%b0%e0%b3%8d-%e0%b2%8e%e0%b2%a8%e0%b3%8d/</link>
		<comments>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a1%e0%b2%bf-%e0%b2%86%e0%b2%b0%e0%b3%8d-%e0%b2%8e%e0%b2%a8%e0%b3%8d/#comments</comments>
		<pubDate>Fri, 22 Mar 2013 00:36:47 +0000</pubDate>
		<dc:creator>kanaja</dc:creator>
				<category><![CDATA[ಕನ್ನಡ]]></category>
		<category><![CDATA[ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ]]></category>
		<category><![CDATA[ಡಾ. ಚಂದ್ರಶೇಖರ ಕಂಬಾರ]]></category>

		<guid isPermaLink="false">http://kanaja.in/?p=78444</guid>
		<description><![CDATA[ನಿಮ್ಮ ಸಾಹಿತ್ಯದ ಸಮಸ್ತ ಸ್ವರೂಪ ತಿಳಿಯಲು ಹೋಸ ದೃಷ್ಟಿಕೋನಗಳೇ ಬೇಕು ಎಂದು ಅನ್ನಿಸತೊಡಗಿದೆ. ಇಡೀ ಶತಮಾನದಲ್ಲಿ ಕನ್ನಡ ಪ್ರತಿಭೆ ಏಳೆಂಟು ಜನ ಮಹತ್ವದ ಪ್ರತಿಭಾವಂತರನ್ನು ಸೃಷ್ಟಿಸಿದೆ. ಅದರಲ್ಲಿ ಕಂಬಾರರದು ವಿಶಿಷ್ಟ ಧ್ವ ನಿ. ಹೊಸ ರೀತಿಯಲ್ಲಿ ಭಾರತವನ್ನೇ ಕಾಣುವ ಧ್ವನಿ. ಆಧುನಿಕ ಜಗತ್ತು ಆಧುನೀಕರಣದ ಒತ್ತಡಗಳನ್ನು ಹಾಕಿದ ರೀತಿಯನ್ನು ದಾಟುವ ಕ್ರಮ ನಿಮ್ಮ ಸಾಹಿತ್ಯದಲ್ಲಿ ಬೆರಗು ಹುಟ್ಟಿಸುತ್ತದೆ. ಇಲ್ಲಿ ಭಾರತದ ಬೇರೆ ಬೇರೆ ಭಾಗಗಳಿಂದ ಬಂದ ತುಂಬ ಪ್ರತಿಭಾವಂತ ಸ್ನೇಹಿತರಿದ್ದಾರೆ.  ಅವರಲ್ಲಿ ಕೂಡಾ ಈ ರೀತಿಯ ಅಭಿವ್ಯಕ್ತಿ [...]]]></description>
			<content:encoded><![CDATA[<p>ನಿಮ್ಮ ಸಾಹಿತ್ಯದ ಸಮಸ್ತ ಸ್ವರೂಪ ತಿಳಿಯಲು ಹೋಸ ದೃಷ್ಟಿಕೋನಗಳೇ ಬೇಕು ಎಂದು ಅನ್ನಿಸತೊಡಗಿದೆ. ಇಡೀ ಶತಮಾನದಲ್ಲಿ ಕನ್ನಡ ಪ್ರತಿಭೆ ಏಳೆಂಟು ಜನ ಮಹತ್ವದ ಪ್ರತಿಭಾವಂತರನ್ನು ಸೃಷ್ಟಿಸಿದೆ. ಅದರಲ್ಲಿ ಕಂಬಾರರದು ವಿಶಿಷ್ಟ ಧ್ವ ನಿ. ಹೊಸ ರೀತಿಯಲ್ಲಿ ಭಾರತವನ್ನೇ ಕಾಣುವ ಧ್ವನಿ.<span id="more-78444"></span></p>
<p>ಆಧುನಿಕ ಜಗತ್ತು ಆಧುನೀಕರಣದ ಒತ್ತಡಗಳನ್ನು ಹಾಕಿದ ರೀತಿಯನ್ನು ದಾಟುವ ಕ್ರಮ ನಿಮ್ಮ ಸಾಹಿತ್ಯದಲ್ಲಿ ಬೆರಗು ಹುಟ್ಟಿಸುತ್ತದೆ. ಇಲ್ಲಿ ಭಾರತದ ಬೇರೆ ಬೇರೆ ಭಾಗಗಳಿಂದ ಬಂದ ತುಂಬ ಪ್ರತಿಭಾವಂತ ಸ್ನೇಹಿತರಿದ್ದಾರೆ.  ಅವರಲ್ಲಿ ಕೂಡಾ ಈ ರೀತಿಯ ಅಭಿವ್ಯಕ್ತಿ ಜೀವನ ತುಂಬ ಕಡಿಮೆ ಎಂದರು&#8230;.</p>
<p>ಸತ್ಯವನ್ನು ಸಾಂಬಶಿವರ ಹಾಗೆ ಕುಣಿಸಬೇಕು, ಮಣಿಸಬೇಕು. ಹುಳಾ ಪಾರ್ಟಿಗಳು ಸತ್ಯದ ಕೈಯಲ್ಲಿ ಸಿಕ್ಕಿಬಿದ್ದರೆ ನಾಶವಾಗಿ ಹೋಗುತ್ತಾರೆ. ಸತ್ಯ ಹರಿಶ್ಚಂದ್ರನ ಹಾಗೆ ಹೀನಾಯ ಸ್ಥಿತಿಗೆ ಒಂದು ಮುಟ್ಟುತ್ತಾರೆ. ಆದರೆ, ಸತ್ಯ ಹರಿಶ್ಚಂದ್ರನಿಗೆ ಸಾಧ್ಯವಾಗದ ಕ್ರಿಯಾಶೀಲತೆ ಸಾಂಬ-ಶಿವರಿಗೆ ಇದೆ. ಸತ್ಯ ಅವರ ಕಾಲಕೆಳಗೆ ಬಂದು ತೆವಳುತ್ತದೆ. ನಮ್ಮ ಬುದ್ಧಿಯನ್ನು ಮಂಪರಿನಿಂದ ಬಿಡುಗಡೆ ಮಾಡುವ ಶಕ್ತಿ ‘ಜೈಸಿದನಾಯಕ’ಕ್ಕೆ ಇಲ್ಲ. ಆದರೆ, ‘ಸಾಂಬ-ಶಿವ&#8230;.’ಕ್ಕೆ ಇದೆ. ಕ್ರಾಂತಿಗಳನ್ನು ಜೈಸಿದನಾಯಕನ ಹಾಗೆ ಕಂಡರೆ ಬೆದರುತ್ತೇವೆ, ಭೀತರಾಗುತ್ತೇವೆ. ಆಧುನಿಕ ಜಗತ್ತು ರಾಜಕಾರಣವನ್ನು ನೋಡುವ ಕ್ರಮವೇ ಭೀಕರ. ಸಾಮಾಜಿಕ ಪ್ರತಿಮೆಗಳು ಕೂಡಾ ಹಾಗೆಯೇ, ಅವು ಕೊಳೆಯುವುದನ್ನೆ ತೋರಿಸುತ್ತವೆ. ಕಾಫ್ಕನ ಹಾಗೆ, ಆರ್ವೆಲ್ಲನ ಹಾಗೆ ಭಯವನ್ನು ಸೃಷ್ಟಿಸುವ ಮೂಲಕ ಆಧುನಿಕ ರಾಜಕಾರಣ ಮನುಷ್ಯನನ್ನು ಅಧೀನನ್ನಾಗಿಸಿಕೊಳ್ಳುತ್ತದೆ. ‘ಹರಕೆಯ ಕುರಿ’ ಕೂಡಾ ಹಾಗೆಯೇ. Fear is the source of authoritarian power. ಆದರೆ, ಸಾಂಬ-ಶಿವರನ್ನು ಯಾರಾದರೂ ಹೆದರಿಸಲು ಸಾಧ್ಯವೆ? ಹೀರೋಗಳನ್ನು ನೋಡಿದರೆ ಅವರ ಸೋಲೇ ಕಾಡುತ್ತದೆ. ಸಾಂಬಶಿವರಂಥ ಕಿಲಾಡಿಗಳನ್ನು ನೋಡಿದರೆ ಅವರ ಬಡತನವೇ ಅವರ ವಿಜಯವನ್ನು ಉಜ್ವಲೀಕರಿಸುತ್ತದೆ. ನಿರ್ವಾಣಕ್ಕೆ ಕೌಪೀನದ ಹಂಗಿಲಲ್. ನಿಜವಾಗಿಯೂ ಅವರು ನಿರ್ವಾಣದ ಸ್ಥಿತಿಯಲ್ಲಿರುವ ಮಂದಿ. ಅವರನ್ನು ಮೆಟ್ಟುವುದಕ್ಕೆ ಸಾಧ್ಯವೇ ಇಲ್ಲ.</p>
<p>ಸಾಂಬಶಿವರದು ನಿರ್ವಾಣದ ರಾಜಕೀಯ, Politics of liberation!  ಹೀಗಾಗಿ ಈ ನಾಟಕ ನನಗೆ ತುಂಬ ಪ್ರಿಯವಾದದ್ದು.</p>
<p><strong>ಡಿ</strong><strong>.</strong><strong>ಆರ್</strong><strong>. </strong><strong>ನಾಗರಾಜ</strong><br />
ಸಿಮ್ಲಾದಿಂದ ಬರೆದ ೨೩.೪.೯೩ರ ಪತ್ರದಿಂದ</p>
]]></content:encoded>
			<wfw:commentRss>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a1%e0%b2%bf-%e0%b2%86%e0%b2%b0%e0%b3%8d-%e0%b2%8e%e0%b2%a8%e0%b3%8d/feed/</wfw:commentRss>
		<slash:comments>0</slash:comments>
		</item>
		<item>
		<title>ಸಾಂಬಶಿವ ಪ್ರಹಸನ : ದೃಶ್ಯ &#8211; ೫</title>
		<link>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%ab/</link>
		<comments>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%ab/#comments</comments>
		<pubDate>Fri, 22 Mar 2013 00:36:43 +0000</pubDate>
		<dc:creator>kanaja</dc:creator>
				<category><![CDATA[ಕನ್ನಡ]]></category>
		<category><![CDATA[ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ]]></category>
		<category><![CDATA[ಡಾ. ಚಂದ್ರಶೇಖರ ಕಂಬಾರ]]></category>

		<guid isPermaLink="false">http://kanaja.in/?p=78457</guid>
		<description><![CDATA[ (ಅರಮನೆ. ರಾಜ ಮತ್ತು ಮಂತ್ರಿ) ರಾಜ : ಎಲಾ ಮಂತ್ರಿ, ಮಂತ್ರಿ : ಮಹಾಪ್ರಭು ಯಾಕೆ ಕರೆದದ್ದು? ರಾಜ : ನನ್ನ ದನಿ ಕೇಳಿಸುತ್ತಾ, ಇಲ್ಲವಾ ನೋಡೋಣ ಅಂತ ಕರೆದೆ. ಮಂತ್ರಿ : ತಮ್ಮ ದನಿ ಕೇಳಿಸುತ್ತೆ. ಪ್ರಜೆಗಳ ದನಿ ಇನ್ನೂ ಜಾಸ್ತಿ ಕೇಳಿಸುತ್ತೆ ಪ್ರಭು. ರಾಜ : ಅಯ್ಯಾ ಮಂತ್ರಿ ಹಿಂದಿನ ಕಾಲದ ರಾಜರು ತಮ್ಮ ದರ್ಬಾರನ್ನು ಹ್ಯಾಗೆ ಸುರು ಮಾಡುತ್ತಿದ್ದರು? ಮಂತ್ರಿ : ಮಂತ್ರಿಗಳನ್ನು ಕರೆದು ರಾಜ್ಯದ ಯೋಗಕ್ಷೇಮವನ್ನು ಕೇಳುತ್ತಿದ್ದರು ಪ್ರಭು. ರಾಜ : [...]]]></description>
			<content:encoded><![CDATA[<p><em> </em><em>(</em><em>ಅರಮನೆ</em><em>. </em><em>ರಾಜ</em><em> </em><em>ಮತ್ತು</em><em> </em><em>ಮಂತ್ರಿ</em><em>)</em></p>
<p>ರಾಜ : ಎಲಾ ಮಂತ್ರಿ,<span id="more-78457"></span></p>
<p>ಮಂತ್ರಿ : ಮಹಾಪ್ರಭು ಯಾಕೆ ಕರೆದದ್ದು?</p>
<p>ರಾಜ : ನನ್ನ ದನಿ ಕೇಳಿಸುತ್ತಾ, ಇಲ್ಲವಾ ನೋಡೋಣ ಅಂತ ಕರೆದೆ.</p>
<p>ಮಂತ್ರಿ : ತಮ್ಮ ದನಿ ಕೇಳಿಸುತ್ತೆ. ಪ್ರಜೆಗಳ ದನಿ ಇನ್ನೂ ಜಾಸ್ತಿ ಕೇಳಿಸುತ್ತೆ ಪ್ರಭು.</p>
<p>ರಾಜ : ಅಯ್ಯಾ ಮಂತ್ರಿ ಹಿಂದಿನ ಕಾಲದ ರಾಜರು ತಮ್ಮ ದರ್ಬಾರನ್ನು ಹ್ಯಾಗೆ ಸುರು ಮಾಡುತ್ತಿದ್ದರು?</p>
<p>ಮಂತ್ರಿ : ಮಂತ್ರಿಗಳನ್ನು ಕರೆದು ರಾಜ್ಯದ ಯೋಗಕ್ಷೇಮವನ್ನು ಕೇಳುತ್ತಿದ್ದರು ಪ್ರಭು.</p>
<p>ರಾಜ : ಹೌದು, ಹೌದು, ಮೊನ್ನೆ ನಾಟಕದಲ್ಲಿ ಧರ್ಮರಾಯನ ದರ್ಬಾರು ಸುರು ಆದದ್ದು ಹಾಗೇ ಅಲ್ಲವೇ? ಎಲಾ ಮಂತ್ರಿವರ್ಯನೇ, ನಮ್ಮ ರಾಜ್ಯದಲ್ಲಿ ಮಳೆ ಬೆಳೆ ಚೆನ್ನಾಗಿದ್ದು ದೇಶ ಸುಭಿಕ್ಷವಾಗಿದ್ದು ಪ್ರಜೆಗಳೆಲ್ಲ ಸ್ವಸಂತೋಷದಿಂದ ನಿತ್ಯ ನಿರಂತರ ಕಣ್ಣು ಮುಚ್ಚಿ ಶವಧ್ಯಾನ ಮಾಡುತ್ತಿರುವರಲ್ಲವೆ?</p>
<p>ಮಂತ್ರಿ : ಹಾಗಿಲ್ಲ ಪ್ರಭು, ಪ್ರಜೆಗಳಲ್ಲಿ ಅಸಮಾಧಾನ ಕುದಿಯುತ್ತಿದೆ.</p>
<p>ರಾಜ : ನಾಟಕದ ಮಂತ್ರಿ ಹೀಗೆಲ್ಲ ಮಾತಾಡಲಿಲ್ಲ.</p>
<p>ಮಂತ್ರಿ : ತಾವು ನಾಟಕದ ರಾಜರೂ ಅಲ್ಲ, ಇದು ನಾಟಕವೂ ಅಲ್ಲ ಪ್ರಭು. ತಾವು ನಿಜವಾದ ರಾಜರು. ನಿಜವಾದ ಪ್ರಜೆಗಳ ನಿಜವಾದ ನೋವಿನ ಕಡೆ ಗಮನ ಕೊಡಲೇಬೇಕು.</p>
<p>ರಾಜ : ಕೊಡತಾ ಇದ್ದೀನಲ್ಲಯ್ಯ. ಅದೇನಿದೆ ಒದರು.</p>
<p>ಮಂತ್ರಿ : ಮಹಾಪ್ರಭು ವಯಸ್ಸಿನಲ್ಲಿ ನಾನು ನಿಮಗಿಂತ ಚಿಕ್ಕವನು-</p>
<p>ರಾಜ : ಬುದ್ಧಿಯಲ್ಲಿ ಕೂಡ.</p>
