ಪುಸ್ತಕಗಳಿಂದ : ಪ್ರಕಾಶನ : ಸಹಜ ಸಮೃದ್ಧ : ಲೇಖಕರು: ಜಿ. ಕೃಷ್ಣಪ್ರಸಾದ್, ಶಿವಾನಂದ ಕಳವೆ : ಅನ್ನ ಕೊಡುವ ಅನನ್ಯ ತೋಟ ತದ್ರೂಪಿ ಕಾಡು
Thursday, March 24th, 2011ಕಾಡಿನಲ್ಲಿ ಕೃಷಿಕರು, ಭತ್ತದ ತೆನೆಯಲ್ಲಿ ಗಿಳಿಹಿಂಡುಹೊಲದಲ್ಲಿ ಗಿಡ ಬೆಳೆಸಿರಿ, ಕೃಷಿ ಅರಣ್ಯದಿಂದ ಅಭಿವೃದ್ಧಿ ಸಾಧಿಸಿರಿ ಎಂದು ಮಾತಾಡುತ್ತಿದ್ದೆ. ರೈತರೊಬ್ಬರು ತಕ್ಷಣ ಎದ್ದು ನಿಂತರು. ಹೊಲದಾಗ ಯಾವ ಗಿಡಾನೂ ಇರಬಾರ್ದ್ರಿ. ಅದ್ಕೆ ನಾನು ಎಲ್ಲಾ ಕಡಿದು ಹಾಕೇನ್ರೀ ಎಂದು ಹಸಿರು ಸಂಹಾರದ ಸಾಹಸ ಹೇಳಿದರು. ಉತ್ತರ ಕನ್ನಡದ ಬನವಾಸಿಯ ಅಂಡಗಿ ಹಳ್ಳಿಯ ಕೃಷಿಕರಿಗೆ ಕಾಡು ಗಿಳಿಗಳ ಮೇಲೆ ಸಿಟ್ಟು. ಹೊಲದ ಗಿಡದಲ್ಲಿ ಕುಳಿತ ಗಿಳಿಗಳು ಪಟ್ಟನೆ ಭತ್ತದ ಕದಿರನ್ನು ಹೊತ್ತು ಒಯ್ಯುತ್ತವೆ. ದಿನವಿಡೀ ಹೊಲದ ತೆನೆ ಗಿಳಿಪಾಲಾಗುತ್ತದೆ ಎಂಬ [...]