<p>ಮಂತ್ರಿ : ದೇಶದ ಹಿತದೃಷ್ಟಿಯಿಂದ ಕೆಲವು ಅಪ್ರಿಯ ಸತ್ಯಗಳನ್ನು ನಿಮಗೆ ಹೇಳಲೇ ಬೇಕಾಗಿದೆ. ಕ್ಷಮಿಸಬೇಕು.</p>
<p>ರಾಜ : ಕ್ಷಮಿಸಿದ್ದೇನೆ ಅದೇನಿದೆ ಒದರಪ್ಪಾ ಅಂದರೆ, ಮಾತಿಗಿಂತ ಉಗುಳೇ ಜಾಸ್ತಿ ನಿನ್ನಲ್ಲಿ. ನನ್ನ ರಾಜ್ಯದಲ್ಲಿ ಕಾಲಕಾಲಕ್ಕೆ ಸೂರ‍್ಯೋದಯ ಸೂರ್ಯಾಸ್ತವಾಗುತ್ತದೆ ಅಂತ ಬಿಳಿ ಅನೆ ಹೇಳಿದ, ಸರಿಯೋ?</p>
<p>ಮಂತ್ರಿ : ಪ್ರಭು, ತೆರಿಗೆ ಹೊರೆ ಜಾಸ್ತಿ ಆಗಿದೆ. ಕಳ್ಳಕಾರರ ಕಾಟ ಹೆಚ್ಚಗಿದೆ. ಮನೆ ಬೆಳೆ ಇಲ್ಲದೇ ಭ್ರಷ್ಟಾಚಾರ ಸಮೃದ್ಧವಾಗಿದೆ.</p>
<p>ರಾಜ : ಲೇ ಮಂತ್ರಿ, ರಾಜ್ಯದಲ್ಲಿ ಇಷ್ಟೆಲ್ಲಾ ಆಗಿದ್ದರೆ ಅದಕ್ಕೆ ಹೊಣೆ ಯಾರು? ಮಂತ್ರಿಯಾಗಿ ನೀನು ನಿನ್ನ ಕೆಲಸ ಸರಿಯಾಗಿ ಮಾಡಿಲ್ಲ ಅಂತಾಯ್ತು.</p>
<p>ಮಂತ್ರಿ : ಹ್ಯಾಗೆ ಸಾಧ್ಯ ಪ್ರಭು? ನಿಮಗಾಗಲಿ, ನಿಮ್ಮ ಬಿಳಿ ಆನೆಗಾಗಲಿ, ನನ್ನ ಮತ್ತು ಜನರ ಕಷ್ಟ ಸುಖ ತಿಳಿಯೋದಿಲ್ಲ. ಸಕಾಲದಲ್ಲಿ ಎಚ್ಚರವಾಗದಿದ್ದರೆ ಅಪಾಯ ತಪ್ಪಿದ್ದಲ್ಲ ಪ್ರಭು. ಜನ ಒಂದಾಗುತ್ತಿದ್ದಾರೆ. ಕ್ರಾಂತಿ ಅಂತಿದ್ದಾರೆ.</p>
<p>ರಾಜ : ಕ್ರಾಂತಿ? ಸರ್ಕಾರದಿಂದ ನಾವೇ ಮೂರೋ ನಾಲ್ಕೋ ಕ್ರಾಂತಿ ಮಾಡಿಸಿದ್ದೀ ವಲ್ಲಪಾ?</p>
<p>ಮಂತ್ರಿ : ಸರ್ಕಾರದಿಂದ ?</p>
<p>ರಾಜ : ಹೌದು; ಹಸಿರು ಕ್ರಾಂತಿ, ಬಿಳಿ ಕ್ರಾಂತಿ, ಹಳದಿ ಕ್ರಾಂತಿ, ಮಾಡಿಸಿದವರು ಯಾರು?</p>
<p>ಮಂತ್ರಿ : ನಿಮ್ಮ ಚೇಷ್ಟೆಗೆ ನಗೋವಷ್ಟು ಹಾಸ್ಯ ಪ್ರವೃತ್ತಿ ನನ್ನಲಿಲ್ಲ ಪ್ರಭು, ಜನರ ನೋವಿಗೆ ಅಧಿಕಾರಿಗಳ ದರ್ಪಕ್ಕೆ ಕುರುಡನಾಗಿರೋದು ನನ್ನಿಂದಾಗೋದಿಲ್ಲ. ಈಗಲೂ ದಯವಿಟ್ಟು ನನ್ನ ಮಾತುಕೇಳಿ.</p>
<p>ರಾಜ : ಏನಯ್ಯಾ&#8230;. ನನಗೆ ಉಪದೇಶ ಕೊಡೋವಷ್ಟು ದೊಡ್ಡೋನಾದೇನು?</p>
<p>ಮಂತ್ರಿ : ಉಪದೇಶ ಅಲ್ಲ. ಖಂಡಿತ ಇದು ತುರ್ತಿನ ಪರಿಸ್ಥಿತಿ ಅನ್ನೋದನ್ನ ತಮಗೆ ಖಾತ್ರಿ ಮಾಡೋದಕ್ಕೆ ಪ್ರಯತ್ನ ಮಾಡ್ತ ಇದ್ದೇನೆ. ಕ್ರಂತಿಯ ಎಲ್ಲ ಲಕ್ಷಣಗಳೂ ಈಗ ಗೋಚರವಾಗ್ತಿವೆ. ನಿಮ್ಮ ಕೊನೆಗಾಲ&#8230;.</p>
<p>ರಾಜ : ಎಲಾ ಮಂತ್ರ, ನನ್ನ ಕಾಲಲ್ಲಿರೋ ಚಪ್ಲೀನೇ ನನಗೆ ಉಪದೇಶ ಹೇಳಲಿಕ್ಕೆ ಬಂದರೆ ನಾನೇನೋ ಮಾಡ್ತೀನಿ?</p>
<p>ಮಂತ್ರಿ : ಕಳಚಿ ಆಚೆ ಕಡೆ ಎಸೀತೀರಿ ಅಲ್ಲವ? ಇಕೋ ನನ್ನ ರಾಜೀನಾಮೆ <em>(</em><em>ರಾಜೀನಾಮೆಯನ್ನಿಟ್ಟು</em><em> </em><em>ಸರಸರನೆ</em><em> </em><em>ಹೋಗುವನು</em><em>)</em><em></em></p>
<p><em>ರಾಜ :</em> ಎಲಾ ನನ ಮಗನೆ!</p>
<p>ಚಾರ : <em>(</em><em>ಬಂದು</em><em> </em><em>ನಮಸ್ಕರಿಸಿ</em><em>) </em>ಮಹಾಪ್ರಭು ಬಿಳಿ ಆನೆ ಬಂದವರೆ.</p>
<p>ರಾಜ : ಒಳಗೆ ಬಿಡು.</p>
<p>ಬಿಳಿ ಆನೆ : <em>(</em><em>ಬಂದು</em><em> </em><em>ನಮಸ್ಕರಿಸಿ</em><em>) </em>ಮಹಾಪ್ರಭುಗಳಿಗೆ ಜಯವಾಗಲಿ,</p>
<p>ರಾಜ : ಅಧೆಂಗರಿ ಜಯ ಆಗುತ್ತೆ? ಜನರಲ್ಲಿ ಅಸಮಾಧಾನ ಇದೆಯಂತೆ, ಕ್ರಾಂತಿ ಮಾಡತಾರಂತೆ? ನಿಮ್ಮನ್ನು ಕೇಳಿದರೆ ಎಲ್ಲಾ ಚೆನ್ನಾಗಿದೆ ಅಂತೀರಾ&#8230;.</p>
<p>ಬಿಳಿ ಆನೆ : ಮಹಾಪ್ರಭು, ತಾವು ಬೇಜಾರು ಮಾಡಿಕೊಬಾರದು. ಗುಪ್ತಬಾರರು ಈಗಷ್ಟೆ ಕಂಡು ಕೊಂಡ ವಿಚಾರವನ್ನ ತಮ್ಮ ಕಿವಿಯಲ್ಲಿ ಹೇಳತೇನೆ, ದಯವಿಟ್ಟು ತಮ್ಮ ಕಿವಿ ಕೊಡಬೇಕು.</p>
<p>ರಾಜ : ಕೊಟ್ಟಿದ್ದೇನೆ, ಅದೇನು ಒದರಯ್ಯಾ.</p>
<p>ಬಿಳಿ ಆನೆ : ಪ್ರಭು, ಗುಪ್ತಚಾರರ ವರದಿ ಪ್ರಕಾರ ಮಹಾಮಂತ್ರಿಗಳೇ ಕ್ರಾಂತಿಯ ನಾಯಕರು.</p>
<p>ರಾಜ : ಏನು?</p>
<p>ಬಿಳಿ ಆನೆ : ಹೌದು ಪ್ರಭು. ಈ ಸಿಂಹಾಸನದ ಮೇಲೆ ಅವರ ಕಣ್ಣಿದೆ ಎನ್ನುವ ವಿಚಾರ ತಿಳಿದು ನಮಗೆಲ್ಲಾ ಅವರ ಬಗ್ಗೆ ಕರುಣೆ ತಮ್ಮ ಬಗ್ಗೆ ಹೆಮ್ಮೆಯುಂಟಾದವು.</p>
<p>ರಾಜ : ಅಯ್ಯಾ ಬಿಳಿ ಆನೆ, ಯಾವುದಾದರೂ ನೆಪದಿಂದ ಆ ನನ್ನ ಮಗ ಮಂತ್ರೀನ್ನ ಜೇಲಿಗೆ ಕಳಿಸೋದಾಕ್ಕಾಗೋದಿಲ್ಲವ?</p>
<p>ಬಿಳಿ ಆನೆ : ನೆಪ ಯಾಕೆ ಪ್ರಭು? ಅದಿಲ್ಲದೇ ತಮ್ಮ ಆಸೆ ಈಡೇರಿಸಲಿಕ್ಕೆ ನಾನಿಲ್ಲವೆ? ಆಯ್ತು ಬಿಡಿ. ಇವತ್ತು ಮಂತ್ರಿಗಳು ಚೇಲಲ್ಲಿರುತ್ತಾರೆ. ಮೊನ್ನೆ ಬಂಗಾರಪೇಟೆ ಭಾಷಣದಲ್ಲಿ ಅವರ ಒಬ್ಬ ಶಿಷ್ಯ ಏನಂದನಂತೆ ಗೊತ್ತಾ ಪ್ರಭು; ಏನ್ರಿ&#8230;. ಒಬ್ಬೊಬ್ಬ ಬಿಳಿಆನೆಗೆ ಎಷ್ಟೆಷ್ಟು ಬಂಗಲೆಗಳಿವೆ ಗೊತ್ತಾ? -ಅಂದನಂತೆ; ಹೀಗೆಂದಾದರೂ ಅನ್ನಬಹುದೇ ಪ್ರಭು?</p>
<p>ರಾಜ : ಅನ್ನಬಹುದು.</p>
<p>ಬಿಳಿ ಆನೆ : ಪ್ರಭು, ಎಂಥ ಪ್ರಜೆಗಳಿರೋದರಿಂದ ತಮ್ಮಂಥ ರಾಜರಿದ್ದೀರಿ. ತಮ್ಮಂಥ ರಾಜರಿರೊದರಿಂದ ನಮ್ಮಂಥ ಅಧಿಕಾರಿಗಳಿದ್ದೀವಿ. ನಮ್ಮಂಥ ಅಧಿಕಾರಿಗಳಿರೊದರಿಂದ ಈ ದೇಶ ಹೀಗಿದೆ. ನಾವೆ ಇಲ್ಲದಿದ್ದರೆ ಈ ದೇಶ ಹೀಗಿರುತ್ತಿತ್ತೆ, ಪ್ರಭು? ಮಹಾಪ್ರಭುಗಳಾದ ತಮಗೆ ಅರಮನೆ ಇದೆ. ನಿಮ್ಮ ಸೇವಕರಾದ ನಮಗೆ ಒಂದೆರಡು ಚಿಕ್ಕ ಬಂಗಲೆಗಳಾದರೂ ಬೇಡವೇ ಪ್ರಭು?</p>
<p>ರಾಜ : ಆದರೆ ನೀವು ಬಂಗಲೆ ಕಟ್ಟಿಸಿಕೊಂಡಲ್ಲಿ ಗುಡಿಸಲು ಇದ್ದುವಂತಲ್ಲಾ?</p>
<p>ಬಿಳಿ ಆನೆ : ಅದೇ ಮತ್ತೆ ಪ್ರೋಗ್ರೆಸ್ಸನ್ನೋದು &#8211; ಗುಡಿಸಲಿದ್ದಲ್ಲಿ ಬಂಗಲೆ ಬಂತೋ ಇಲ್ಲವೋ ಹೆಳಿ. ನಮ್ಮದು ಲಂಡನ್ ರಾಣಿಯ ಗುಲಾಮರ ನೇರ ಸಂತಾನ ಪ್ರಭು ಅದಕ್ಕೆ  ನಮ್ಮನ್ನು ಐ.ಎ.ಎಸ್. ಅನ್ನೋದು.</p>
<p>ರಾಜ : ಅದಾಯ್ತು, ನೀನೀಗ ಬಂದಿರೋ ವಿಚಾರ ಏಣು?</p>
<p>ಬಿಳಿ ಆನೆ : ಮಹಾಪ್ರಭು, ರಾಜ್ಯದಲ್ಲಿ ಕಳ್ಳತನದ ಕೇಸು ಜಾಸ್ತಿ ಆಗಿವೆ. ಇತ್ತೀಚಿನ ಎಂ.ವೈ.ಜಿ. ವರದಿ ಪ್ರಕಾರ ರಾಜ್ಯದ ನಾಲ್ಕು ಕೋಟಿ ಪ್ರಜೆಗಳ ಪೈಕಿ ಮೂರು ಕೋಟಿ ತೊಂಭತೊಂಭತ್ತು ಸಾವಿರದಾ ಒಂಬೈನೂರ ತೊಂಭತ್ತೊಂಭತ್ತು ಜನ ಕಳ್ಳರಿದ್ದಾರೆ ಅಂತ ಸಿದ್ದವಾಗಿದೆ.</p>
<p>ರಾಜ : ಅಂದರೆ ಆ ಉಳಿದ ಒಬ್ಬ ಯಾರು? ನಾನು ತಾನೆ?</p>
<p>ಬಿಳಿ ಆನೆ : ಖಂಡಿತ ಹೌದು ಪ್ರಭು.</p>
<p>ರಾಜ : ಹಾಗಾದರೆ ನೀನೂ ಕಳ್ಳ ಅಂತಾಯ್ತು.</p>
<p>ಬಿಳಿ ಆನೆ : ಅಂಕಿಸಂಖ್ಯೆ ಸ್ವಲ್ಪ ತಿದ್ದಿದ್ದಾರೆ ಪ್ರಭು. ಕೊನೇ ಅಂಕಿ ಒಂಭೈನೂರಾ ತೊಂಭತ್ತೆಂಟು ಅಂತಾ ಇದೆ. ಬೇಕಾದರೆ ತಾವೇ ಪರಿಶೀಲಿಸಿ.</p>
<p>ರಾಜ : ನೀನೂ ಒಬ್ಬ ಕಳ್ಳ ಅಲ್ಲ ಅಂತಾಯ್ತು&#8230;. ಮುಂದೆ?</p>
<p>ಬಿಳಿ ಆನೆ : ಕಳ್ಳತನ ಕೆಟ್ಟದ್ದು ನಿಜ. ಹಾಗಂತ ಅದನ್ನ ಯಾರೂ ಬಿಡೋದಿಲ್ಲ. ಬಿಡಲಾರದ ವಿದ್ಯೆಯನ್ನು ಬಿಡಿಸೋದಕ್ಕೆ ಯಾಕೆ ಪ್ರಯತ್ನ ಮಾಬೇಕು.</p>
<p>ರಾಜ : ನೀ ಹೇಳೋದೇನಯ್ಯ?</p>
<p>ಬಿಳಿ ಆನೆ : ಪ್ರಭು ಕಳ್ಳತನಕ್ಕೆ ಲೈಸನ್ಸ್ ಮಾಡಿದರೆ ಹೇಗೆ?</p>
<p>ರಾಜ : ಭಲೆ!</p>
<p>ಬಿಳಿ ಆನೆ : ಲೈಸನ್ಸಿಗೆ ಇಂತಿಷ್ಟು ಸರಕಾರಿ ದರ ಅಂತ ಹೇಳಿಬಿಟ್ಟರೆ ಎಲ್ಲರೂ ಲೈಸನ್ಸ್ ತೆಗೆಸ್ತಾರೆ. ಬೊಕ್ಕಸ ತುಂಬಿ ತುಳುಕುತ್ತೆ&#8230;.</p>
<p>ರಾಜ : ಹೌದು, ಹೊರಗಡೆ ಗಲಾಟೆ ಆಗ್ತಿದೆಯಲ್ಲ, ಯಾಕೆ?</p>
<p>ಬಿಳಿ ಆನೆ : ದೇಶದ ಪ್ರಜೆಗಳೆಲ್ಲಾ ಲೈಸನ್ಸ್ ತೆಗಿಸೋದಕ್ಕೆ ಕಾಯ್ತಾ ಇದ್ದಾರೆ ಪ್ರಭು; ಬೇಗನೆ ಸಹಿ ಹಾಕಿ.</p>
<p>ಚಾರ : ಮಹಾಪ್ರಭು ಹೊರಗೆ ಚಿಲ್ಲರೆ ಕಾಯ್ತಾ ಇದಾರೆ.</p>
<p>ರಾಜ : ಆಮೇಲೆ ಸಹಿ ಹಾಕೋಣ ಕಾದಿರು. ಚಿಲ್ಲರೆಯನ್ನು ಒಳಕ್ಕೆ ಬಿಡಯ್ಯ. <em>(</em><em>ಚಾರ</em><em> </em><em>ಹೋಗುವನು</em><em>)</em><em></em></p>
<p>ಬಿಳಿ ಆನೆ : ಚಿಲ್ಲರೆ ಬಗ್ಗೆ ಸ್ವಲ್ಪ ನಿಗಾ ಇರಲಿ ಪ್ರಭು. ಎನಂದರೂ ನಂಬಿಕಸ್ತನಲ್ಲ. ಹ್ಯಾಗೋ ತೇಲಿಸಿ ಮಾತಾಡಿ ಕಳಿಸಿಬಿಡಿ. ಇನ್ನೊಂದು ವಿಚಾರ; ಮಂತ್ರಿಗಳು ರಾಜೀನಾಮೆ ಕೊಟ್ಟರಂತೆ&#8230;. ಹೌದೆ ಪ್ರಭು? ಕೊಟ್ಟರೆ ತಗಂಡು ಬಿಡಿ, ನೋಡಿಕೊಳ್ಳೋದಕ್ಕೆ ನಾನಿಲ್ಲವೆ? ಹೊರಗಡೆ ಕಾಯ್ತೇನೆ ಪ್ರಭು.<br />
<em>(</em><em>ಹೊರಡುವನು</em><em>. </em><em>ದಾರಿಯಲ್ಲಿ</em><em> </em><em>ಚಿಲ್ಲರೆ</em><em> </em><em>ಸಿಗುವನು</em><em>. </em><em>ಬಿಳಿಆನೆ</em><em> </em><em>ಮೆಲ್ಲನೆ</em><em> </em><em>ಅವನ</em><em> </em><em>ಕಿವಿಯಲ್ಲಿ</em><em>)</em><em></em></p>
<p>ಬಿಳಿ ಆನೆ : ನಮಸ್ಕಾರ&#8230;. ನಿಮ್ಮ ಬಗ್ಗೆ ರಾಜರ ಮುಂದೆ ಒಳ್ಳೆ ಮಾತಾಡಿದ್ದೀನಿ.</p>
<p>ಚಿಲ್ಲರೆ : ತುಂಬಾ ಉಪಕಾರವಾಯ್ತು.<br />
<em>(</em><em>ಬಂದು</em><em> </em><em>ನಮಸ್ಕರಿಸಿ</em><em>)</em><em><br />
</em>ಮಹಾಪ್ರಭುಗಳಿಗೆ ಜಯವಾಗಲಿ.</p>
<p>ರಾಜ : ನನ್ನ ಕಿವಿ ತಾನೇ ನಿನಗೆ ಬೇಕಾಗಿರೋದು?</p>
<p>ಚಿಲ್ಲರೆ : ಹೌದು ಪ್ರಭು.</p>
<p>ರಾಜ : ಛೆ, ನನ್ನ ಕಿವಿ ಒಂದು ಮೊಳ ಉದ್ದ ಇದ್ದಿದ್ದರೆ ಕೊಡೋದಕ್ಕೆ ಎಷ್ಟು ಅನುಕೂಲವಾಗುತ್ತಿತ್ತು? ಅಥವಾ ನಿಮ್ಮ ಬಾಯಿಗೆ ಒಂದೊಂದು ಕಿವಿ ತುರುಕಿ ನನ್ನ ಪಾಡಿಗೆ ನಾನು ನಿದ್ದೆ ಮಾಡಬಹುದಿತ್ತು.</p>
<p>ಚಿಲ್ಲರೆ : ನಾವು ಕೇಳಿದಾಗಲೆಲ್ಲಾ ಉದಾರವಾಗಿ ಕಿವಿ ಕೊಟ್ಟದ್ದರಿಂದ ತಮ್ಮ ಕಿವಿ ಆಗಲೇ ಗೇಣುದ್ದ ಆಗಿವೆ ಪ್ರಭು.</p>
<p>ರಾಜ : ಹೌದ? ಹಾಗಿದ್ದರೆ ಇನ್ನಷ್ಟು ಉದ್ದ ಆಗಲಿ. ಅದೇನು ಹೇಳ್ತೀಯೋ ಹೇಳು.</p>
<p>ಚಿಲ್ಲರೆ : ಮಂತ್ರಿಗಳು ರಾಜೀನಾಮೆ ಕೊಟ್ಟರಂತೆ ಹೌದೇ ಪ್ರಭು? ಕೊಟ್ಟರೆ ತಗಂಡು ಬಿಡಿ. ನೋಡಿಕೊಳ್ಳೋದಕ್ಕೆ ನಾನಿಲ್ಲವೆ? ಅದೇನಿದ್ದರೂ ಬಿಳಿಆನೆ ಬಗ್ಗೆ ಸ್ವಲ್ಪ ನಿಗಾ ಇರಲಿ ಪ್ರಭು. ಯಾಕೆಂದರೆ ನಂಬಿಕಸ್ತನಲ್ಲ, ಪಿತೂರಿಜನ.</p>
<p>ರಾಜ : ಹೊರಗಡೆ ಗಲಾಟೆ ಕೇಳಿಸುತ್ತಲ್ಲ, ಏನದು?</p>
<p>ಚಿಲ್ಲರೆ : ಕಲಾವಿದರೆಲ್ಲಾ ಸೇರಿ ತಮಗೆ ಜಯಕಾರ ಹೇಳುತ್ತಿದ್ದಾರೆ ಪ್ರಭು.</p>
<p>ರಾಜ : ಯಾಕೆ?</p>
<p>ಚಿಲ್ಲರೆ : ನಾನು ಈಗ ತೋರಿಸಲಿರುವ ಕಾಗದಕ್ಕೆ ತಾವು ಸಹಿ ಹಾಕಲಿದ್ದೀರಿ ಅದಕ್ಕೆ.</p>
<p>ರಾಜ : ಅದೇನಿದೆಯೋ ಹೇಳು ನೋಡೋಣ.</p>
<p>ಚಿಲ್ಲರೆ : ಪ್ರಭು, ಬಡವರ ಬಗೆಗಿನ ತಮ್ಮ ಕಾಳಜಿ ಇಡೀ ರಾಜಧಾನಿಯಲ್ಲಿ ಜಗತ್ ಪ್ರಸಿದ್ದವಾಗಿದೆ. ಬಡವರು ಉದ್ಧಾರವಾಗಬೇಕು. ಅವರು ನಗುನಗುತ್ತ ಇರಬೇಕನ್ನೋದು ತಮ್ಮ ಗುರಿ ಅಲ್ಲವೇ ಪ್ರಭು?</p>
<p>ರಾಜ : ಅಲ್ಲವೇ ಮತ್ತೆ?</p>
<p>ಚಿಲ್ಲರೆ : ಇಕಾ ಬಡವರನ್ನ ನಗಿಸೋ ಯೋಜನೆ ತಯಾರು ಮಾಡಿದ್ದೇನೆ. ಸಹಿ ಹಾಕಿ ಪ್ರಭು.</p>
<p>ರಾಜ : ಹೆಂಗೆ ಹೆಳಯ್ಯಾ ಅಂದರೆ.</p>
<p>ಚಿಲ್ಲರೆ : ಹೀಗೆ ಪ್ರಭು; ಬಡವರನ್ನೆಲ್ಲಾ ಒಂದು ಬಯಲಲ್ಲಿ ಸೇರಿಸೋದು&#8230;.</p>
<p>ರಾಜ : ಆಮೇಲೆ ಭಾಷಣಾ ಮಾಡೋದು ತಾನೆ?</p>
<p>ಚಿಲ್ಲರೆ : ಅಲ್ಲಲ್ಲ&#8230;. ಅಲ್ಲಿಗೆ ರಾಜ್ಯದ ಮಹಾನ್ ಕಲಾವಿದರು ಬುಟ್ಟಿತಗೊಂಡು ಹೋಗುತ್ತಾರೆ. ನೋಡಿದರೆ ಬುಟ್ಟಿತುಂಬಾ ರೊಟ್ಟಿ; ಆಮೇಲೆ ಆ ಕಲಾವಿದರೂ ಬಡವರ ಎದುರಿನಲ್ಲೇ ರೊಟ್ಟಿ ತಿಂತಾರೆ; ಆಹಾ ರುಚಿ ಅಂತಾರೆ, ಬಡವರು ಕೋಪ ತಾಪ ಹಸಿವು ಅಂತಾರೆ- ಇವರು ತಿಂತಾರೆ, ಅವರು ನೋಡುತ್ತಾರೆ. ಅವರು ನೋಡುತ್ತಾರೆ-ಇವರು ತಿಂತಾರೆ. ಕೊನೆಗೆ ನೋಡಿದರೆ ಬುಟ್ಟಿ ತುಂಬಾ ಇರೋದು ರಟ್ಟಿನ ರೊಟ್ಟಿ; ಅರೆ, ರಟ್ಟಿನ ರೊಟ್ಟೀನ ನಿಜವಾದ ರೊಟ್ಟೀ ಹಾಗೆ ತಿಂದರಲ್ಲ! ಅಂತ ಜನ ಹೋ ಅಂತ ಚಪ್ಪಾಳೆ ತಟ್ಟಿ ನಗುತ್ತಾರೆ.</p>
<p>ರಾಜ : ಜನ ನಗುತ್ತಾರೆ ಅಂತೀಯಾ?</p>
<p>ಚಿಲ್ಲರೆ : ಪ್ರಯೋಗ ಮಾಡಿ ನೋಡಿ ಹೇಳತ್ತಿದ್ದೇನೆ ಪ್ರಭು.</p>
<p>ರಾಜ : ಜನ ನಕ್ಕರ?</p>
<p>ಚಿಲ್ಲರೆ : ಬಿದ್ದೂ, ಬಿದ್ದು ನಕ್ಕರು ಪ್ರಭು; ಕೆಲವರಂತೂ ಬಿದ್ದವರು ಏಳಲೇ ಇಲ್ಲ. ಒಂದು ಬಾರಿಯಂತೂ ಎಲ್ಲಾ ಬಡವರು ಈಗಷ್ಟೇ ಹುಚ್ಚಾಸ್ಪತ್ರೆಯಿಂದ ಓಡಿ ಬಂದವರ ಹಾಗೆ ನಗುತ್ತಿದ್ದರು. ಯಾಕಪ್ಪಾ ಹೀಗೆ ಅಂತ ನೋಡಿದರೆ, ಕೆಲವು ಕಲಾವಿದರು ರಟ್ಟಿನ ರೊಟ್ಟಿ ತಿಂದಹಾಗೆ ಮಣ್ಣು ತಿಂದೂ ತಿಂದೂ ಬಡವರನ್ನ ನಗಿಸ್ತಾ ಇದ್ರು ಪ್ರಭು.</p>
<p>ರಾಜ : ಭೇಷ್, ಒಳ್ಳೆ ಯೋಜನೆ, ನಿಮ್ಮಂಥ ಅಧಿಕಾರಿಗಳನ್ನು ಪಡೆದ ಈ ದೇಶವೇ ಧನ್ಯ; ಎಂಥೆಂಥಾ ತಲೆಗಳಪ್ಪಾ ನಿಮ್ಮದು; ಛೇ, ನಿಮ್ಮ ತಲೆ ಹಿಡಿಯೋ ಯೋಗ್ಯತೇನೂ ಇಲ್ಲವೇ ನಮ್ಮ ಜನಕ್ಕೆ;<br />
<em>(</em><em>ಹೊರಗಡೆ</em><em> </em><em>ಗಲಾಟೆ</em><em> </em><em>ಜಾಸ್ತಿ</em><em> </em><em>ಆಗುತ್ತಲೇ</em><em> </em><em>ಇದೆ</em><em>. </em><em>ಚಾರ</em><em> </em><em>ಓಡಿಬರುವನು</em><em>)</em><em></em></p>
<p><em>ಚಾರ :</em> ಪ್ರಭು, ಹೊರಗಡೆ ಜನ ಜಮಾಯಿಸಿ ತಮ್ಮನ್ನು ಅರ್ಜಂಟಾಗಿ ನೋಡಬೇಕಂತಿದ್ದಾರೆ. <em>(</em><em>ಬಿಳಿ</em><em> </em><em>ಆನೆ</em><em> </em><em>ಒಳಕ್ಕೆ</em><em> </em><em>ಬಂದು</em><em>)</em><em></em></p>
<p><em>ಬಿಳಿ ಆನೆ :</em> ಅವರು ಪ್ರಜೆಗಳು ಪ್ರಭು, ಕಳ್ಳತನಕ್ಕೆ ಲೈಸೆನ್ಸ್ ಮಾಡಿದರೆ ತಮ್ಮನ್ನು ಅಭಿನಂದಿಸಬೇಕೆಂದು ಕಾದಿದ್ದಾರೆ. ತಾವು ಬೇಗ ಸಹಿ ಹಾಕಿ ಪ್ರಭು&#8230;.</p>
<p>ಚಿಲ್ಲರೆ : ಪ್ರಜೆಗಳಲ್ಲ ಪ್ರಭು, ಬಿಲ್ಲಿಗೆ ಸಹಿ ಹಾಕಿದರೆ ತಮ್ಮನ್ನು ಅಭಿನಂದಿಸಲು ಕಲಾವಿದರೆಲ್ಲ ಸೇರಿದ್ದಾರೆ.</p>
<p>ಬಿಳಿ ಆನೆ :  ಸೇರಿದವರು ಪ್ರಜೆಗಳು ಕಣ್ರಿ.</p>
<p>ಚಿಲ್ಲರೆ : ಸೇರಿದವರು ಕಲಾವಿದರು ರೀ.</p>
<p>ಬಿಳಿ ಆನೆ : ಈ ಬಿಲ್ ಪಾಸ್ ಮಾಡೋಕೆ ನೀವೆಷ್ಟು ತಗೊಂಡಿದ್ದೀರಿ ಅಂತ ಗೊತ್ತು ರೀ&#8230;. <em>(</em><em>ಚಾರ</em><em> </em><em>ಮತ್ತೆ</em><em> </em><em>ಓಡಿ</em><em> </em><em>ಬರುವನು</em><em>)</em><em></em></p>
<p><em>ಚಿಲ್ಲರೆ :</em> ಪ್ರಭು, ಎಲ್ಲರೂ ಕ್ರಾಂತಿಗೆ ಜಯವಾಗಲಿ ಅಂತ ಕೂಗ್ತಿದಾರೆ.</p>
<p>ಬಿಳಿ ಆನೆ : ಕಲಾವಿದರ ಬಿಲ್ ಪಾಸ್ ಮಾಡಿದರೆ ಜನ ಕ್ರಾಂತಿ ಮಾಡಿದೇ ಬಿಡ್ತಾರೆಯೇ ಪ್ರಭು?</p>
<p>ಚಿಲ್ಲರೆ : ಕಳ್ಳತನಕ್ಕೆ ಲೈಸನ್ಸ್ ಎಲ್ಲಾದರೂ ಉಂಟೆ ಪ್ರಭು!</p>
<p>ಬಿಳಿ ಆನೆ : <em>(</em><em>ಚಿಲ್ಲರೆಗೆ</em><em>) </em>ಏನ್ರಿ, ನಮಗ ನಾವೇ ಈ ರೀತಿ ಬಿಟ್ಟುಕೊಡೋದಾ? ನಾವು ಅಧಿಕಾರಿಗಳೆಲ್ಲಾ ಒಂದೇ ಅಲ್ಲವೇನ್ರಿ&#8230;. ರಾಜರದೊಂದು ಶಾಹಿ ಇದ್ದರೆ ನಮ್ಮದೂ ಒಂದು ನೌಕರಶಾಹಿ ಇದೇರಿ&#8230;. <em>(</em><em>ಚಿಲ್ಲರೆಗೆ</em><em> </em><em>ಕಣ್ಣುಹೊಡೆಯುವನು</em><em>)</em><em></em></p>
<p><em>ರಾಜ :</em> ಏನಂದ್ರೀ&#8230;.</p>
<p>ಬಿಳಿ ಆನೆ : ಜನ ಕ್ರಾಂತಿ ಅನ್ನೋದ್ರಲ್ಲಿ ಅರ್ಥ ಇದೆ ಪ್ರಭು. ಕಳ್ಳತನಕ್ಕೆ ಲೈಸನ್ಸ್ ಕೊಡೋದು, ಕಲೆಯಿಂದ ಉದ್ದಾರ ಮಾಡೋದು- ಇವೆಲ್ಲ ಕ್ರಾಂತಿಕಾರಕ ವಿಚಾರ ನೋಡಿ. ಅದಕ್ಕೇ ಜನ ಕ್ರಾಂತಿ ಕ್ರಾಂತಿ ಅಂತಿದ್ದಾರೆ.</p>
<p>ರಾಜ : ನಮ್ಮ ಮಾಜಿ ಮಂತ್ರಿ ಅಲ್ಲಿ ಇದ್ದಾನಾ?</p>
<p>ಚಾರ : ಜನರನ್ನು ಸಮಾಧಾನ ಮಾಡೋದಕ್ಕೆ ಪ್ರಯತ್ನ ಮಾಡ್ತಿದಾರೆ, ಆದರೆ ಅವರ ಮಾತು ಒಬ್ಬರಿಗೂ ತಿಳಿಯುತ್ತಿಲ್ಲ. <em>(</em><em>ಗಲಾಟೆ</em><em> </em><em>ಇನ್ನೂ</em><em> </em><em>ಜಾಸ್ತಿ</em><em> </em><em>ಆಗುತ್ತಿದೆ</em><em>. </em><em>ಕ್ರಾಂತಿಗೆ</em><em> </em><em>ಜಯವಾಗಲಿ</em><em> </em><em>ಇತ್ಯಾದಿ</em><em> </em><em>ಘೋಷಣೆ</em><em> </em><em>ಕೇಳಿಸುತ್ತದೆ</em><em>.)</em><em></em></p>
<p>ಚಿಲ್ಲರೆ : ಅಯ್ಯಯ್ಯೋ; ಕ್ರಾಂತೀನೇ, ಆ ಮಂತ್ರೀನೇ ಮಾಡಿಸ್ತಿದಾನೆ, ಎಲಾ, ಯಾರಲ್ಲಿ,</p>
<p>ಚಾರ : ಏನಪ್ಪಣೆ?</p>
<p>ಚಿಲ್ಲರೆ : ಪ್ರಭುಗಳು ಖುದ್ದಾಗಿ ಆಜ್ಞೆ ಮಾಡಿದ್ದಾರೆ; ಜನರ ಮೇಲೆ ಪೊಲೀಸರನ್ನು ಛೂ ಬಿಡೋದಕ್ಕೆ ಹೇಳು.</p>
<p>ಚಾರ : ಅಪ್ಪಣೆ<em> (</em><em>ಹೋಗುವನು</em><em>, </em><em>ಗಲಾಟೆ</em><em>, </em><em>ಲಾಠಿ</em><em> </em><em>ಚಾರ್ಜು</em><em>, </em><em>ಅಶ್ರುವಾಯು</em><em> </em><em>ಕೇಳಿ</em><em> </em><em>ಬರುತ್ತಿವೆ</em><em>.)</em><em></em></p>
<p><em>ಬಿಳಿ ಆನೆ :</em> ಎಲಾ ಯಾರಲ್ಲಿ!</p>
<p>ಚಾರ : <em>(</em><em>ಓಡಿಬಂದು</em><em>) </em>ಏನಪ್ಪಣೆ?</p>
<p>ಬಿಳಿ ಆನೆ : ಮಹಾಪ್ರಭುಗಳು ಅಪ್ಪಣೆ ಮಾಡಿದ್ದಾರೆ : ಜನರ ಮೇಲೆ ಸೈನ್ಯಬಿಟ್ಟು ಕಂಡಲ್ಲಿ ಗುಂಡು ಹಾರಸೋದಕ್ಕೆ ಹೇಳು.</p>
<p>ಚಾರ : ಅಪ್ಪಣೆ, <em>(</em><em>ಹೋಗುವನು</em><em>, </em><em>ಮುಂಚಿನ</em><em> </em><em>ಗಲಾಟೆಯ</em><em> </em><em>ಜೊತೆಗೆ</em><em> </em><em>ಈಗ</em><em> </em><em>ಗುಂಡಿನ</em><em> </em><em>ಸಪ್ಪಳ</em><em> </em><em>ಸೇರಿಕೊಳ್ಳುತ್ತದೆ</em><em>) </em><em></em></p>
<p>ಬಿಳಿ ಆನೆ : ಪ್ರಭು, ಈ ಗಲಾಟೆಯನ್ನು ಹತ್ತಿಕ್ಕುವುದು ಸಾಧ್ಯವಿಲ್ಲ, ನಾವು ಇಲ್ಲಿಂದ ಪಾರಾಗುವುದೇ ಮೇಲು. <em>(</em><em>ಚಾರ</em><em> </em><em>ಓಡಿ</em><em> </em><em>ಬರುವನು</em><em>)</em><em></em></p>
<p><em>ಚಾರ :</em> ದಯವಿಟ್ಟು ಹೋಗಬೇಡಿ, ಎಲ್ಲಾ ಕಡೆ ಜನ ತುಂಬಿ ಬಿಟ್ಟಿದ್ದಾರೆ. ನಿಮ್ಮ ಮುಖ ನೋಡದೇ ಹಿಂದಿರುಗುವುದಿಲ್ಲವೆಂದು ಶಪಥ ಮಾಡಿದ್ದಾರೆ.</p>
<p>ರಾಜ : ನನ್ನ ಮುಖ? ಆದರೆ ಬೆಳಿಗ್ಗೆ ಎದ್ದಾಗಿಂದ ನಾನು ಮುಖಾನೇ ತೊಳೆದಿಲ್ಲವಲ್ಲ! ಹಳಸಲು ಮುಖ ಹ್ಯಗಪ್ಪ ತೋರಿಸೋದು?</p>
<p>ಚಾರ : ಆದರೆ ಖಂಡಿತಾ ನಿಮ್ಮ ಮುಖ ನೋಡದೇ ಅವರು ಹೋಗೋದಿಲ್ಲ ಪ್ರಭು.</p>
<p>ರಾಜ : ಆಯ್ತು&#8230;. ಪ್ರಜೆಗಳು ನಮ್ಮ ಮುಖ ನೋಡಲೇಬೇಕಂತ ಹಟ ಹಿಡಿದರೆ ನಾವು ಏನು ಮಾಡಲಿಕ್ಕಾಗುತ್ತೆ? ಹೋಗಲಿ ಬೆಳಿಗ್ಗೆದ್ದು ಸಂಡಾಸಕ್ಕೆ ಹೋಗಿ ಬಂದು ಕಾಲಮೇಲೆ ನೀರು ಹಾಕ್ಕೊಂಡಿದ್ದೇನೆ. ಕಾಲು ತೋರಿಸಿದರೆ ಸಾಕಲ್ಲವೆ?</p>
<p>ಬಿಳಿ ಆನೆ : ಸಾಕು ಪ್ರಭು&#8230;.</p>
<p>ಚಿಲ್ಲರೆ : ಸಾಕಾಗೋದಿಲ್ಲ ಪ್ರಭು</p>
<p>ಬಿಳಿ ಆನೆ : ಸಾಕುರೀ&#8230;.</p>
<p>ಚಿಲ್ಲರೆ : ಸಾಕಾಗೋದಿಲ್ಲ ಪ್ರಭು.</p>
<p>ಬಿಳಿ ಆನೆ : ರೀ, ನಿಮಗೆ ಅನುಭವ ಸಾಲದು, ಮೊದಲು ಸೀನಿಯರ ಆಫೀಸರಿಗೆ ಗೌರವ ಕೊಡೋದಕ್ಕೆ ಕಲೀರಿ.</p>
<p>ಚಿಲ್ಲರೆ : ಅನುಭವ, ಕತ್ತೆಗೂ ಇರುತ್ತೇರೀ&#8230;.</p>
<p>ಬಿಳಿ ಆನೆ :  ಯಾ‌ರೀ ಕತ್ತೆ? ನಿಮ್ಮಪ್ಪ ಕತ್ತೆ,ದ ನಿಮ್ಮಮ್ಮ ಕತ್ತೆ.</p>
<p>ಚಿಲ್ಲರೆ : ನಿಮ್ಮಜ್ಜಿ ಕತ್ತೆ, ನಿಮ್ಮ ತಾತ ಕತ್ತೇರಿ.</p>
<p>ರಾಜ : ಹೋ; ನಾಯಿ ನನ್ಮಕಳ್ರಾ&#8230;. <em>(</em><em>ಇಬ್ಬರೂ</em><em> </em><em>ಸ್ತಬ್ಧರಾಗುವರು</em><em>)</em><em></em></p>
<p>ಬಿಳಿ ಆನೆ :  ತಾವು ಒಂದು ಕಾಲು ತೋರಿಸಿದರೆ ಸಾಕು ಪ್ರಭು.</p>
<p>ಚಿಲ್ಲರೆ : ಸಾಲೋದಿಲ್ಲ ಪ್ರಭು&#8230;. ಪ್ರಜೆಗಳು ಭಕ್ತಿಯಿಂದ ಕೇಳುತ್ತಿದ್ದಾರೆ; ತಾವು ಕೊನೇ ಪಕ್ಷ ಎರಡು ಕಾಲುಗಳನ್ನಾದರೂ ತೋರಿಸಬೇಕು.</p>
<p>ರಾಜ : ನನಗೆ ಇನ್ನೆರಡು ಕಾಲು ಮೂಡಿಲ್ಲವಾದ್ದರಿಂದ ಸಧ್ಯ ಈಗಿರೋ ಎರಡು ಕಾಲನ್ನೇ ತೋರಿಸೋಣ. <em>(</em><em>ಇಬ್ಬರು</em><em> </em><em>ಅಧಿಕಾರಿಗಳು</em><em> </em><em>ಮೇಲೆ</em><em> </em><em>ಕೈ</em><em> </em><em>ಊರಿ</em><em> </em><em>ತನ್ನ</em><em> </em><em>ಎರಡೂ</em><em> </em><em>ಕಾಲುಗಳನ್ನು</em><em> </em><em>ಕಿಡಿಕಿಯಲ್ಲಿ</em><em> </em><em>ತೂರುವನು</em><em>. </em><em>ಹೊರಗೆ</em><em> </em><em>ಗಲಾಟೆ</em><em> </em><em>ಹಾಗೇ</em><em> </em><em>ನಡೆದಿದೆ</em><em>. </em><em>ಚಾರನನ್ನು</em><em> </em><em>ಕುರಿತು</em><em>.)</em><em></em></p>
<p><em>ರಾಜ :</em> ನೀನು ಹೋಗಿ &#8220;ರಾಜರ ಮುಖ ಕೊಳೆಯಾಗಿದೆ. ಈಗ ರಾಜರ ಕಾಲನ್ನು ಮಾತ್ರ ನೋಡಿ ತೃಪ್ತಿಪಟ್ಟುಕೊಳ್ಳಿ ಅಂತ ಹೇಳು&#8221; <em>(</em><em>ಚಾರು</em><em> </em><em>ಹೋಗುವನು</em><em>)</em><em></em></p>
<p><em>ರಾಜ :</em> ಕಾಲು ಒದ್ದೆಯಾಯ್ತಲ್ಲ&#8230;.</p>
<p>ಚಿಲ್ಲರೆ : ಬಹುಶಃ ಪ್ರಜೆಗಳು ತಮ್ಮ ಪಾದತೊಳೆದು ಪೂಜೆ ಮಾಡುತ್ತಿರಬೇಕು ಪ್ರಭು&#8230;.</p>
<p>ರಾಜ : ನೀರು ಬೆಚ್ಚಗಿದೆ? ಯಾರೋ ಉಚ್ಚಿ ಹೊಯ್ದಿರಬಹುದು ಮಾರಾಯಾ;<br />
<em>(</em><em>ಗಲಾಟೆ</em><em> </em><em>ಹಾಗೇ</em><em> </em><em>ಮುಂದುವರಿದಿರುವಾಗ</em><em> </em><em>ರಾಜನ</em><em> </em><em>ಕಾಲಿಗೆ</em><em> </em><em>ಏಟು</em><em> </em><em>ಬೀಳುತ್ತದೆ</em><em>)</em><em></em></p>
<p><em>ರಾಜ :</em> ಅಯ್ಯಯ್ಯೋ; ಯಾರೋ ಹೊಡೀತಿದಾರೆ&#8230;. ಬೇಗನೇ ಕಾಲೆಳೀರಿ&#8230;. ಬೇಗ, ಬೇಗ.</p>
<p>ಚಿಲ್ಲರೆ : ಜೀವೊ ಇಲ್ಲದೆ ಕಾಲೆಳೆಯೋದು ತಪ್ಪಲ್ಲವೇ?</p>
<p>ರಾಜ : ನಾನು ಹೇಳ್ತಿದ್ದೇನೆ ಎಳೀರಯ್ಯಾ.</p>
<p>ಚಿಲ್ಲರೆ : ಇವಯ್ಯಾ ಎಲ್ಲಾದಕ್ಕೂ ಕೊಕ್ಕೆ ಹಾಕ್ತಾರೆ. ಮೊದಲು ಇವರನ್ನ ಸರಿಪಡಿಸಿಕೊಳ್ಳಿ ಪ್ರಭು.</p>
<p>ರಾಜ : ಅಯ್ಯೋ ಅವರು ಆ ಕಡೆಯಿಂದ ಎಳೀತಿದಾರೆ. ಅಯ್ಯಯ್ಯೋ ನನ್ನ ಕಾಲು ನನ್ನ ಕಾಲು, ಕಿತ್ತು ಹೋಗುತ್ರೋ&#8230;.</p>
<p>ಬಿಳಿ ಆನೆ :  <em>(</em><em>ಎಳೆಯುತ್ತ</em><em>) </em>ಜೀವೊ ನಾನು ನೋಡಿಕೊಳ್ತೇನೆ. ಎಳೆಯಿರಿ. ನಿಮ್ಮ ಕಾಲು ಕಿತ್ತು ಕೊಂಡು ಹೋದರೂ ನಿಮ್ಮನ್ನು ನಾವು ಬಿಡೋದಿಲ್ಲ ಪ್ರಭೂ&#8230;.ಎಳೀರಿ ಎಳೀರಿ. ಜೋರಾಗಿ ಎಳೀರಿ. <em>(</em><em>ಇವರು</em><em> </em><em>ರಾಜನನ್ನು</em><em> </em><em>ಇತ್ತ</em><em> </em><em>ಎಳೆಯುತ್ತಿದ್ದಾರೆ</em><em>. </em><em>ಪ್ರಜೆಗಳು</em><em> </em><em>ಅತ್ತ</em><em> </em><em>ಎಳೆಯುತ್ತಿದ್ದಾರೆ</em><em>, </em><em>ನಡುವೆ</em><em> </em><em>ರಾಜ</em><em> </em><em>ಒದ್ದಾಡುತ್ತಿದ್ದಾನೆ</em><em>. </em><em>ಯಾರೊಬ್ಬರೂ</em><em> </em><em>ಸೋಲುತ್ತಿಲ್ಲ</em><em>. </em><em>ರಾಜ</em><em> </em><em>ಅಯ್ಯಯ್ಯೋ</em><em> </em><em>ಎಂದು</em><em> </em><em>ಸಂಕಟ</em><em> </em><em>ಪಡುತ್ತಿದ್ದಾನೆ</em><em>. </em><em>ಅಷ್ಟರಲ್ಲಿ</em><em> </em><em>ಶಿವ</em><em> </em><em>‘</em><em>ಪ್ರಭೂ</em><em>’ </em><em>ಎನ್ನತ್ತ</em><em> </em><em>ಓಡಿ</em><em> </em><em>ಬರುತ್ತಾನೆ</em><em>.)</em></p>
<p>ಶಿವ : ಪ್ರಭು ನೀವು ನನಗೊಂದು ಅವಕಾಶ ಕೊಟ್ಟರೆ ಒಂದೇ ಕ್ಷಣದಲ್ಲಿ ಹೊರಗಡೆ ಜನರನ್ನೆಲ್ಲಾ ಓಡಿಸಿಬಿಡುತ್ತೇನೆ.</p>
<p>ರಾಜ : ಕೊಟ್ಟಿದ್ದೇನೆ, ಅದೇನ್ಮಾಡ್ತೀಯೋ ಬೇಗ ಮಾಡಯ್ಯಾ.</p>
<p>ಶಿವ : <em>ಡಿಂಗ್‌ಡಾಂಗ್</em><em>; (</em><em>ಹೊರಗಡೆಯಿಂದ</em><em> </em><em>ಕತ್ತೆಯ</em><em> </em><em>ಹೇಂಕಾರ</em><em> </em><em>ಭಯಂಕರವಾಗಿ</em><em> </em><em>ಕೇಳಿ</em><em> </em><em>ಬರುತ್ತದೆ</em><em>)</em> ಡಿಂಗ್‌ಡಾಂಗ್, ರಾಜರ ಜೀವ ಉಳಿಸೋದು ನಮ್ಮ ಕರ್ತವ್ಯ ಅಲ್ಲವಾ?<em> (</em><em>ಮತ್ತೆ</em><em> </em><em>ಕತ್ತೆಯ</em><em> </em><em>ಹೇಂಕಾರ</em><em>)</em>ಹಾಗಿದ್ದರೆ ಹೊರಗಡೆಯ ಜನರನ್ನೆಲ್ಲಾ ಒದ್ದೋಡಿಸು.<em> (</em><em>ಈಗ</em><em> </em><em>ಈತನಕ</em><em> </em><em>ಕೇಳಿಸುತ್ತಿದ್ದ</em><em> </em><em>ಗಲಾಟೆಯ</em><em> </em><em>ಸಪ್ಪಳದಲ್ಲಿ</em><em> </em><em>ವ್ಯತ್ಯಾಸವಾಗುತ್ತದೆ</em><em>. </em><em>ಕತ್ತೆಯ</em><em> </em><em>ಹೇಂಕಾರ</em><em> </em><em>ಭಯಂಕರವಾಗಿ</em><em>, </em><em>ಅದು</em><em> </em><em>ಒದೆಯುವುದು</em><em>, </em><em>ಜನ</em><em> </em><em>ಕಿರುಚುವುದು</em><em>, </em><em>ಒದರುವುದು</em><em> </em><em>ಕೇಳಿಸುತ್ತದೆ</em><em>. </em><em>ಸ್ವಲ್ಪ</em><em> </em><em>ಸಮಯದಲ್ಲೇ</em><em> </em><em>ರಾಜನ</em><em> </em><em>ಕಾಲು</em><em> </em><em>ಸ್ವತಂತ್ರವಾಗುತ್ತವೆ</em><em>. </em><em>ರಾಜ</em><em> </em><em>ಮತ್ತು</em><em> </em><em>ಉಳಿದವರು</em><em> </em><em>ಕಿಟಕಿಯಲ್ಲಿ</em><em> </em><em>ಹಣಕಿ</em><em> </em><em>ಹಾಕಿ</em><em> </em><em>ಆನಂದ</em><em>, </em><em>ಆಶ್ಚರ್ಯಗಳಿಂದ</em><em> </em><em>ಹೊರಗಡೆಯ</em><em> </em><em>ಕತ್ತೆಯ</em><em> </em><em>ಚಟುವಟಿಕೆಗಳನ್ನು</em><em> </em><em>ನೋಡುತ್ತಾರೆ</em><em>.)</em><em></em></p>
<p>ರಾಜ : ಅಬ್ಬಾ; ಇದು ಕುದುರೆಯೋ! ಕತ್ತೆಯೋ! ರಾಕ್ಷಸನೋ!</p>
<p>ಚಿಲ್ಲರೆ : ಹ್ಯಾಗೆ ಎಲ್ಲರನ್ನೂ ಅಟ್ಟಿಸಿಕೊಂಡು ಹೋಗಿ ಒದೀತಿದೆ ನೋಡಿ; ಇದು ಗಾಡ್ಲಿ ಪ್ರಾಣಿ ಪ್ರಭು;</p>
<p>ಬಿಳಿ ಆನೆ :  ಇಂಗ್ಲಂಡ್ ಅಮ್ಮನವರ ಹತ್ತಿರ ಇಂಥಾದ್ದು ಎರಡೋ ಮೂರೋ ಇದೆ ಪ್ರಭು.</p>
<p>ಚಿಲ್ಲರೆ : ಹ್ಯಾಗೆ ಎಲ್ಲರನ್ನೂ ಅಟ್ಟಿಸಿಕೊಂಡು ಹೋಗಿ ಒದೀತಿದೆ; ಜನ ಎಲ್ಲಾ ಹ್ಯಾಗೆ ಓಡಿ ಹೋದರು ನೋಡಿ;</p>
<p>ಬಿಳಿ ಆನೆ :  ಗ್ರೇಟ್; ಗ್ರೇಟ್; ಹೆಸರು ನೋಡಿ; ಡಿಂಗ್‌ಡಾಂಗ್-ಅಂತ;</p>
<p>ರಾಜ : ಡಿಂಗ್‌ಡಾಂಗ್!</p>
<p>ಬಿಳಿ ಆನೆ :  ಈ ಕತ್ತೇ ಹುಡುಗನಿಗೆ ನಾನೇ ಹೇಳಿಕಳಿಸಿದ್ದೆ ಪ್ರಭು&#8230;.</p>
<p>ರಾಜ : ಡಿಂಗ್‌ಡಾಂಗ್!<br />
ಭಲೇ; ಭಲೆ, ಏನೋ ಮರಿ ನಿನ್ನ ಹೆಸರು?</p>
<p>ಶಿವ : ಶಿವಾ ಅಂತ&#8230;. ಬಡವ ಪ್ರಭು, ದಯಮಾಡಿ ಒಂದು ನೌಕರಿ ಕೊಟ್ಟರೆ ಬದುಕಿಕೊಳ್ತೇನೆ.</p>
<p>ಬಿಳಿ ಆನೆ : ಹೌದು, ಹೌದು, ಇವನನ್ನ ಕಾಡುಪ್ರಾಣಿ ರಕ್ಷಣಾ ಮಂಡಳಿಯ ಅಧ್ಯಕ್ಷನನ್ನಾಗಿ ಮಾಡಬೇಕೂಂತ ನನ್ನ ಶಿಫಾರ್ಸು ಪ್ರಭು.</p>
<p>ಚಿಲ್ಲರೆ : ಛೆ, ಹಿಂದುಳಿದ ವರ್ಗದ ನಿಗಮಕ್ಕೆ ಅಧ್ಯಕ್ಷನನ್ನಾಗಿ ಮಾಡಿ ಪ್ರಭು.</p>
<p>ರಾಜ : ಅಯ್ಯಾ ಶಿವಾ, ಹೋಗು, ನಿನ್ನ ಡಿಂಗ್‌ಡಾಂಗ್ ನನ್ನ ಕರದುಕೊಂಡು ಬಾ. <em>(</em><em>ಶಿವ</em><em> </em><em>ಹೋಗಿ</em><em> </em><em>ಡಿಂಗ್‌ಡಾಂಗ್</em><em> </em><em>ಜೊತೆ</em><em> </em><em>ಬರುವನು</em><em>. </em><em>ಅದನ್ನು</em><em> </em><em>ನೋಡುತ್ತಿದ್ದಂತೆ</em><em> </em><em>ಅಲ್ಲಿದ್ದವರಿಗೆಲ್ಲಾ</em><em> </em><em>ಆಶ್ಚರ್ಯವಾಗುತ್ತದೆ</em><em>.)</em></p>
<p>ರಾಜ : ಪವಾಡ! ಪವಾಡ! ಅದರ ಮೈಕಟ್ಟೇನು; ಕಾಲೇನು; ಕಿವಿಯೇನು! ಇಂಥ ಕಿವಿ ನನಗಿರಬಾರದಿತ್ತೆ ಎನಿಸುತ್ತೆ.</p>
<p>ಬಿಳಿ ಆನೆ :  ಅಯ್ಯೋ ಡಿಂಗ್‌ಡಾಂಗ್ ಥರ ನನಗೂ ನಾಲ್ಕು ಕಾಲಿರಬಾರದೇ ಅಂತ ಅನಿಸುತ್ತೆ ಪ್ರಭು.</p>
<p>ಚಿಲ್ಲರೆ : ಛೆ, ಶನಿವಾರದ ಬದಲು ಭಾನುವಾರ ಹುಟ್ಟಿದ್ದರೆ ನಾನೇ ಡಿಂಗ್‌ಡಾಂಗ್ ಆಗಿ ಹುಟ್ಟುತ್ತಿದ್ದೆನೋ ಏನೊ;</p>
<p>ಬಿಳಿ ಆನೆ : <em>(</em><em>ಶಿವನ</em><em> </em><em>ಕಿವಿಯಲ್ಲಿ</em><em>) </em>ರಾಜರ ಹತ್ತಿರ ನಿನ್ನ ಬಗ್ಗೆ ತುಂಬಾ ಹೇಳಿದ್ದೀನಿ. ಆಮೇಲೆ ಬಂದು ಭೇಟಿ ಮಾಡು.</p>
<p>ರಾಜ : ನೋಡ್ರಯ್ಯ ಎಲ್ಲರೂ ಕೇಳಿ ಇವೊತ್ತಿನಿಂದ ಈ ರಾಜ್ಯದ ಪ್ರಧಾನ ಮಂತ್ರಿ&#8230;.</p>
<p>ಬಿಳಿ ಆನೆ :  ಪ್ರಧಾನಮಂತ್ರಿ ಶಿವಣ್ಣನವರಿಗೆ</p>
<p>ಎಲ್ಲರೂ : <em>(</em><em>ರಾಜನನ್ನು</em><em> </em><em>ಬಿಟ್ಟು</em><em>) </em>ಜಯವಾಗಲಿ&#8230;.</p>
<p>ರಾಜ : ಸರಿಯಾಗಿ ಕೇಳಿಕೊಳ್ರಯ್ಯಾ, ಇವೊತ್ತಿನಿಂದ ಈ ರಾಜ್ಯದ ಮಂತ್ರಿ ಶಿವಣ್ಣ ಅಲ್ಲ; ಡಿಂಗ್‌ಡಾಂಗ್!</p>
<p>ಬಿಳಿ ಆನೆ : ಪ್ರಭೂ!</p>
<p>ರಾಜ : ಪ್ರಧಾನಮಂತ್ರಿ ಡಿಂಗ್‌ಡಾಂಗ್ಗೆ ಜಯವಾಗಲಿ ಅನ್ರೊ&#8230;.</p>
<p>ಎಲ್ಲರೂ : ಜಯವಾಗಲಿ.</p>
<p>ರಾಜ : ಡಿಂಗ್‌ಡಾಂಗ್ ಪ್ರಧಾನಮಂತ್ರಿ, ಶಿವಾ ಅದರ ಪೀಯೆ. ನೋಡಯ್ಯಾ ಶಿವ, ನೀನು ಪ್ರಧಾನಮಂತ್ರಿಗಳ ಉಸ್ತುವಾರಿ ನೋಡಿಕೊಂಡು ಅವರ ಆಸೆಗಳನ್ನು ಭಾಷಾಂತರ ಮಾಡಿ ನಮಗೆ ಹೇಳುತ್ತಿರಬೇಕು. ಪಾರ್ಕಿನಲ್ಲಿರೋ ಅರಮನೆ ನಿಮ್ಮದು. ತಿಳೀತೋ? ಅಯ್ಯಾ ಚಾರ, ಇವರನ್ನ ಪಾರ್ಕಿನ ಅರಮನೆಗೊಯ್ದು ಮುಟ್ಟಿಸು. ಎಲ್ಲಾ ವ್ಯವಸ್ಥೆ ಮಾಡು. ಹೊಸ ಆಜ್ಞೆಗಳನ್ನು ಬರೆದುಕೊಳ್ರಯ್ಯಾ <em>(</em><em>ರಾಜ</em><em> </em><em>ಒಳಕ್ಕೆ</em><em> </em><em>ಹೋಗುತ್ತಾನೆ</em><em>. </em><em>ನೇಪಥ್ಯದಿಂದ</em><em> </em><em>ಕಾರಭಾರಿ</em><em> </em><em>ಆಜ್ಞೆ</em><em> </em><em>ಓದುವ</em><em> </em><em>ದನಿ</em><em> </em><em>ಕೇಳಿಸುತ್ತದೆ</em><em>. </em><em>ಬಿಳಿ</em><em> </em><em>ಆನೆ</em><em> </em><em>ಚಿಲ್ಲರೆ</em><em> </em><em>ಬರೆದುಕೊಳ್ಳುತ್ತಾರೆ</em><em>)</em><em><br />
</em>ಕಾರಭಾರಿಯ ಧ್ವನಿ : ಅ) ಇನ್ನು ಮುಂದೆ ಡಿಂಗ್‌ಡಾಂಗ್ ಸಾಹೇಬರಿಗೆ ಯಾರೂ ಕತ್ತೆ ಅನ್ನಬಾರದು, ಅಥವಾ ಯಾರೂ ಡಿಂಗ್‌ಡಾಂಗ್ ಸಾಹೇಬರನ್ನು ಟೀಕಿಸಬಾರದು. ಹೊರಗಾಗಲೀ ಮನಸ್ಸಿನಲ್ಲಾಗಲಿ ಅವರಿಗೆ ಕತ್ತೆ ಅಂದವರಿಗೆ, ಟೀಕಿಸಿದವರಿಗೆ ಪೋಲಿಕಾನೂನು ಪ್ರಕಾರ ಆರು ತಿಂಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ರೂಪಾಯಿಗಳ ಜುಲ್ಮಾನೆ ವಿಧಿಸಲಾಗುವುದು. ಇನ್ನು ಮುಂದೆ ನಮಸ್ಕಾರ ಮಾಡುವಾಗ ರಾಂ, ರಾಂ ಅನ್ನೋದರ ಬದಲು ಎಲ್ಲರೂ ಡಿಂಗ್‌ಡಾಂಗ್ ಅನ್ನತಕ್ಕದ್ದು.<br />
ಆ) ಸನ್ಮಾನ್ಯ ಡಿಂಗ್‌ಡಾಂಗ್ ಸಾಹೇಬರು ಕ್ರಾಂತಿಕಾರಿಗಳನ್ನು ಓಡಿಸಿ ರಾಜರ ಪ್ರಣ ರಕ್ಷಣೆ ಮಾಡಿದ್ದನ್ನು ಪ್ರಜೆಗಳು ವಿಶೇಷವಾಗಿ ಜ್ಞಾಪಿಸಿಕೊಳ್ಳತಕ್ಕದ್ದು ಹಾಗೂ ಅದರ ಜ್ಞಾಪಕಾರ್ಥ ಹೊರಡಿಸಲಾಗುವ ಜಾಸ್ತಿ ಬೆಲೆಯ ಅಂಚೆ ಚೀಟಿಯನ್ನು ಪ್ರತಿಯೊಬ್ಬ ಪ್ರಜೆಯೂ ಭಕ್ತಿಯಿಂದ ಕೊಳ್ಳತಕ್ಕದ್ದು.<br />
ಇ) ಸನ್ಮಾನ್ಯ ಡಿಂಗ್‌ಡಾಂಗ್ ಸಾಹೇಬರ ಊಟಕ್ಕಾಗಿ ಆಸ್ಟ್ರೇಲಿಯಾದಿಂದ ಹುಲ್ಲನ್ನೂ, ಆಮೇರಿಕದಿಂದ ಹಿಂಡಿಯನ್ನೂ ಚೈನಾದಿಂದ ಬೂಸಾವನ್ನು ಇಂಗ್ಲಂಡಿನಿಂದ ರದ್ದೀ ಕಾಗದವನ್ನೂ ತರಿಸುವ ವಿಶೇಷ ಖರ್ಚಿಗಾಗಿ ‘ಬೂಸಾಟ್ಯಾಕ್ಸ್’ ಎಂಬ ಹೊಸ ತೆರಿಗೆಯನ್ನು ಹುಜೂರು ಖಜಾನೆಗೆ ಈ ದಿನದಿಂದಲೇ ಪ್ರಜೆಗಳು ಕಟ್ಟತಕ್ಕದ್ದು. ಓವರ್.</p>
<p>ಚಿಲ್ಲರೆ : ಸ್ವಾಮಿ ಶಿವಣ್ಣೋರೆ, ಆರ್ಡರಿನಲ್ಲಿ ಡಿಂಗ್‌ಡಾಂಗ್ ಸಾಹೇಬರ ರಾತ್ರಿ ವ್ಯವಸ್ಥೆ ಹ್ಯಾಗೆ ಅಂತ ಹೇಳಲಿಲ್ಲವಲ್ಲಾ? ಸಾಹೇಬರಿಗೆ ಮದುವೆ ಆಗಿದೆಯೆ?</p>
<p>ಶಿವ : ಇಲ್ಲ.</p>
<p>ಚಿಲ್ಲರೆ : ಸಾಹೇಬರಿಗೆ ಮದುವೆ ಆಗಿಲ್ಲ ಅಂದಮೇಲೆ ರಾತ್ರಿ ಹಡಗು ಮೀನು ಇತ್ಯಾದಿ ವ್ಯವಸ್ಥೆ ಬೇಡವಾ?</p>
<p>ಶಿವ : ಹಡಗು ಮೀನು ಅಂದರೆ?</p>
<p>ಚಿಲ್ಲರೆ : ನಮ್ಮ ಪಾರ್ಟಿ ಹತ್ತಿರ ಎರಡು ಬಿಳಿ ಹೆಚ್ಚುಕತ್ತೆ ಇವೆ. ಎರಡಕ್ಕೂ ಭರ್ತಿಪ್ರಾಯ, ಗನೋರಿಯಾ ಇತ್ಯಾದಿ ಏನೂ ಇಲ್ಲ. ಡಾಕ್ಟರ ಸರ್ಟಿಫಿಕೇಟ್ ಇದೆ. ನಿಮ್ಮದು ಇಷ್ಟು ಪರ್ಸೆಂಟೇಜ್ ಅಂತ ಗೊತ್ತಾದರೆ ಬಿಲ್ ಪಾಸ್ ಮಾಡಿಸ್ತೀನಿ. ಇಲ್ಲಾಂದರೆ ಎಳೆ ಪ್ರಾಯದ ಮರಿಕುದುರೆ ಇದೆ. ಕಂದುಬಣ್ಣದ್ದು. ಅಸಲಿ ವರ್ಜಿನ್, ಬೇಕಾದರೆ ಟೆಸ್ಟ್ ಮಾಡಿ ನೋಡಬಹುದು&#8230;. ಫಿಪ್ಟಿ ಫಿಪ್ಟಿ ಒಪ್ಪೋದಾದರೆ ಪಾರ್ಟೀನ್ನ ಕರಕೊಂಬರ್ತೀನಿ. ಸಾಯಂಕಾಲ ಮಂತ್ರಾಲಯ ಬಾರಿಗೆ ಬನ್ನಿ, ಕಾಯ್ತಾ ಇರತ್ತೀನಿ <em>(</em><em>ಹೋಗುವನು</em><em>)</em><em></em></p>
<p><em>ಬಿಳಿ ಆನೆ :</em> ಡಿಂಗ್‌ಡಾಂಗ್ ಶಿವಣ್ಣ.</p>
<p>ಶಿವ : ಡಿಂಗ್‌ಡಾಂಗ್ ಸ್ವಾಮಿ.</p>
<p>ಬಿಳಿ ಆನೆ : ಇನ್ನೇನಿಲ್ಲ ಡಿಂಗ್‌ಡಾಂಗ್ ಸಾಹೇಬರಿಗೆ ಕತ್ತೆ ಕುದುರೆ ಕೊಟ್ಟು ಅವಮಾನ ಪಡಿಸೋದು ಒಳ್ಳೇದಲ್ಲ ಅನ್ಸುತ್ತೆ. ಅವರೇನೋ ಮರ್ಯಾದೆ ಮೀರಬಾರದು ಅಂತ ನೀವು ಕೊಟ್ಟದ್ದನ್ನು ಏರಬಹುದು. ಆದರೆ ಯೋಚನೆ ಮಾಡಿ : ರಾಜ್ಯದ ಪ್ರಧಾನಿಗೆ ಕತ್ತೆ ಕುದುರೆ ಅಂದರೆ ರಾಜರ ಮರ್ಯಾದೆ ಏನು? ನಮ್ಮ ಮರಿಯಾದೆ ಏನು? ನೀವು ಮನಸ್ಸು ಮಾಡೋದಾದರೆ ಹುಡಿಗೇರು ರೆಡಿ ಇದ್ದಾರೆ. ಕರೆಸಲಾ? ಯಾವುದಕ್ಕೂ ಸಂಜೆ ಬಾಲಾಜಿ ಕ್ಲಬ್ ಗೆ ಬನ್ನಿ <em>(</em><em>ಹೋಗುವನು</em><em>)</em><em></em></p>
]]></content:encoded>
			<wfw:commentRss>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%ab/feed/</wfw:commentRss>
		<slash:comments>0</slash:comments>
		</item>
		<item>
		<title>ಸಾಂಬಶಿವ ಪ್ರಹಸನ : ದೃಶ್ಯ-೧೨</title>
		<link>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%a7%e0%b3%a8/</link>
		<comments>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%a7%e0%b3%a8/#comments</comments>
		<pubDate>Fri, 22 Mar 2013 00:36:39 +0000</pubDate>
		<dc:creator>kanaja</dc:creator>
				<category><![CDATA[ಕನ್ನಡ]]></category>
		<category><![CDATA[ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ]]></category>
		<category><![CDATA[ಡಾ. ಚಂದ್ರಶೇಖರ ಕಂಬಾರ]]></category>

		<guid isPermaLink="false">http://kanaja.in/?p=78472</guid>
		<description><![CDATA[(ಶಿವ ಮತ್ತು ಗಜನಿಂಬೆ) ಶಿವ : ನನ್ನ ಮಾತು ಕೇಳು. ಗಜನಿಂಬೆ : ಕೇಳಲ್ಲ. ಶಿವ : ಏನಂತ ತಿಳದೀ ನನ್ನ? ನಾನು ನಿನ್ನ ಗಂಡ. ಗಜನಿಂಬೆ : ಕಾಯ್ದೆಶೀರ‍ ನನ್ನ ಗಂಡ ಕತ್ತೆ, ನೀನಲ್ಲ. ಶಿವ : ಹಾಗಿದ್ದರೆ ನಾನು ಯಾರು? ಗಜನಿಂಬೆ : ಶಿವ. ಶಿವ : ಹಟಹಿಡೀಬೇಡ. ನನ್ನ ದಕಡೆ ಒಂದು ಸಲ ನೋಡು. ಗಜನಿಂಬೆ : ಎರಡು ಸಲಾನೂ ನೋಡೋದಿಲ್ಲ. ಶಿವ : ದಯಮಾಡಿ ನನ್ನ ಮಾತು ಕೇಳು. ಗಜನಿಂಬೆ : [...]]]></description>
			<content:encoded><![CDATA[<p><em>(</em><em>ಶಿವ</em><em> </em><em>ಮತ್ತು</em><em> </em><em>ಗಜನಿಂಬೆ</em><em>)</em><em></em></p>
<p><em>ಶಿವ :</em> ನನ್ನ ಮಾತು ಕೇಳು.<span id="more-78472"></span></p>
<p>ಗಜನಿಂಬೆ : ಕೇಳಲ್ಲ.</p>
<p>ಶಿವ : ಏನಂತ ತಿಳದೀ ನನ್ನ? ನಾನು ನಿನ್ನ ಗಂಡ.</p>
<p>ಗಜನಿಂಬೆ : ಕಾಯ್ದೆಶೀರ‍ ನನ್ನ ಗಂಡ ಕತ್ತೆ, ನೀನಲ್ಲ.</p>
<p>ಶಿವ : ಹಾಗಿದ್ದರೆ ನಾನು ಯಾರು?</p>
<p>ಗಜನಿಂಬೆ : ಶಿವ.</p>
<p>ಶಿವ : ಹಟಹಿಡೀಬೇಡ. ನನ್ನ ದಕಡೆ ಒಂದು ಸಲ ನೋಡು.</p>
<p>ಗಜನಿಂಬೆ : ಎರಡು ಸಲಾನೂ ನೋಡೋದಿಲ್ಲ.</p>
<p>ಶಿವ : ದಯಮಾಡಿ ನನ್ನ ಮಾತು ಕೇಳು.</p>
<p>ಗಜನಿಂಬೆ : ದಯಮಾಡಿ ಕೇಳೋದಿಲ್ಲ.</p>
<p>ಶಿವ : ಸರಿ, ಇಲ್ಲೇ ಬಿದ್ಕೋ.</p>
<p>ಗಜನಿಂಬೆ : ಬಿದ್ದೊಳ್ಳೋದಿಲ್ಲ.</p>
<p>ಶಿವ : ಹಾಗಿದ್ದರೆ ಹೋಗು.</p>
<p>ಗಜನಿಂಬೆ : ಹೋಗನ್ನೋದಕ್ಕೆ ನೀ ಯಾರು? ನನ್ನಿಷ್ಟ ಬಂದಾಗ ಹೋಗ್ತೀನಿ.</p>
<p>ಶಿವ : ಕೊನೇ ಪಕ್ಷ ನನ್ನ ಮಾತು ಕೇಳು.</p>
<p>ಗಜನಿಂಬೆ : ಕೇಳು ಅನ್ನೋಕೆ ನೀ ಯಾರು? ನನ್ನಿಷ್ಟ ಬಂದರೆ ಕೇಳ್ತೀನಿ.</p>
<p>ಶಿವ : ಹಾಗಿದ್ದರೆ ನಾ ಹೇಳೋದಿಲ್ಲ.</p>
<p>ಗಜನಿಂಬೆ : ಯಾಕೆ ಹೇಳೋದಿಲ್ಲ? ದಯಮಾಡಿ ಹೇಳತಾ ಇರು.</p>
<p>ಶಿವ : ಇಷ್ಟ ಬರೋದವರೆದುರಿಗೆ ಯಾಕೆ ಹೇಳಬೇಕು.</p>
<p>ಗಜನಿಂಬೆ : ಇಷ್ಟ ಬಂದೇ ಬರತ್ತೆ, ನೀ ಹೇಳಿದರೆ.</p>
<p>ಶಿವ : ಮೊದಲು ಇಷ್ಟ ಬಂದರೇ ಹೇಳೋದು.</p>
<p>ಗಜನಿಂಬೆ : ಬಂದಿದೆ, ಅದೇನು ಹೇಳಿ ಅಂದ್ರೆ.</p>
<p>ಶಿವ : ಒಳಕ್ಕೆ ಹೋಗಿ ಭದ್ರಾವಾಗಿ ಬಾಗಿಲಿಕ್ಕಿಕೊಂಡು ಕೂತ್ಕೊ.</p>
<p>ಗಜನಿಂಬೆ : ಹೊರಗಡೆ ಇಲ್ಲೇ ಹೀಗೇ ಕೂತರೆ ಏನಾಗತ್ತೆ?<br />
<em>(</em><em>ಅಷ್ಟರಲ್ಲಿ</em><em> </em><em>ದೂರದಿಂದ</em><em> </em><em>ಯಾರೋ</em><em> </em><em>ಓಡಿ</em><em> </em><em>ಬಂದು</em><em> </em><em>ಅಡಗುತ್ತಾರೆ</em><em>. </em><em>ಶಿವ</em><em> </em><em>ಅವನನ್ನು</em><em> </em><em>ಸರಿಯಾಗಿ</em><em> </em><em>ಮುಚ್ಚಿ</em><em> </em><em>ಬರುವನು</em><em>.)</em><em></em></p>
<p><em>ಗಜನಿಂಬೆ :</em> ನನಗೆ ನಿಜವಾಗಲೂ ಹೆದರಿಕೆ ಬರತ್ತೇರಿ.</p>
<p>ಶಿವ : ಮತ್ತೆ ಯಾಕೆ ತೌರಿಗೆ ಹೋಗಲಿಲ್ಲ?</p>
<p>ಗಜನಿಂಬೆ : ಹೋದರೆ ಕತ್ತೆ ಹೆಂಡತಿ ಬಂದಳು ಅಂತ ಅಕ್ಕಪಕ್ಕ ಮಕ್ಕಳು ನನ್ನ ಕಂಡು ಕುಣಿದಾಡುತ್ವೇರಿ.</p>
<p>ಶಿವ : ಈಗ ಸದ್ದಿಲ್ಲದೆ ಒಳಕ್ಕೆ ಹೋಗಿ ಬಾಗಿಲು ಹಾಕಿಕೊಂಡಿರು. ನನ್ನ ಧ್ವನಿ ಕೇಳೋತನಕ ಬಾಗಿಲು ತೆಗೀಬೇಡ.<br />
<em>(</em><em>ಗಜನಿಂಬೆ</em><em> </em><em>ಹೋಗುವಳು</em><em>. </em><em>ಪೋಲೀಸು</em><em> </em><em>ಬಂದು</em><em> &#8220;</em><em>ಮಾಜಿ</em><em> </em><em>ಮಂತ್ರಿ</em><em> </em><em>ಬಂದಿದ್ದನಾ</em><em> </em><em>ಈ</em><em> </em><em>ಕಡೆಗೆ</em><em>?&#8221; </em><em>ಎಂದು</em><em> </em><em>ಕೆಳುವನು</em><em>. </em><em>ಶಿವ</em><em> </em><em>ಇಲ್ಲವೆಂದು</em><em> </em><em>ಹೇಳುತ್ತಲೂ</em><em> </em><em>ಪೋಲೀಸರು</em><em> </em><em>ಹೋಗುತ್ತಾರೆ</em><em>. </em><em>ಪೋಲೀಸರು</em><em> </em><em>ದೂರ</em><em> </em><em>ಹೋದರೆಂದು</em><em> </em><em>ಖಾತ್ರಿಯಾದಾಗ</em><em> </em><em>ಆ</em><em> </em><em>ವ್ಯಕ್ತಿ</em><em> </em><em>ಎದ್ದು</em><em> </em><em>ಹೊರಗೆ</em><em> </em><em>ಬರುವನು</em><em>)</em><em></em></p>
<p><em>ಮಂತ್ರಿ :</em> ತುಂಬಾ ಉಪಕಾರವಾಯ್ತಪ್ಪ.</p>
<p>ಶಿವ : ನೀವು ಇಲ್ಲಿರೋದು ಅಪಾಯ ಸಾರ್.</p>
<p>ಮಂತ್ರಿ : ನನಗೂ ಗೊತ್ತು.</p>
<p>ಶಿವ : ಮಾಜಿ ಮಂತ್ರಿ ನೀವೇನಾ?</p>
<p>ಮಂತ್ರಿ : ಗೊತ್ತಾದರೆ ರಕ್ಷಣೆ ಮಾಡಿದ್ದಕ್ಕೆ ಪಶ್ಚಾತ್ತಾಪ ಪಡುತ್ತೀಯಾ?</p>
<p>ಶಿವ : ಖಂಡಿತ ಇಲ್ಲ.</p>
<p>ಮಂತ್ರಿ : ಹೌದು ನಾನೇ ಮಾಜಿ ಮಂತ್ರಿ.</p>
<p>ಶಿವ : ನಿಮ್ಮನ್ನು ನೀವೇ ಈ ರೀತಿ ಅಪಾಯಕ್ಕೆ ಒಡ್ಡಿಕೊಳ್ಳೋದು ಒಳ್ಳೆಯದಲ್ಲ, ಇಲ್ಲಿಗ್ಯಾಕೆ ಬಂದಿರಿ ಸಾರ?</p>
<p>ಮಂತ್ರಿ : ನಿನ್ನನ್ನೇ ನೋಡೋಣಾಂತ ಬಂದ್ನಪ್ಪ.</p>
<p>ಶಿವ : ಹೇಳಿ ಸಾರ‍, ನಾನೇನು ಮಾಡಬಲ್ಲೆ?</p>
<p>ಮಂತ್ರಿ : ನಮ್ಮ ಕ್ರಾಂತಿಯೆಲ್ಲ ಹುಸಿಹೋಯ್ತು. ಈ ರಾಕ್ಷಸನ ಕೈಯಿಂದ ನಮಗಂತೂ ಮುಕ್ತಿ ಇಲ್ಲ. ನಿನ್ನ ಕತ್ತೆಗೆ ಬೈತೀನಿ ಅಂದ್ಕೋಬೇಡ. ನಿನ್ನ ಕತ್ತೆ ಮಂತ್ರಿ ಆಗಬೇಕಾದ್ದೆ. ಯಾಕಂದರೆ ಇಂಥ ರಾಜ ಇರೋವಲ್ಲಿ ಇನ್ನೆಂಥ ಮಂತ್ರಿ ಸಾಧ್ಯ? ಆದರೆ ಪಾಪ ಆ ಮೂಕಪ್ರಾಣಿ ಹೆಸರಲ್ಲಿ ಎಷ್ಟೊಂದು ತೆರಿಗೆ ಹಾಕಿದ್ದಾನೆ ಆ ರಾಕ್ಷಸ? ಜನ ಹ್ಯಾಗೆ ಬದುಕೋದು?</p>
<p>ಶಿವ : ಯಥಾ ಪ್ರಜಾ ತಥಾ ರಾಜ ಅಲ್ವೇ ಸಾರ?</p>
<p>ಮಂತ್ರಿ : ಅದೂ ನಿಜವೇ. ಹೋಗಲಿ ಬಿಡು, ಆಗೋ ಮಾತಲ್ಲ, ಹೋಗೋ ಮಾತಲ್ಲ. ಅದೆಲ್ಲಾ ಯಾಕೆ? ಕ್ರಾಂತಿಕಾರರು ಮೊದಲಿನಷ್ಟಿಲ್ಲ. ಕೆಲವರು ಜೇಲಲ್ಲಿ, ಕೆಲವರು ಸ್ವರ್ಗದಲ್ಲಿ ಇದ್ದಾರೆ. ಒಬ್ಬಿಬ್ಬರು ಉಳಿದಿದ್ದೀವಿ. ಇಂದಲ್ಲ ನಾಳೆ ನಮ್ಮನ್ನೂ ಮುಗಿಸ್ತಾನೆ. ಮುಗಿಸೋದೇ ಮೇಲು. ಜೊತೆಗಾರರೆಲ್ಲ ಹೋದಮೇಲೆ ನಾನೊಬ್ಬನೇ ಜೀವಂತವಾಗಿರೋಕೆ ನಾಚಿಕೆಯಾಗುತ್ತೆ. ನಿನ್ನ ಹತ್ತಿರ ಒಂದು ಸಣ್ಣ ಸಹಾಯ ಕೇಳೋದಕ್ಕೆ ಬಂದಿದ್ದನಪ್ಪ.</p>
<p>ಶಿವ : ಹೇಳಿ ಸಾರ‍ ಏನ್ ಮಾಡಲಿ?</p>
<p>ಮಂತ್ರಿ : ನನ್ನ ಧೋಬಿ ಸ್ನೇಹಿತ ಒಬ್ಬ ಇದಾನೆ. ಮಕ್ಕಳೊಂದಿಗ, ಇಲ್ಲೀತನಕ ಕ್ರಂತಿ ಮಾಡಿ ಮಾಡಿ ಎಲ್ಲಾ ಕಳಕೋಂಡು ಪಾಪರ ಆಗಿದಾನೆ. ಅವನಿಗೇನಾದರೂ ಸಹಾಯ ಮಾಡು, ನಿನ್ನ ಕೈಲಿ ಸಾಧ್ಯವಿದ್ದರೆ.</p>
<p>ಶಿವ : ಏನ್ ಮಾಡಲಿ ಹೇಳಿ ಸಾರ?</p>
<p>ಮಂತ್ರಿ : ಅವನ ಹತ್ತಿರ ಒಂದು ಹೆಣ್ಣು ಕತ್ತೆ ಇದೆ. ರಾಧಾ ಅಂತ ಅದರ ಹೆಸರು. ಚೆನ್ನಾಗಿ ಮೈ ತುಂಬಿಕೊಂಡಿದೆ. ನಿನ್ನ ಡಿಂಗ್‌ಡಾಂಗ್ ಗೆ ದಿನಾಲು ಹೆಣ್ಣು ಕತ್ತೆ ಬೇಕಂತಲ್ಲ. ಅವನ ಕತ್ತೆ ಉಪಯೋಗಿಸಿ ಒಳ್ಳೆ ರೇಟು ಕೊಡು. ಬಡವಾ ಬದುಕಿಕೊಳ್ತಾನೆ.</p>
<p>ಶಿವ : ಈ ಕಡೆ ಬನ್ನಿ ಸಾರ ಯಾರೋ ಬಂದರು.<br />
<em>(</em><em>ಮಂತ್ರಿ</em><em> </em><em>ಅಡಗುವನು</em><em>. </em><em>ಸಾಂಬ</em><em> </em><em>ಓಡಿ</em><em> </em><em>ಬರುವನು</em><em>)</em><em></em></p>
<p><em>ಸಾಂಬ :</em> ಎಷ್ಟು ಹುಡುಕೋದೋ ಮಗನೆ ನಿನ್ನ?</p>
<p>ಶಿವ : ಯಾಕಪ್ಪ?</p>
<p>ಸಾಂಬ : ಗುಟ್ಟಾಗಿ ಮಾತಾಡಬೇಕು. ಇಲ್ಲಿ ಯಾರಿಲ್ಲ ತಾನೆ?</p>
<p>ಶಿವ : ಇಲ್ಲ ಹೇಳು.</p>
<p>ಸಾಂಬ : ರಾಜ ಇವೊತ್ತೇನೊ ಉಪಾಯ ಮಾಡ್ತಿದಾನೆ ಕಣೊ.</p>
<p>ಶಿವ : <em>(</em><em>ಅಡಿಗಿದ್ದ</em><em> </em><em>ಮಂತ್ರಿಯನ್ನು</em><em> </em><em>ಕೈಯಿಂದ</em><em> </em><em>ಸೂಚಿಸಿ</em><em> </em><em>ಕಿವಿಯಲ್ಲಿ</em><em> </em><em>ಹೇಳಲಿಕ್ಕೆ</em><em> </em><em>ಸೂಚಿಸುವನು</em><em>)</em><em></em></p>
<p><em>ಸಾಂಬ :</em> ಏನಪ್ಪ ಅಂದರೆ <em>(</em><em>ಕಿವಿಯಲ್ಲಿ</em><em> </em><em>ಹೆಳುವನು</em><em>)</em><em></em></p>
<p><em>ಶಿವ :</em> ಅದ್ಯಾಕಂತೆ?<br />
<em>(</em><em>ಸಾಂಬ</em><em> </em><em>ಕಿವಿಯಲ್ಲಿ</em><em> </em><em>ಹೇಳುವನು</em><em>)</em><em></em></p>
<p><em>ಶಿವ :</em> ಯಾವಾಗಂತೆಯೋ<br />
<em>(</em><em>ಸಾಂಬ</em><em> </em><em>ಕಿವಿಯಲ್ಲಿ</em><em> </em><em>ಹೇಳುವನು</em><em>)</em><em></em></p>
<p><em>ಶಿವ :</em> ಎಷ್ಟೊತ್ತಿಗಂತೆ?</p>
<p>ಶಿವ : ಓಹೋ, ಇಲ್ಲಿಗೆ ಬಂತೋ? ಸ್ವಾಮಿ ಹೊರಗೆ ಬನ್ನಿ. ಇವೊತ್ತು ರಾತ್ರಿ ರಾಧೆಯನ್ನು ಕರಕೊಂಬರಲಿಕ್ಕೆ ನಿಮ್ಮ ಸ್ನೇಹಿತರಿಗೆ ಹೇಳಿ. ಸಾಧ್ಯವಾದರೆ, ಅಳಿದುಳಿದ ಕ್ರಾಂತಿಕಾರಿಗಳೂ ಜೊತೆಗಿರಲ್ಲಿ.</p>
<p>ಮಂತ್ರಿ : ಕ್ರಾಂತಿಕಾರಿಗಳು ಯಾರು ಉಳಿದಿಲ್ಲಪ್ಪ. ಉಳಿದ ಒಬ್ಬಿಬ್ಬರು ನನ್ನ ಮಾತು ಅರ್ಥವಾಗೋದಿಲ್ಲಾಂತ ನನ್ನ ಹತ್ತಿರ ಬರೋದೂ ಇಲ್ಲ.</p>
<p>ಸಾಂಬ : ಬೀರಯ್ಯ ಅಂತ ನಿಮ್ಮ ಶಿಷ್ಯ ಇದ್ದಾನಲ್ಲಾ.</p>
<p>ಮಂತ್ರಿ : ಅವನು ಸೋಮಾರಿ.</p>
<p>ಸಾಂಬ : ಅವನಿಗೆ ಹೇಳಿ: ಬೀರಯ್ಯ ಕೆರೆಕಟ್ಟೆ ಒಡೆಯೋದಕ್ಕೆ ಗುದ್ದಲಿ ಪಿಕಾಸಿ ತಗೊಂಬಾ ಅನ್ನಿ. ಬರತಾನೆ.</p>
<p>ಮಂತ್ರಿ : ಕೆರೆ ಕಟ್ಟೆ ಅಂದರೆ&#8230;.?</p>
<p>ಸಾಂಬ : ನೀವು ಅಷ್ಟು ಹೇಳಿ ಸ್ವಾಮಿ&#8230;.</p>
<p>ಮಂತ್ರಿ : ಸರಿಯಪ್ಪ.</p>
]]></content:encoded>
			<wfw:commentRss>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%a7%e0%b3%a8/feed/</wfw:commentRss>
		<slash:comments>0</slash:comments>
		</item>
		<item>
		<title>ಸಾಂಬಶಿವ ಪ್ರಹಸನ : ದೃಶ್ಯ-೭</title>
		<link>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%ad/</link>
		<comments>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%ad/#comments</comments>
		<pubDate>Fri, 22 Mar 2013 00:36:38 +0000</pubDate>
		<dc:creator>kanaja</dc:creator>
				<category><![CDATA[ಕನ್ನಡ]]></category>
		<category><![CDATA[ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ]]></category>
		<category><![CDATA[ಡಾ. ಚಂದ್ರಶೇಖರ ಕಂಬಾರ]]></category>

		<guid isPermaLink="false">http://kanaja.in/?p=78462</guid>
		<description><![CDATA[(ರಾಜ ಮತ್ತು ಕಾರುಭಾರಿ, ಅರಮನೆ.) ರಾಜ : ಯಾಕೊ, ಮಗನೇ ತುಂಬಾ ಸಂತೋಷವಾಗಿದ್ದೀಯಾ? ಕಾರಭಾರಿ : ಅಳೋದಕ್ಕೇನೂ ಕಾರಣ ಎಲ್ಲಾ ಪ್ರಭು. ರಾಜ : ಎಷ್ಟು ಕಾರಣ ಬೇಕು ನಿನಗೆ? ನೂರು? ಸಾವಿರ? ಕಾರಭಾರಿ : ಎರಡು ಹೇಳಿ ಪ್ರಭು, ಸಾಕು. ರಾಜ : ಬಾಯ್ಮುಚ್ಚು, ನಿನ್ನಂಥ ಅಯೋಗ್ಯನಿಂದಲೇ ಹೀಗೆಲ್ಲ ಆದದ್ದು. ಕಾರಭಾರಿ : ಆದರೆ ಪ್ರಭು&#8230;. ರಾಜ : ಬಾಯ್&#8230;. (ಕಾರಬಾರಿ ಕೈಯಿಂದ ಬಾಯಿ ಮುಚ್ಚಿಕೊಳ್ಳವನು) ರಾಜ : ನನಗೆ ಸಿಟ್ಟು ಬರುತ್ತೋ ಇಲ್ವೋ ಹೇಳು. [...]]]></description>
			<content:encoded><![CDATA[<p><em>(</em><em>ರಾಜ</em><em> </em><em>ಮತ್ತು</em><em> </em><em>ಕಾರುಭಾರಿ</em><em>, </em><em>ಅರಮನೆ</em><em>.)</em><em></em></p>
<p><em>ರಾಜ :</em> ಯಾಕೊ, ಮಗನೇ ತುಂಬಾ ಸಂತೋಷವಾಗಿದ್ದೀಯಾ?<span id="more-78462"></span></p>
<p>ಕಾರಭಾರಿ : ಅಳೋದಕ್ಕೇನೂ ಕಾರಣ ಎಲ್ಲಾ ಪ್ರಭು.</p>
<p>ರಾಜ : ಎಷ್ಟು ಕಾರಣ ಬೇಕು ನಿನಗೆ? ನೂರು? ಸಾವಿರ?</p>
<p>ಕಾರಭಾರಿ : ಎರಡು ಹೇಳಿ ಪ್ರಭು, ಸಾಕು.</p>
<p>ರಾಜ : ಬಾಯ್ಮುಚ್ಚು, ನಿನ್ನಂಥ ಅಯೋಗ್ಯನಿಂದಲೇ ಹೀಗೆಲ್ಲ ಆದದ್ದು.</p>
<p>ಕಾರಭಾರಿ : ಆದರೆ ಪ್ರಭು&#8230;.</p>
<p>ರಾಜ : ಬಾಯ್&#8230;.<br />
<em>(</em><em>ಕಾರಬಾರಿ</em><em> </em><em>ಕೈಯಿಂದ</em><em> </em><em>ಬಾಯಿ</em><em> </em><em>ಮುಚ್ಚಿಕೊಳ್ಳವನು</em><em>)</em><em></em></p>
<p><em>ರಾಜ :</em> ನನಗೆ ಸಿಟ್ಟು ಬರುತ್ತೋ ಇಲ್ವೋ ಹೇಳು.</p>
<p>ಕಾರಭಾರಿ : ಬಾಯ್ಮುಚ್ಚು ಅಂದಿರಲ್ಲ ಪ್ರಭು.</p>
<p>ರಾಜ : ಪರವಾಗಿಲ್ಲ, ಮುಚ್ಕೊಂಡೇ ಹೇಲು</p>
<p>ಕಾರಭಾರಿ : ಏನು ಹೇಳಲಿ ಪ್ರಭು?</p>
<p>ರಾಜ : ನನಗೆ ಸಿಟ್ಟು ಬರುತ್ತೋ ಇಲ್ವೋ.</p>
<p>ಕಾರಭಾರಿ : ಬಂದಿದೆಯಲ್ಲಾ ಪ್ರಭು.</p>
<p>ರಾಜ : ಬರಬೇಕಾದ್ದೇ ಅನ್ನು.</p>
<p>ಕಾರಭಾರಿ : ಬರಬೇಕಾದ್ದೆ</p>
<p>ರಾಜ : ಎಷ್ಟು ಕಡೆ ಕೋಪ ಬಂದಿದೆ ಗೊತ್ತಾ?</p>
<p>ಕಾರಭಾರಿ : ಗೊತ್ತಿಲ್ಲ ಪ್ರಭು</p>
<p>ರಾಜ : ಎರಡು ಕಡೆ. ಹ್ಯಾಗೆ? ಯಾಕೆ? ಅನ್ನು.</p>
<p>ಕಾರಭಾರಿ : ಹ್ಯಾಗೆ? ಯಾಕೆ?</p>
<p>ರಾಜ : ಆ ಕತ್ತೆ ಡಿಂಗ್‌ಡಾಂಗು ನನ್ನ ಪ್ರಾಣ ಉಳಿಸಿತು ಅಂತ ಮಂತ್ರೀ ಮಾಡಿದರೆ ರಾಜ್ಯದ ತುಂಬಾ ಏನಯ್ಯಾ ಅವನ ಖ್ಯಾತಿ! ಯಾರು ಬಾಯೊಳಗೆಲ್ಲ ಕತ್ತೆ ಹೆಸರೆ; ಅದರದ್ದೆ ಹಾಡು; ಅದರದ್ದೇ ಕೀರ್ತನೆ; ಒಬ್ಬರಿಗಾದರೂ ನಾನು ರಾಜ, ನನ್ನ ಹೆಸರು ಕಾಲ್ಮಡಿ ಮಹಾರಾಜ ಅಂತ ನೆನಪಿದೆಯಾ? ನನ್ನ ತಲೆಗೆ ಕೋಪ ಬರುತ್ತೋ ಇಲ್ವೋ?</p>
<p>ಕಾರಭಾರಿ : ಬರಬೇಕಾದ್ದೆ, ಬರಬೇಕಾದ್ದೆ. ಇನ್ನೆಲ್ಲಿ ಕೋಪ ಬಂತು ಪ್ರಭು?</p>
<p>ರಾಜ : ಇನ್ನೆಲ್ಲಿ ಕೋಪ ಬಂತು ಅಮತೀಯಾ ಮಗನೇ? ಆ ಹುಡಿಗೀನ್ನ ಕರಕೊಂಬರತ್ತೀನಿ ಅಂದೆ. ಕರಕೊಂಬಂದೆಯಾ? ಎಷ್ಟು ದಿನ ಕಾಯೋದು? ನನ್ನ ಸೊಂಟಕ್ಕೆ ಕೋಪ ಬರುತ್ತೋ ಇಲ್ವೊ ಹೇಳು?</p>
<p>ಕಾರಭಾರಿ : ಬರಬೇಕಾದ್ದೇ ಪ್ರಭು. ಉದಾರರಾದ ತಾವು ಈ ದಿನವೂ ನನಗೆ ತಮ್ಮ ಕಿವಿಗಳನ್ನು ದಾನ ಮಾಡಿದರೆ ತಮ್ಮ ಎರಡೂ ಕಡೆಯ ಕೋಪಗಳನ್ನು ಆಯಾಯಾ ಸ್ಥಳದಲ್ಲೇ ಶಾಂತ ಮಾಡಬಲ್ಲೆ.</p>
<p>ರಾಜ : ಅದೇನು ಬೊಗಳು.</p>
<p>ಕಾರಭಾರಿ : ಪ್ರಭು ನಿಮ್ಮ ಮಂತ್ರಿ ಡಿಂಗ್‌ಡಾಂಗ್ ಸಾಹೇಬರು ಈಗ ಮೀನುಗುತಾರೆ! ಬುದ್ಧಿವಂತರ ತಲೆಯಲ್ಲಿ, ಹುಡುಗಿಯರ ಹೃದಯದಲ್ಲಿ, ಮುದಿಯರ ಕಣ್ಣಲ್ಲಿ, ನಮ್ಮ ರಾಜ್ಯದ ಆಕಾಶದಲ್ಲಿ ಮಿನುಗುತಾರೆ.</p>
<p>ರಾಜ : ಹೌದು.</p>
<p>ಕಾರಭಾರಿ : ಪ್ರಭು ಈಗ ಮಿನುಗುತಾರೆಯರೆಲ್ಲ ಯಾವಾಗ ಇದ್ದಿಲಾಗುತ್ತಾರೆ?</p>
<p>ರಾಜ : ಯಾವಾಗ?</p>
<p>ಕಾರಭಾರಿ : ಮಧುವೆ ಆದಾಗ! ಡಿಂಗ್‌ಡಾಂಗ್ ಸಾಹೇಬರಿಗೆ ಒಂದು ಮದುವೆ ಮಾಡಿ.</p>
<p>ರಾಜ : ಭಲೇ! ಕಾರಭಾರೀ, ನೀನೂ ಬುದ್ಧಿಜೀವಿ ಆಗಿಬಿಟ್ಟೆಯಲ್ಲೋ ನನ್ನ ದಯದಿಂದ! ಎಲಾ ಯಾರಲ್ಲಿ?</p>
<p>ಚಾರ : <em>(</em><em>ಪ್ರವೇಶಿಸಿ</em><em>) </em>ಏನಪ್ಪಣೆ ಪ್ರಭೂ?</p>
<p>ರಾಜ : ಬೀಳಿ ಆನೇನ್ನ ಕರಿ.</p>
<p>ಚಾರ : ಅಪ್ಪಣೆ <em>(</em><em>ಹೋಗುವನು</em><em>)</em><em></em></p>
<p><em>ರಾಜ :</em> ಕಾರಭಾರೀ, ಆ ಡಿಂಗ್‌ಡಾಂಗ್ ಕತ್ತೆಗೆ ಒಂದು ಒಳ್ಳೇ ಮದುವೇನೇ ಮಾಡೋಣ. ಆದರೆ ಕತ್ತೆ ಜೊತೆ ಬೇಡ. ಮುದ್ದಾಗಿರೋ ಹುಡಿಗೀ ಜೊತೆಗೇ ಮಾಡೋಣ. ಡಿಂಗ್‌ಡಾಂಗ್ ಹೆಂಗೂ ಕತ್ತೆ! ಮದುವೆ ಮಾಡಿದರೆ ಅದರ ಹೆಂಡತಿ ಕೊನೆಗೂ ಒರೋದು ನಮ್ಮ ಹತ್ತಿರಾನೇ; ಹ್ಯಾಗಿದೆ ಐಡಿಯಾ?</p>
<p>ಕಾರಭಾರಿ : ಅದ್ಭುತ ಪ್ರಭೂ!</p>
<p>ಬಿಳಿ ಆನೆ : <em>(</em><em>ಒಂದು</em><em> </em><em>ನಮಸ್ಕರಿಸಿ</em><em>) </em>ಪ್ರಭೂ ಕರೆಸಿದಿರಂತೆ.</p>
<p>ರಾಜ : ಅಯ್ಯಾ ಬಿಳಿ ಆನೆ, ನಮ್ಮ ಮಂತ್ರಿ ಡಿಂಗ್‌ಡಾಂಗನಿಗೆ ಸ್ವಯಂವರದ ಏರ್ಪಾಡು ಮಾಡು. ಇಷ್ಟವಿದ್ದವರೆಲ್ಲಾ ತಂತಮ್ಮ ಹುಡಿಗೇರನ್ನ ಕರಕೊಂಬಂದು ಸ್ವಯಂವರ ದಲ್ಲಿ ಭಾಗವಹಿಸಬಹುದು. ಆಯ್ಕೆ ಮಾತ್ರ ಡಿಂಗ್‌ಡಾಂಗನದೇ. ತಿಳಿಯಿತೊ?</p>
<p>ಬಿಳಿ ಆನೆ : ತಿಳಿಯಿತು. ಆದರೆ ಇದು ಸ್ವಯಂವರ ಅಲ್ಲ; ಡಿಂಗ್‌ಡಾಂಗ್ ಸಾಹೇಬರು ತಮ್ಮ ವಧುವನ್ನು ತಾವೇ ಆಯ್ದುಕೊಳ್ಳೋದರಿಂದ ಇದು ಸ್ವಯಂವಧು ಸಮಾರಂಭ ಪ್ರಭೂ.</p>
<p>ರಾಜ : ಸರಿ. ಈಗಲೇ ರಾಜ್ಯಾದ್ಯಾಂತ ಡಂಗುರ ಸಾರಿ ಕೂಡಲೇ ಸ್ವಯಂವಧು ಸಮಾರಂಭ ಏರ್ಪಡಿಸು.</p>
<p>ಬಿಳಿ ಆನೆ : ಆಗಲಿ ಪ್ರಭು <em>(</em><em>ಹೋಗುವನು</em><em>)</em><em></em></p>
<p><em>ರಾಜ :</em> ಆಯ್ತಯ್ಯಾ, ಕಾರಭಾರಿ, ಡಿಂಗ್‌ಡಾಂಗ್ ನ ವಿಚಾರ ಇಲ್ಲಿಗೆ ಸಮಾಪ್ತಿ ಆಯ್ತು. ತಲೆಕೋಪ ಉಪಶಮನವಾಯ್ತು. ಈಗ ಸೊಂಟದ ಕೋಪಕ್ಕೆ ಏನು ಹೇಳುತ್ತೀ- ಅದರೆ  ಕೋಪವೇ  ಜಾಸ್ತಿ.</p>
<p>ಕಾರಭಾರಿ : ಆ ಭಾಗದ ಕೋಪದ ಬಗ್ಗೆ ಹೇಳೋದಾದರೆ, ಪ್ರಭು-ಅದೂ ವಿನಾಕರಣ</p>
<p>ರಾಜ : ಅಂದರೆ?</p>
<p>ಕಾರಭಾರಿ : ತಾವು ಹೇಳಿದ ಹುಡುಗಿಯನ್ನು ನಾನಾಗಲೇ ನೋಡಿ ಬಂದಿದ್ದೇನೆ.</p>
<p>ರಾಜ : <em>(</em><em>ಉತ್ಸಾಹದಿಂದ</em><em>) </em>ಪ್ರತ್ಯಕ್ಷ ಕಂಡೆಯಾ?</p>
<p>ಕಾರಭಾರಿ : ಪ್ರತ್ಯಕ್ಷ ಕಣ್ಣಾರೆ ಕಂಡೆ ಪ್ರಭು.</p>
<p>ರಾಜ : ನೋಡೋಕೆ ಹ್ಯಾಗಿದಾಳೆ?</p>
<p>ಕಾರಭಾರಿ : ಅಯ್ಯೋ ಅದೇನು ಕೇಳುತ್ತೀರ&#8230;. ಗೊಂಬೆ ಗೊಂಬೆ!</p>
<p>ರಾಜ : ಪರಮ ಸುಂದರಿ ಅಲ್ವಾ?</p>
<p>ಕಾರಭಾರಿ : ತ್ರಿಲೋಕ ಸುಂದರಿ ಅಂದ್ರೆ!</p>
<p>ರಾಜ : ಸ್ವಭಾವ ಹ್ಯಾಗೆ?</p>
<p>ಕಾರಭಾರಿ : ತುಂಬಾ ಮೃದು.</p>
<p>ರಾಜ : ನಡವಳಿಕೆ?</p>
<p>ಕಾರಭಾರಿ : ಅದಿನ್ನೂ ಚೆಂಚ. ಅವಳ ಕಣ್ಣು ಮಲ್ಲಿಗೆ ಹೂವಿನ ಥರ, ಕಿವಿ ಸಮಪಿಗೆ ಥರಾ, ತುಟಿ ಸೀಬೆ ಹಣ್ಣಿನ ಥರಾ &#8211; ಒಟ್ಟಿನಲ್ಲಿ ಆಕೆ ಮುಖ ಎದರಹಾಗಿದೆ ಅಂದ್ರೆ, ಅದು ಎದರ ಹಾಗೆ ಅಂತ ಹೇಳೋಕೆ ಆಗೋದೇ ಇಲ್ಲ ಪ್ರಭು.</p>
<p>ರಾಜ : ಅಂದ್ರೆ ಅವಳು ಅಷ್ಟು ಚೆಂದ ಇದ್ದಾಳಂತೀಯಾ?</p>
<p>ಕಾರಭಾರಿ : ಅಯ್ಯೋ ಅಯ್ಯೋ!</p>
<p>ರಾಜ : ಮೂರ್ಖ, ಮತ್ತೆ ನಾವು ಹ್ಯಾಗಿದೀವಿ?</p>
<p>ಕಾರಭಾರಿ : ಅವಳು ಚೆಂದ ಇದಾಳೆ. ತಾವು ಅವಳಿಗಿಂತ ಚೆಂದ ಇದ್ದೀರಿ.</p>
<p>ರಾಜ : ಅವಳ ನಡು?</p>
<p>ಕಾರಭಾರಿ : ತೆಳ್ಳಗಿದೆ. ನಿಮ್ಮದು ಅವಳಿಗಿಂತ ತೆಳ್ಳಗಿದೆ.</p>
<p>ರಾಜ : ಅವಳ ಮುಖ?</p>
<p>ಕಾರಭಾರಿ : ದಾಸವಾಳದ ಹೂವಿನ ಹಾಗೆ, ನಿಮ್ಮದು ಕಮಲದ ಹಾಗೆ.</p>
<p>ರಾಜ : ಮತ್ತೇ?</p>
<p>ಕಾರಭಾರಿ : ಏನೇನು ಮಾತಾಡಿಕೊಂಡ್ವಿ ಗೊತ್ತಾ ಪ್ರಭು?</p>
<p>ರಾಜ : ನಮ್ಮ ಬಗ್ಗೆ? ಏನೇನು?</p>
<p>ಕಾರಭಾರಿ : ನಮ್ಮ ರಾಜರು ಎಷ್ಟು ಒಳ್ಳೆಯವರು! ಎಷ್ಟು ಗಂಭೀರ! ಎಷ್ಟು ಧೀರ! ಎಷ್ಟು ಶೂರ!</p>
<p>ರಾಜ : ಅಂದಳಾ?</p>
<p>ಕಾರಭಾರಿ : ಅವಳಲ್ಲ ನಾನಂದೆ.</p>
<p>ರಾಜ : ಅವಳೇನಂದಳು?</p>
<p>ಕಾರಭಾರಿ : ಕೇಳಿದಳಷ್ಟೇ</p>
<p>ರಾಜ : ಮತ್ತೆ, ನೀ ಏನೂ ಹೇಳಲಿಲ್ವ?</p>
<p>ಕಾರಭಾರಿ : ಬಂದೆ ಬಂದೆ. ಅದನ್ನೇ ಹೇಳೋಣಾಂತಿದ್ದೆ.ದ ನೀವಂದ್ರೆ ಅವಳಿಗೆ ಪ್ರಾಣ ಏನ್ಹೇಳಿ?</p>
<p>ರಾಜ : ಪ್ರಾಣ! ವಯಸ್ಸಿನ ಬಗ್ಗೆ ಏನಾದರೂ ಅಂದಳಾ?</p>
<p>ಕಾರಭಾರಿ : ಛೇ ನಿಮ್ಮ ನ್ನೋಡಿದರೆ ಮದುವೆ ಆಗಿದೆಯಾ ಸ್ವಾಮಿ ಅಂತ ಕೇಳೋಣ ಅನ್ಸತ್ತೆ.</p>
<p>ರಾಜ : ಹೌದಾ? ಹಾಗನ್ನಿಸತ್ತಾ?</p>
<p>ಕಾರಭಾರಿ : ಈ ವಯಸ್ಸಿನಲ್ಲೂ ಹೀಗೆ ಕಾಣುತ್ತೀರಲ್ಲ ಪ್ರಭು!</p>
<p>ರಾಜ : ಈ ವಯಸ್ಸಿನಲ್ಲೂ ಅಂದ್ರೆ? ಏನು ಮಹಾ ನನಗಾಗಿರೋದು? ಅಬ್ಬಬ್ಬಾ ಅಂದ್ರೆ ಅರವತ್ತಾಯ್ತಷ್ಟೆ.</p>
<p>ಕಾರಭಾರಿ : ಅರವತ್ತಾ? ಛೇ, ಛೇ. ನಿಮ್ಮನ್ನೋಡಿದರೆ ಇಪ್ಪತ್ತು ತಪ್ಪಿದರೆ ಹದಿನೈದಾಗಿರ ಬಹುದು ಅನ್ನಿಸುತ್ತೆ.</p>
<p>ರಾಜ : ಅವಳ ತಂದೆ ಏನಾದರೂ ಅಂದನಾ?</p>
<p>ಕಾರಭಾರಿ : ಅಂದರೆ?</p>
<p>ರಾಜ : ಇದು ಇಜ್ಜೋಡಾಯ್ತು&#8230;. ಅಂತ ಹೀಗೇನಾದರೂ?</p>
<p>ಕಾರಭಾರಿ : ಛೀ ಛೀ! ನಿಜ ಹೇಳತೀನಿ ಪ್ರಭು; ಆ ಇಡೀ ಮನೆತನಕ್ಕೆ ಮುದುಕರ ಖಯಾಲಿ ಇರೋ ಹಾಗಿದೆ. ಅವರ ಮನೇಲಿ ಯಾರಯ್ಯಾ ಫೋಟೋ ಇವೆ ಅಂದಿರಿ? ಅಮಿತಾಬ್ ಬಚ್ಚನ್, ರಾಜಕುಮಾರ ಇಂಥ ಪಡ್ಡೆ ಹುಡುಗರದು ಒಂದೂ ಕೇಳಬೇಡಿ. ಜನಕರಾಜ, ಭೀಷ್ಮ, ಗಾಂಧಿ, ಟಾಲ್ ಸ್ಟಾಯ್, ವ್ಯಾಸ, ದುರ್ವಾಸ ಎಲ್ಲ ಮುದುಕರ ಫೋಟೋಗಳೇ!</p>
<p>ರಾಜ : ಹೌದಾ? ಅದ್ಭುತ; ಒಳ್ಳೆ ಸುಸಂಸ್ಕೃತಿ ಇದೆ ಅಂತ ಆಯ್ತು.</p>
<p>ಕಾರಭಾರಿ : ಮತ್ತೆ, ನಾ ಹೆಂಗಸಾಗಿದ್ರೂ ಅಷ್ಟೆ. ಹುಡುಗರನ್ನ ಕಣ್ಣೆತ್ತಿ ನೋಡುತ್ತಿರಲಿಲ್ಲ. ಬರೀ ನಿಮ್ಮಂಥ ಮುದುಕರನ್ನೇ ಇಷ್ಟಪಡುತ್ತಿದೆ.ದ ಹುಡುಗರಲ್ಲಿ ಏನು ಇರತದೆ ಹೇಳಿ ಪ್ರಭು?</p>
<p>ರಾಜ : ಹೌದು ಹೌದು. ಅದ್ಯಾಕೆ ಆ ಹಾಳಾದ ಹುಡುಗೀರು, ಹುಡುಗರೂ ಅಂದ್ರೆ ಸಾಯ್ತಾರೋ ನಾ ಬೇರೆ ಕಾಣೆ.</p>
<p>ಕಾರಭಾರಿ : ಅದೇ ಪ್ರಭು, ಪಡ್ಡೆ ಹುಡುಗೇರು ಇದಾರಲ್ಲ, ಕೀಳು ಮನೆತನದವರು, ಅವರಷ್ಟೇ ಹಾಗೆ. ದೊಡ್ಡ ಮನೆತನದ ಹುಡುಗೇರನ್ನೋಡಿ &#8211; ಯಾವಾಗಲೂ ಮುದುಕರನ್ನೇ ನೋಡೋದು, ಅದೂ ನಿಮ್ಮಂಥವರನ್ನೆ; ಯಾಕಂದ್ರೆ ಸಂಸ್ಕೃತಿ ಇದೆ ನೋಡಿ&#8230;.</p>
<p>ರಾಜ : ಹಾಗಂತೀಯಾ?</p>
<p>ಕಾರಭಾರಿ : ಮತ್ತೇನು ಆರ್ಡಿನರಿ ಅಂದುಕೊಂಡಿರಾ ಪ್ರಭು? ನಿಮ್ಮ ಆಕಾರ ಏನು! ನಡಿಗೆ ಏನು! ನಿಂತರೆ ನಿಲುವೇನು; ಕೂತರೆ ಕುಲುವೇನು; ಬಿದ್ದರೆ ಬಿಲುವೇನು; ನಿಮ್ಮಲ್ಲೇನು ದೋಷವಿದೆ ಹೇಳಿ?</p>
<p>ರಾಜ : ಹೇಹೆ ಏನಿದೆ? ಆಗಾಗ ಒಂಚೂರು ಉಬ್ಬಸ ಬರುತ್ತೆ ಅಷ್ಟೆ.</p>
<p>ಕಾರಭಾರಿ : ಅಯ್ಯೋ, ಅಯ್ಯೋ, ಅಯ್ಯೋ ಅದೆಂಥಾ ಉಬ್ಬಸ ಬಿಡಿ, ಮಕ್ಕಳಿಗೂ ಇರುತ್ತೆ. ನಾನು ಸ್ವಥಾ ಸೋಡಿದ್ದೇನೆ : ಉಬ್ಬಸ ಪಡುವಾಗ ಎಷ್ಟು ಚೆನ್ನಾಗಿ ಕಾಣುತ್ತೀರಿ ಗೊತ್ತಾ ನೀವು? ನಮ್ಮಕ್ಕಳು ಈ ಹುಡುಗರು ಕೆಮ್ಮಲಿ ನಿಮ್ಮ ಹಾಗೆ ನೋಡೋಣ; ಹುಡುಗಾಟವಾ?</p>
<p>ರಾಜ : ಅವಳ ಹೆಸರೇನು?</p>
<p>ಕಾರಭಾರಿ : ಅವಳ ಹೆಸರು ಬಂಗಾರಿ ಅಂತ.</p>
<p>ರಾಜ : ಹೆಸರು ಚೆನ್ನಾಗಿದೆ. ಯಾವಾಗ ಬರತ್ತಾಳೆ?</p>
<p>ಕಾರಭಾರಿ : ಈಗಂದ್ರೆ ಈಗಲೇ.</p>
<p>ರಾಜ : ಬೇಡ ಬೇಡ ಮೊದಲು ರಾಜ ವೈದ್ಯನನ್ನು ಕರಕೊಂಬಾ.</p>
<p>ಕಾರಭಾರಿ : ತಮ್ಮ ಆರೋಗ್ಯ ಚೆನ್ನಾಗೇ ಇದೆಯಲ್ಲಾ ಪ್ರಭು.</p>
<p>ರಾಜ : ಚೆನ್ನಾಗೇ ಇದೆ. ಕೆಲವು ಭಾಗಕ್ಕೆ ಜಾಸ್ತಿ ಆರೋಗ್ಯ ಬೇಕು. ಕಾರ್ಯಕ್ರಮ ನಾಳೆ ರಾತ್ರಿ ಇರಲಿ. ಪ್ರವಾಸಿ ಮಂದಿರದಲ್ಲಿ ಆದೀತೋ? ರಾತ್ರಿ ಹತ್ತು ಗಂಟೆಗೆ ನಾವು ಬರುತ್ತೇವೆ. ಎಲ್ಲಾ ಸರಿಯಾದ ವ್ಯವಸ್ಥೆ ಆಗಿರಬೇಕು. ಆ ನನ್ಮಕ್ಕಳು ಬಿಳಿಆನೆ, ಚಿಲ್ರೆ ಇದ್ದಾರಲ್ಲಾ-ಅವರಿಗೆ ಹೇಳಿ ವ್ಯವಸ್ಥೆ ಮಾಡು. ವ್ಯವಸ್ಥೆಯಲ್ಲಿ ಏನಾದರೂ ಯಪರಾ ತಪರಾ ಆದರ ಮಗನೆ, ನಾವು ಯಾರನ್ನೂ ಕ್ಷಮಿಸೋದಿಲ್ಲ. <em>(</em><em>ಹೋಗುವನು</em><em>)</em><em></em></p>
<p><em>ಕಾರಭಾರಿ :</em> ಯಾರಲ್ಲಿ? <em>(</em><em>ಚಾರ</em><em> </em><em>ಬರುವನು</em><em>)</em><em></em></p>
<p><em>ಚಾರ :</em> ಸ್ವಾಮಿ ಏನಪ್ಪಣೆ?</p>
<p>ಕಾರಭಾರಿ : ಬೀಳಿ ಆನೇನ್ನ ಕರಿ. <em>(</em><em>ಕರೆದುಕೊಂಡು</em><em> </em><em>ಬರುವನು</em><em>)</em><em></em></p>
<p><em>ಕಾರಭಾರಿ :</em> ಬೀಡಯ್ಯಾ ಬಿಳಿ ಆನೆ, ನಾಳೆ ರಾತ್ರಿ ಪ್ರವಾಸಿ ಮಂದಿರದಲ್ಲಿ ರಾಜರಿಗೆ ಬೇಕಾದವರು ಯಾರೋ ಬರುತ್ತಾರೆ. ಸರಿಯಾಗಿ ವ್ಯವಸ್ಥೆ ಮಾಡು.<br />
<em>(</em><em>ಕಾರಭಾರಿ</em><em> </em><em>ಹೋಗುವನು</em><em>. </em><em>ಬಿಳಿ</em><em> </em><em>ಆನೆ</em><em> </em><em>ತನ್ನ</em><em> </em><em>ಜೇಬಿನಲ್ಲಿಯ</em><em> </em><em>ಕಲಿಂಗ್</em><em> </em><em>ಬೆಲ್</em><em> </em><em>ತೆಗೆದು</em><em> </em><em>ಒತ್ತುವನು</em><em>. </em><em>ಚಿಲ್ರೆ</em><em> </em><em>ಬರುವನು</em><em>)</em><em></em></p>
<p><em>ಬಿಳಿ ಆನೆ :</em> ಯೋ&#8230;. ಬೇಕಾದವರು ಯಾರೋ ಬರತಾರೆ ನಾಳೆ ರಾತ್ರಿ, ಪ್ರವಾಸಿ ಮಮದಿರಕ್ಕೆ. ಸರಿಯಾಗಿ ವ್ಯವಸ್ಥೆ ನೋಡಿಕೊ.<br />
<em>(</em><em>ಬಿಳಿ ಆನೆ ಹೋಗುವನು. ಚಿಲ್ಲರೆ ತನ್ನ ಜೇಬಿನಲ್ಲಿಯ ಕಾಲಿಂಗ್ ಬೆಲ್ ಒತ್ತುವನು. ಅದು ಧ್ವನಿ ಮಾಡುವುದಿಲ್ಲವಾದ್ದರಿಂದ ತೆಗೆದುಕೊಂಡು ಒಳಗೆ ಹೋಗುವನು.)<br />
</em></p>
]]></content:encoded>
			<wfw:commentRss>http://kanaja.in/%e0%b2%b8%e0%b2%be%e0%b2%82%e0%b2%ac%e0%b2%b6%e0%b2%bf%e0%b2%b5-%e0%b2%aa%e0%b3%8d%e0%b2%b0%e0%b2%b9%e0%b2%b8%e0%b2%a8-%e0%b2%a6%e0%b3%83%e0%b2%b6%e0%b3%8d%e0%b2%af-%e0%b3%ad/feed/</wfw:commentRss>
		<slash:comments>0</slash:comments>
		</item>
	</channel>
</rss>

<!-- Performance optimized by W3 Total Cache. Learn more: http://www.w3-edge.com/wordpress-plugins/

Page Caching using disk: enhanced

Served from: kanaja.in @ 2013-05-26 07:34:35 -->